Latest

ಕಸ ವಿಚಾರದಲ್ಲಿ ವೃದ್ಧೆಗೆ ಕಂಬಕ್ಕೆ ಕಟ್ಟಿ ಹಲ್ಲೆ: ಶಿವಮೊಗ್ಗದ ಗೌತಮಪುರದಲ್ಲಿ ತೀವ್ರ ಆಕ್ರೋಶ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಹೋಬಳಿಯ ಗೌತಮಪುರ ಗ್ರಾಮದಲ್ಲಿ ಮಾನವೀಯತೆಯನ್ನು ನಿರ್ಲಜ್ಜವಾಗಿ ಹಿಂಗೋಳಿಸುವಂತಹ ಘಟನೆ ನಡೆದಿದೆ. ಕೇವಲ ಮನೆಯ ಮುಂದೆ ಕಸ ಹಾಕಿದ ಕುರಿತು ಕೇಳಿದ್ದಕ್ಕೆ 67 ವರ್ಷದ ವೃದ್ಧೆ ಮೇಲೆ ತೀವ್ರ ಹಲ್ಲೆ ನಡೆಸಿದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಹುಚ್ಚಮ್ಮ ಎಂಬ ವೃದ್ಧೆ ಅವರು ತಮ್ಮ ಮನೆಯ ಮುಂದಿನ ಸ್ಥಳದಲ್ಲಿ ಕಸ ಹಾಕುತ್ತಿದ್ದ ಪ್ರೇಮ ಎಂಬ ಮಹಿಳೆಯನ್ನು ಪ್ರಶ್ನಿಸಿದ್ದರು. ಈ ಸರಳ ಪ್ರಶ್ನೆಕೆ ಆಕ್ರೋಶಗೊಂಡ ಪ್ರೇಮ ಮತ್ತು ಅವರ ಬೆಂಬಲಿಗರಾದ ಮಂಜುನಾಥ್ ಹಾಗೂ ದರ್ಶನ್ ಎಂಬ ಇಬ್ಬರು ಯುವಕರು ಹುಚ್ಚಮ್ಮ ಅವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ, ಹಗ್ಗದಿಂದ ಕಂಬಕ್ಕೆ ಕಟ್ಟಿಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ಅಮಾನವೀಯ ದುರಾಚಾರದ ದೃಶ್ಯಗಳು ಮೊಬೈಲ್ ಮೂಲಕ ದೃಶ್ಯೀಕರಿಸಿ ಹರಡಿದ್ದು, ಅದು ಸಾರ್ವಜನಿಕರಲ್ಲಿ ತೀವ್ರ ಕೋಪ ಹಾಗೂ ಬೇಸರಕ್ಕೆ ಕಾರಣವಾಗಿದೆ.

ಹಲ್ಲೆಯಿಂದ ಆಘಾತಕ್ಕೊಳಗಾದ ಹುಚ್ಚಮ್ಮ ಅವರು ಆನಂದಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರ ಪುತ್ರ ಕನ್ನಪ್ಪ, “ನನ್ನ ತಾಯಿಗೆ ನ್ಯಾಯ ಸಿಗಬೇಕು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂಬ ಮನವಿಯನ್ನು ಮಾಡಿಕೊಂಡಿದ್ದಾರೆ.

ಆನಂದಪುರ ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯ ಪ್ರಕಾರ, ಇಂತಹ ಕ್ರೂರತೆ ಸಾಮಾಜಿಕ ಮೌಲ್ಯಗಳ ಹೀನಾಯ ಸಂಕೇತವಾಗಿದೆ ಮತ್ತು ಆರೋಪಿಗಳಿಗೆ ಗಂಭೀರ ಶಿಕ್ಷೆ ಅಗತ್ಯವಾಗಿದೆ.

 

nazeer ahamad

Recent Posts

ಬಿಗ್ ಬಾಸ್ ಕನ್ನಡ 12ಕ್ಕೆ ಕಿಚ್ಚ ಸುದೀಪ್ ರೀಎಂಟ್ರಿ.!: ಅಧಿಕೃತವಾಗಿ ಘೋಷಿಸಿದ ತಂಡ”

ಕನ್ನಡದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಬಿಗ್ ಬಾಸ್ ತನ್ನ 12ನೇ ಆವೃತ್ತಿಗೆ ಸಜ್ಜಾಗುತ್ತಿದೆ. ಈ ಬಾರಿ ಅಭಿಮಾನಿಗಳ…

28 minutes ago

ಜುಲೈ 1ರಿಂದ ಬೆಂಗಳೂರು ಟೋಲ್ ದರಗಳಲ್ಲಿ ಇಳಿಕೆ ಅಲ್ಲ, ಏರಿಕೆ!

ಬೆಂಗಳೂರು, ಜೂನ್ 30: ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಟೋಲ್‌ ಗೇಟ್‌ಗಳಲ್ಲಿ ಮತ್ತೊಂದು ಬಡಿತ ಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)…

47 minutes ago

ಪ್ರೇಮದ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಎನ್.ಆರ್.ಪುರದಲ್ಲಿ ಆರೋಪಿ ಬಂಧನ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವಂತೆ ನಂಬಿಸಿ, ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ನಿರಂತರ ಲೈಂಗಿಕ ದೌರ್ಜನ್ಯ…

3 hours ago

ಕ್ಷಮೆಪತ್ರದ ಹಿನ್ನೆಲೆ: ಮಡೆನೂರು ಮನು ಮೇಲೆ ಹೇರಿದ್ದ ನಿಷೇಧ ಹಿಂತೆಗೆದುಕೊಳ್ಳಲು ಚಿತ್ರರಂಗದ ತೀರ್ಮಾನ

ಕಾಮಿಡಿ ಶೋಗಳ ಮೂಲಕ ಮನೆಮಾತಾದ ಮಡೆನೂರು ಮನು ಇತ್ತೀಚೆಗೆ ತೀವ್ರ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಗೆಳತಿಯೊಬ್ಬರು ಅವರ ಮೇಲೆ ಅತ್ಯಾಚಾರದ ಆರೋಪ…

4 hours ago

ಅಪರಿಚಿತ ವಾಹನ ಡಿಕ್ಕಿ: ತಿರುಪತಿ ಯಾತ್ರೆಯಿಂದ ವಾಪಸ್ಸಾಗುತ್ತಿದ್ದ ಮೂವರು ದುರ್ಮರಣ

ಮದನಪಲ್ಲಿ (ಆಂಧ್ರಪ್ರದೇಶ), ಜೂನ್ 30: ತಿರುಪತಿ ದೇಗುಲದಿಂದ ಹಿಂದಿರುಗುತ್ತಿದ್ದ ಭಕ್ತರ ವಾಹನ ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡ ದಾರುಣ…

8 hours ago

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಮುಖಾಮುಖಿ ಡಿಕ್ಕಿ: ಕುಟುಂಬದ ನಾಲ್ವರು ದುರ್ಮರಣ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ…

20 hours ago