Crime

“ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಲಂಚಕ್ಕೆ ಡಿಮ್ಯಾಂಡ್, ಠಾಣೆಯಲ್ಲಿ ಹಲ್ಲೆ – ಪೊಲೀಸರ ವಿರುದ್ಧ ಗಂಭೀರ ಆರೋಪ!”

ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಪೊಲೀಸರು ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವೊಂದು ಮಾಡಲಾಗಿದೆ. ವಾಹನ ಸವಾರನೊಬ್ಬ, ಪೊಲೀಸ್ ಅಧಿಕಾರಿಗಳು ₹3 ಸಾವಿರ ಲಂಚಕ್ಕೆ ಒತ್ತಾಯಿಸಿದರು, ನಗದು ಕೊಡಲು ಸಾಧ್ಯವಿಲ್ಲ, ಗೂಗಲ್ ಪೇ ಮಾಡುತ್ತೇನೆ ಎಂದಾಗ ನಿರಾಕರಿಸಿದರು ಎಂದು ದೂರು ನೀಡಿದ್ದಾರೆ.

ಲಂಚದ ಬೇಡಿಕೆ ಆರೋಪ

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು, ಅದನ್ನು ಕೋರ್ಟ್‌ನಲ್ಲಿ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ವಿಜಯನಗರ ಸಂಚಾರಿ ಠಾಣೆ ಪೊಲೀಸರು ನೇರವಾಗಿ ಹಣ ಕೇಳಿದರಂತೆ. ಈಶ್ವರ್ ಎಂಬ ಬೈಕ್ ಸವಾರನ ಪ್ರಕಾರ, ಮಾರ್ಚ್ 14ರ ರಾತ್ರಿ ಜಿಟಿ ಮಾಲ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆರ್‌ಎಕ್ಸ್ ಬೈಕ್‌ನಲ್ಲಿ ಮದ್ಯ ಸೇವಿಸಿ ಬರುತ್ತಿದ್ದ ಈಶ್ವರ್ ಅವರನ್ನು ತಡೆದು, “₹10 ಸಾವಿರ ದಂಡ ಆಗುತ್ತದೆ, ₹3 ಸಾವಿರ ನೀಡಿದರೆ ಬಿಟ್ಟುಕೊಡುತ್ತೇವೆ” ಎಂದು ತಿಳಿಸಿದ್ದರಂತೆ.

ಈಶ್ವರ್ ನಗದು ಇಲ್ಲವೆಂದು ಗೂಗಲ್ ಪೇ ಮಾಡಲು ಯತ್ನಿಸಿದಾಗ, ಪೊಲೀಸರು ಕೇವಲ ನಗದು ಬೇಕು ಎಂದು ಒತ್ತಾಯಿಸಿದ್ರಂತೆ. ಈಶ್ವರ್ ಕೋರ್ಟ್‌ನಲ್ಲಿ ಪೂರ್ಣ ದಂಡ ಪಾವತಿಸುತ್ತೇನೆ ಎಂದಾಗ, ಅವರ ಬೈಕ್ ಅನ್ನು ಠಾಣೆಗೆ ವಾಪಸು ತೆಗೆದುಕೊಂಡು ಹೋಗಿದ್ದಾರೆ.

ಠಾಣೆಯಲ್ಲಿ ಹಲ್ಲೆ ಆರೋಪ

ಮಾರ್ಚ್ 15ರಂದು ಕೋರ್ಟ್‌ನಲ್ಲಿ ₹13 ಸಾವಿರ ದಂಡ ಪಾವತಿಸಿದ ಈಶ್ವರ್, ಮಾರ್ಚ್ 16ರಂದು ತನ್ನ ಸ್ನೇಹಿತನೊಂದಿಗೆ ಬೈಕ್ ವಾಪಸು ಪಡೆಯಲು ವಿಜಯನಗರ ಸಂಚಾರಿ ಪೊಲೀಸ್ ಠಾಣೆಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ, ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ರಂತೆ.

ಆಸ್ಪತ್ರೆಯಿಂದ ವಿಡಿಯೋ ಮೂಲಕ ದೂರು
ಈಶ್ವರ್ ಹಲ್ಲೆಯ ಬಗ್ಗೆ ವಿಡಿಯೋ ಮಾಡಿದ್ದು, “ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ ನಿಂದ ಒದ್ದಿದ್ದಾರೆ. ಹಲ್ಲೆಯಿಂದ ನಾನು ಅಸ್ವಸ್ಥನಾಗಿದ್ದೆ, ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯಿಂದ ತನಿಖೆ

ಈ ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ವರದಿ ಕೇಳಿದ್ದಾರೆ. ಎಸಿಪಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಭ್ರಷ್ಟರ ಬೇಟೆ

Recent Posts

ಆರ್ಥಿಕ ಸಂಕಷ್ಟದಿಂದ ಆಘಾತಕರ ನಿರ್ಧಾರ: ಮಗುವಿಗೆ ಇಲಿ ಪಾಷಾಣವಿಲ್ಲಿ ಟೀ ಕುಡಿಸಿ ತಾಯಿಯ ಆತ್ಮಹತ್ಯೆ ಯತ್ನ”

ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…

5 minutes ago

ವಿವಾಹೇತರ ಸಂಬಂಧದ ದುರಂತ ಅಂತ್ಯ: ನೆಲ್ಲೂರಿನಲ್ಲಿ ಪ್ರೇಮಿಯ ಹತ್ಯೆ.!

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಒಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆ ಪ್ರಕರಣದ ಹಿಂದೆ…

25 minutes ago

ಧರ್ಮಸ್ಥಳ: ಆರನೇ ಪಾಯಿಂಟ್ ನಲ್ಲಿ ಅಸ್ತಿಪಂಜರ ಪತ್ತೆ.

ಬೆಳ್ತಂಗಡಿ, ಜುಲೈ 31: ಧರ್ಮಸ್ಥಳದ ನಿಗೂಢ ಶವ ಹೂತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ಕ್ಕೆ…

2 hours ago

ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ: ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ವಿರುದ್ಧ ಅಕ್ರಮ ಆಸ್ತಿ ಪತ್ತೆ

ಕೊಪ್ಪಳ, ಜುಲೈ 31: ರಾಜ್ಯದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಹಿಂದೆ ಹೊರಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿದ್ದ ಕಳಕಪ್ಪ…

2 hours ago

ಶಾವಂತಗೇರಾ ಪಿಡಿಒ ಅಮಾನತು: ಮನರೇಗಾ ಬಿಲ್ ಪಾವತಿಯಲ್ಲಿ ನಿರ್ಲಕ್ಷ್ಯ ಆರೋಪ

ದೇವದುರ್ಗ: ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಪ್ರಭಾರದಲ್ಲಿದ್ದ ಗ್ರೇಡ್-2 ಕಾರ್ಯದರ್ಶಿ ಶಂಶುದ್ದೀನ್ ಅವರನ್ನು ಕರ್ತವ್ಯ ಲೋಪ ಮತ್ತು ಕಾರ್ಯನಿರ್ವಹಣೆಯಲ್ಲಿ ತೋರಿದ…

3 hours ago

ಧರ್ಮಸ್ಥಳ ಶವ ಹೂತು ಪ್ರಕರಣ: ಎಸ್‌ಐಟಿಗೆ ಮತ್ತಷ್ಟು ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ…

4 hours ago