Politics

ಕನಕಗಿರಿ ಮಾಜಿ ಶಾಸಕರ ವಿವಾಹ ವಿಚಾರ ಮತ್ತೆ ಮುನ್ನಲೆಗೆ! ಡಿಡಿ ಶ್ವೇತಾ ಉಪಲೋಕಾಯುಕ್ತರ ಮುಂದೆ ಸ್ಫೋಟಕ ಹೇಳಿಕೆ

2022ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ದಡೇಸುಗೂರು ಅವರ ಆಡಿಯೋ ಮತ್ತೆ ಸಂಚಲನ ಮೂಡಿಸಿರುವ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆ ವೇಳೆಗೆ ಭಾರೀ ವಿವಾದ ಸೃಷ್ಟಿಸಿದ್ದ ಆ ಮಾಧ್ಯಮದ ಸಂಭಾಷಣೆಯು ಈಗ ಮತ್ತೊಮ್ಮೆ ಪ್ರಸ್ತಾಪಕ್ಕೆ ಬಂದಿದೆ.

ಶಾಸಕರ ನಿರಾಕರಣೆ, ಆದರೆ ಈಗ ಅಧಿಕೃತ ಒಪ್ಪಿಗೆ?

2022ರಲ್ಲಿ ದಡೇಸುಗೂರು ಅವರ ಹೆಸರಿನಲ್ಲಿ ವೈರಲ್ ಆದ ಆಡಿಯೋಗೆ ಅವರು ತಕ್ಷಣವೇ ಸ್ಪಷ್ಟನೆ ನೀಡಿದ್ದು, ಅದು ತಮ್ಮದು ಅಲ್ಲ ಎಂದು ಹೇಳಿದ್ದರು. ಆದರೆ, ಈಗ ವಿಜಯನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಉಪಲೋಕಾಯುಕ್ತರ ಮುಂದೆ ಬಸವರಾಜ್ ದಡೇಸುಗೂರು ಅವರೇ ತಮ್ಮ ಪತಿ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ, ಈ ಪ್ರಕರಣಕ್ಕೆ ಹೊಸ ಮೈಲಿಗಲ್ಲು ಸೇರಿದಂತಾಗಿದೆ.

ಆಡಿಯೋ ಹಿನ್ನಲೆ: ಲವ್ ಕಂಆರೆಂಜ್ ಮ್ಯಾರೇಜ್?

ಅಂದು ಕೇವಲ ಆಡಿಯೋ ಮಾತ್ರವಿತ್ತು, ಆದರೆ ಈಗ ಡಿಡಿ ಶ್ವೇತಾ ಅವರ ಹೇಳಿಕೆಯಿಂದ ಅವರ ಸಂಬಂಧ ಅಧಿಕೃತವಾಗಿದೆ ಎಂಬ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿವೆ. 2022ರಲ್ಲಿ ಪ್ರಚಲಿತವಾಗಿದ್ದ ಈ ಪ್ರೇಮಕಥೆ ಇದೀಗ ಮದುವೆಯಾಗಿ ಪರಿವರ್ತನೆಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಪಲೋಕಾಯುಕ್ತರ ಮುಂದೆ ಬಯಲಾಯ್ತು ನಿಜ?

ಬಸವರಾಜ್ ದಡೇಸುಗೂರು, ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಕಾರಣ, ಈ ವಿಷಯವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಉಪಲೋಕಾಯುಕ್ತ ವೀರಪ್ಪ ಅವರ ವಿಚಾರಣೆಯ ವೇಳೆ, ಶ್ವೇತಾ ಅವರೇ “ಬಸವರಾಜ್ ದಡೇಸುಗೂರು ನನ್ನ ಪತಿ” ಎಂದು ಸ್ಪಷ್ಟವಾಗಿ ಉತ್ತರಿಸಿದಂತೆ ವರದಿಯಾಗಿದೆ. ಇದಲ್ಲದೆ, ಈ ಕುರಿತು ಈಗ ವಿಡಿಯೋ ಕೂಡ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.

ಶಾಸಕರ ಮೌನ: ಮದುವೆ ಸತ್ಯವೋ?

2022ರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ವಿಚಾರಕ್ಕೆ ಇದೀಗ ಮತ್ತೊಮ್ಮೆ ಪ್ರಾಮುಖ್ಯತೆ ದೊರೆತಿದೆ. ಆದರೆ, ಈ ಕುರಿತಾಗಿ ಬಸವರಾಜ್ ದಡೇಸುಗೂರು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಮೌನದಿಂದ ಜನರಲ್ಲಿ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ—ಅವರು ಗುಪ್ತವಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆಯಾ? ಮದುವೆಯಾಗಿದ್ದರೂ ಇದನ್ನು ಬಹಿರಂಗಪಡಿಸದೇ ಇರಲು ಕಾರಣವೇನು?

ಈ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ.

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago