
ಹಲ್ಯಾಳ: ಪಟ್ಟಣದ ಶಿವಯೋಗಿ ವೃತ್ತದಲ್ಲಿ ರಸ್ತೆ ಬದಿ ವಾಹನದೊಂದಿಗೆ ನಿಂತಿದ್ದ ಸೈನಿಕನಿಗೆ ಪೋಲಿಸರಿಂದ ಅವಮಾನಕಾರಿ ವರ್ತನೆ ನಡೆಯಿತು. ಅಪರಿಚಿತ ಕಾರಣಕ್ಕಾಗಿ ಪೊಲೀಸರು ಯೋಧನೊಂದಿಗೆ ಏಕವಚನದಲ್ಲಿ ಮಾತನಾಡಿದ ಸಂದರ್ಭ, ಯೋಧನು “ಗೌರವದಿಂದ ಮಾತನಾಡಿ” ಎಂದು ವಿನಂತಿಸಿದಾಗ ವಾಗ್ವಾದವು ಉಲ್ಬಣಗೊಂಡಿತು.
ಸಮಾಲೋಚನೆಯಿಂದ ಮುಂದೆ ಪೊಲೀಸ್ ಅಧಿಕಾರಿಗಳು ಸೈನಿಕ ಮಲ್ಲಿಕಾರ್ಜುನ ಪಾಟೀಲ ಅವರನ್ನು ನಡುರಸ್ತೆಯಲ್ಲೇ ಥಳಿಸಿ, ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ಮತ್ತೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋಗಳು ಮತ್ತು ಸ್ಥಳೀಯರ ಪ್ರತಿಕ್ರಿಯೆಗಳಿಂದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಯಿತು.
ಈ ಘಟನೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ, ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ಹಲ್ಲೆಗೊಳಗಾದ ಸೈನಿಕನಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದರು.
ಘಟನೆಯ ಕುರಿತು ಪ್ರತಿಕ್ರಿಯೆ:
ಘಟನೆಗೆ ಪ್ರತಿಕ್ರಿಯಿಸಿದ ಯೋಧ ಮಲ್ಲಿಕಾರ್ಜುನ ಪಾಟೀಲ, “ನಾವು ದೇಶದ ರಕ್ಷಣೆಗಾಗಿ ಸೇವೆ ಮಾಡುತ್ತೇವೆ. ಆದರೆ ಸ್ಥಳೀಯ ಮಟ್ಟದಲ್ಲಿ ನಮಗೆ ಅಗೌರವ ತೋರಿದ ಘಟನೆ ನೋವಿನಾಯಕವಾಗಿದೆ,” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಗುರಪ್ಪಾ ಮಗದುಮ್ ಅವರು, “ಯೋಧರು ದೇಶಕ್ಕಾಗಿ ಜೀವಪಣ ತೊಡಗುತ್ತಾರೆ. ಅವರ ಸೇವೆಗೆ ಗೌರವ ಕೊಡಬೇಕಾದಲ್ಲಿ, ಪೋಲಿಸರಿಂದ ಈ ರೀತಿಯ ವರ್ತನೆ ನಾಚಿಕೆಗೇಡಿನ ಸಂಗತಿ. ಘಟನೆಯನ್ನು ಖಂಡಿಸುತ್ತೇವೆ. ಪೋಲಿಸರು ಬಹಿರಂಗ ಕ್ಷಮೆಯಾಚಿಸಿದ್ದರಿಂದ ನಾವು ಮುತ್ತಿಗೆ ಹಿಂಪಡೆಯಲು ನಿರ್ಧರಿಸಿದ್ದೇವೆ,” ಎಂದು ತಿಳಿಸಿದರು.
ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ವರ್ತನೆಗೆ ವಿರೋಧ ವ್ಯಕ್ತಪಡಿಸುವ ಧ್ವನಿಗಳು ಮೂಡಿಬಂದಿವೆ.