Categories: CinemaLatest

“ಅಪ್ಪ-ಅಮ್ಮ ಜೊತೆಯಾಗಿರಲು ಆಗದಿದ್ದರೆ ಮಕ್ಕಳು ಮಾಡಿಕೊಳ್ಳಬೇಡಿ”: ಬಾಲ್ಯದ ನೋವು ಹಂಚಿಕೊಂಡ ಸಾತ್ವಿಕಾ ರಾವ್

ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಹಿರಿಯ ನಟಿ ರೇಖಾ ದಾಸ್ ಅವರ ಪುತ್ರಿ ಶ್ರಾವ್ಯಾ ರಾವ್, ಇದೀಗ ಸಾತ್ವಿಕಾ ರಾವ್ ಎಂಬ ಹೆಸರಿನಲ್ಲಿ ಚಿತ್ರರಂಗದಲ್ಲಿ ಹೊಸ ಆರಂಭ ಮಾಡಿದ್ದಾರೆ. ಈ ಹಿಂದೆ ನಾಯಕಿಯಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಗದ ಕಾರಣ ಹೆಸರು ಬದಲಿಸಿಕೊಂಡಿರುವ ಅವರು, ಇತ್ತೀಚೆಗೆ ಬಿಡುಗಡೆಯಾದ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಇತ್ತೀಚೆಗೆ SumanTV Kannada ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಾತ್ವಿಕಾ ತಮ್ಮ ಬಾಲ್ಯದ ಕಹಿ ಅನುಭವಗಳನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ. ಪೋಷಕರ ವಿಚ್ಛೇದನದಿಂದ ತಾವು ಅನುಭವಿಸಿದ ಮಾನಸಿಕ ನೋವು ಇನ್ನೂ ಮರೆಯಲಾಗಿಲ್ಲ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ಸಾತ್ವಿಕಾ ಹುಟ್ಟಿದ ಕೆಲವೇ ದಿನಗಳಲ್ಲಿ ಓಂ ಪ್ರಕಾಶ್ ರಾವ್ ಮತ್ತು ರೇಖಾ ದಾಸ್ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟಿದ್ದರು. ಬಾಲ್ಯದ ಕೆಲವು ವರ್ಷ ತಂದೆಯೊಂದಿಗೆ ಕಳೆದ ಸಾತ್ವಿಕಾ, ನಂತರ ತಂದೆಯ ಎರಡನೇ ಮದುವೆಯನ್ನೂ ನೋಡಬೇಕಾಯಿತು. ಈ ಎಲ್ಲ ಬೆಳವಣಿಗೆಗಳು ತಮ್ಮ ಮನಸ್ಸಿನ ಮೇಲೆ ಆಳವಾದ ಗಾಯ ಬೀರಿದ್ದವು ಎಂದು ಅವರು ಹೇಳಿದ್ದಾರೆ.

“ಚಿಕ್ಕವಳಾಗಿದ್ದಾಗ ಯಾಕೆ ಅಪ್ಪನ ಮನೆ, ಯಾಕೆ ಅಮ್ಮನ ಮನೆ ಎಂದು ಅರ್ಥವಾಗುತ್ತಿರಲಿಲ್ಲ. ಇಬ್ಬರೂ ಜೊತೆಯಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗಿತ್ತು. ಅದು ನನ್ನ ಜೀವನದ ಮೊದಲ ಹಾರ್ಟ್ ಬ್ರೇಕ್,” ಎಂದು ಸಾತ್ವಿಕಾ ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ ಪೋಷಕರಿಗೆ ಅವರು ಭಾವನಾತ್ಮಕ ಮನವಿ ಮಾಡಿದ್ದಾರೆ. “ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಅಂದ್ರೆ ದಯವಿಟ್ಟು ಮಕ್ಕಳು ಮಾಡಿಕೊಳ್ಳಬೇಡಿ. ನಿಮ್ಮಿಬ್ಬರ ನಡುವಿನ ಸಮಸ್ಯೆಗಳಿಗಿಂತ ಮಕ್ಕಳ ಮನಸ್ಸಿನ ಮೇಲೆ ಆಗುವ ಪರಿಣಾಮ ಬಹಳ ದೊಡ್ಡದು. ಆ ಟ್ರಾಮಾ ಜೀವನಪೂರ್ತಿ ಕಾಡುತ್ತದೆ,” ಎಂದು ಹೇಳಿದ್ದಾರೆ.

ತಂದೆ ಮತ್ತು ತಾಯಿ ಇಬ್ಬರ ಮೇಲೂ ಸಮಾನ ಪ್ರೀತಿ ಇದ್ದ ಕಾರಣ, ಇಬ್ಬರ ನಡುವೆ ಸಿಲುಕಿಕೊಂಡ ಸ್ಥಿತಿ ತಮ್ಮನ್ನು ತುಂಬಾ ಕಾಡುತ್ತಿತ್ತು ಎಂದು ಸಾತ್ವಿಕಾ ವಿವರಿಸಿದ್ದಾರೆ. “15 ದಿನ ಅಪ್ಪನ ಮನೆ, 15 ದಿನ ಅಮ್ಮನ ಮನೆ… ಅದರ ಮಧ್ಯೆ ಶಾಲೆ, ಓದು, ಪರೀಕ್ಷೆ. ಯಾರ ಬಳಿ ನನ್ನ ನೋವು ಹೇಳಿಕೊಳ್ಳಬೇಕು ಎಂಬುದೇ ಗೊತ್ತಿರಲಿಲ್ಲ. ತುಂಬಾ ಅಳುತ್ತಿದ್ದೆ,” ಎಂದು ಅವರು ಹೇಳಿದ್ದಾರೆ.

ತಂದೆಯ ಎರಡನೇ ಮದುವೆಯ ನಂತರದ ಪರಿಸ್ಥಿತಿಯೂ ತಮ್ಮ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದ ಸಾತ್ವಿಕಾ, “ಅವರು ಯಾರು, ಯಾಕೆ ನನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ಆ ಸಮಯದಲ್ಲಿ ತುಂಬಾ ಗೊಂದಲ ಮತ್ತು ನೋವು ಅನುಭವಿಸಿದ್ದೆ,” ಎಂದು ತಿಳಿಸಿದ್ದಾರೆ.

ಕೊನೆಯಲ್ಲಿ, ಇಂದಿನ ಪೋಷಕರು ಮಕ್ಕಳ ಭಾವನೆಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವ ಸಾತ್ವಿಕಾ, ವಿಚ್ಛೇದನದ ನಿರ್ಧಾರವು ಮಕ್ಕಳ ಜೀವನದ ಮೇಲೆ ಉಂಟುಮಾಡುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಹೆಂಡತಿಗಾಗಿ ಹೆತ್ತ ತಾಯಿಯನ್ನೇ ಕೊಲ್ಲಲು ಸಂಚು..! ಅತ್ತೆಯ ಮಾತಿಗೆ ಮರುಳಾಗಿ ಊಟದಲ್ಲಿ ವಿಷ ಬೆರೆಸಿದ ಪಾಪಿ ಮಗ

ಆಗ್ರಾ: ತಾಯಿ-ಮಗನ ಪವಿತ್ರ ಬಾಂಧವ್ಯವನ್ನೇ ಪ್ರಶ್ನಿಸುವಂತಹ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ತವರಿಗೆ ತೆರಳಿದ್ದ ಪತ್ನಿಯನ್ನು…

9 hours ago

ಇನ್‌ಸ್ಟಾಗ್ರಾಮ್ ಪ್ರೀತಿಗೆ ಮರುಳಾಗಿ ಗಂಡ-ಮಕ್ಕಳನ್ನು ತೊರೆದ ಮಹಿಳೆ ಈಗ ಪಶ್ಚಾತ್ತಾಪದಲ್ಲಿ..! ಪ್ರೇಮಿಯಿಂದ ಕಿರುಕುಳ, ಕಣ್ಣೀರಿನಲ್ಲಿ ಲೈವ್ ವಿಡಿಯೋ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯ ಪ್ರೀತಿಗೆ ಮರುಳಾಗಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಮನೆ ಬಿಟ್ಟು ಹೋಗಿದ್ದ ಮಹಿಳೆಯೊಬ್ಬಳು,…

9 hours ago

ದೇವಸ್ಥಾನದ ದಾರಿಯಲ್ಲೇ ಗಂಡನ ಹತ್ಯೆಗೆ ಪತ್ನಿಯ ಸಂಚು..! ಪರ್ಸ್ ನೆಪದಲ್ಲಿ ಕರೆಸಿ ಪ್ರಿಯಕರನಿಂದ ಕೊಲೆ; ಸಿಸಿಟಿವಿಯಿಂದ ಬಯಲಾದ ರಹಸ್ಯ

ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಪತಿಯನ್ನೇ ಮರಣದ ಬಲೆಗೆ ಬೀಳಿಸಿ, ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿಸಿರುವ…

9 hours ago

ಬಂಟ್ವಾಳ ಬಸ್ ನಿಲ್ದಾಣದಲ್ಲೇ ಯುವತಿಯ ಬರ್ಬರ ಹತ್ಯೆ..! ಸಾರ್ವಜನಿಕರ ಎದುರೇ ಕತ್ತಿಯಿಂದ ದಾಳಿ; ಪ್ರೀತಿ ನಿರಾಕರಣೆಯ ಶಂಕೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಡುಹಗಲೇ ನಡೆದ ಭೀಕರ ಹತ್ಯೆ ಇಡೀ ಕರಾವಳಿಯನ್ನೇ…

9 hours ago

ನಕಲಿ ದಾಖಲೆ ಸೃಷ್ಟಿಸಿ ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಲ್ಲಿ ಬಾರ್ ಆರಂಭ ಆರೋಪ: ತೆರವಿಗೆ ಭಕ್ತರ ಒತ್ತಾಯ

ಸರಗೂರು: ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಶ್ರೀ ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಲ್ಲಿ ನಕಲಿ ದಾಖಲೆಗಳನ್ನು…

17 hours ago

ಬಹುಕೋಟಿ ವಂಚನೆಗೆ ಬಿಗ್ ಟ್ವಿಸ್ಟ್! ಮಹಿಳಾ ಅಭಿವೃದ್ಧಿ ಸಂಸ್ಥೆ ಪ್ರಕರಣದಲ್ಲಿ ಇಬ್ಬರ ಬಂಧನ; ₹43.40 ಲಕ್ಷ ವಂಚನೆ ಬಯಲು

ಬಾಗಲಕೋಟೆ: ಜಿಲ್ಲೆಯ ಬೀಳಗಿ ಪಟ್ಟಣದ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ…

20 hours ago