
ಇಂಡಿ, ಜೂನ್ 12: ಇಂಡಿ ವಲಯದ ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 4.05 ಲೀಟರ್ ಅಕ್ರಮವಾಗಿ ಸಂಗ್ರಹಿಸಿದ ಮಧ್ಯವನ್ನು ಜಪ್ತಿ ಮಾಡಲಾಗಿದೆ. ಈ ದಾಳಿ ಜೂನ್ 12ರಂದು ಮಧ್ಯಾಹ್ನ 1:50ಕ್ಕೆ ನಡೆದಿದ್ದು, ಶಬ್ಬೀರ್ ಮೊಲಾಸಾಬ್ ಮುಲ್ಲಾ ಎಂಬುವರ ನಿವಾಸದಲ್ಲಿ ಅಕ್ರಮ ಮದ್ಯ ಭಂಡಾರ ಪತ್ತೆಯಾಗಿದೆ.
ಆರೋಪಿ ಶಬ್ಬೀರ್ ಮೊಲಾಸಾಬ್ ಮುಲ್ಲಾ (ಸಾ. ಹಾಲಳ್ಳಿ) ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇಂಡಿ ವಲಯದ ಅಬಕಾರಿ ನಿರೀಕ್ಷಕರಾದ ರಾಹುಲ್ ಎಸ್. ನಾಯಕ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕ ವಾದಿರಾಜ್ ಎನ್. ಆಶ್ರಿತ್ ಅವರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಅಬಕಾರಿ ಸಿಬ್ಬಂದಿಯಾದ ಅಶೋಕ್ ಎಸ್. ಗೊಣಸಗಿ, ಶಿವಾನಂದ ಎಸ್. ಕೊಡತೆ, ಮಂಜುನಾಥ್ ಬಡಿಗೇರ್, ಬಸವಂತ ಬೈರಗೊಂಡ, ಮಲ್ಲಪ್ಪ ಬಿರಾದಾರ್ ಹಾಗೂ ಲಾಳೇಮಶಾಕ್ ಮಸಳಿ ಭಾಗವಹಿಸಿದ್ದರು.
ಅಬಕಾರಿ ಇಲಾಖೆ ವಿರುದ್ಧ ಶಕ್ತಿಯುತ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ದಾಳಿಗಳು ಮುಂದುವರೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.