Latest

ವೃದ್ಧನ ಹೊಟ್ಟೆಯಲ್ಲಿ ಬರೋಬ್ಬರಿ 187 ನಾಣ್ಯಗಳು!!!

ವೃದ್ಧನೊಬ್ಬ ನುಂಗಿದ 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ಹೊಟ್ಟೆಯಿಂದ ಯಶಸ್ವಿಯಾಗಿ ಬಾಗಲಕೋಟೆಯ ಶ್ರೀ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.
ಡಾಕ್ಟರ್ ಈಶ್ವರ ಕಲಬುರ್ಗಿ ಮತ್ತು ಡಾಕ್ಟರ್ ಪ್ರಕಾಶ್ ಕಟ್ಟಿಮನಿ ವೈದ್ಯರೊಂದಿಗೆ ಅರವಳಿಕೆ ತಜ್ಞರಾದ ಡಾಕ್ಟರ್ ಅರ್ಚನಾ ಮತ್ತು ರೂಪ ಕುಲಕುಂದೆ ಚಿಕಿತ್ಸೆ ನೀಡಿರುತ್ತಾರೆ.
ಲಿಂಗಸಗೂರು ತಾಲೂಕಿನ ಡ್ಯಾಮಪ್ಪ ಹರಿಜನ ಎಂಬ 58 ವರ್ಷದ ವಯಸ್ಸಿನ ವೃದ್ಧ ಐದು ರೂಪಾಯಿ 56 ನಾಣ್ಯಗಳು ಎರಡು ರೂಪಾಯಿಯ 51 ನಾಣ್ಯಗಳು ಮತ್ತು ಒಂದು ರೂಪಾಯಿಯ 80 ನಾಣ್ಯಗಳನ್ನು ಹೀಗೆ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ನುಂಗಿದ ಒಟ್ಟು ನಾಣ್ಯಗಳ ತೂಕ ಒಂದುವರೆ ಕಿಲೋ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದ ಕುಟುಂಬದ ಸದಸ್ಯರು ದಿನಾಂಕ 26 11 2018 ರಂದು ಬಾಗಲಕೋಟೆಯ ಶ್ರೀ ಕುಮಾರಸ್ವಾಮಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆಗೆ ಒಳಪಡಿಸಿದಾಗ ವೈದ್ಯರು ಎಕರೆ ಮಾಡಿ ಪರೀಕ್ಷಿಸಿದಾಗ ನುಂಗಿದ ನಾಣ್ಯಗಳು ಕಂಡು ಬಂದಿವೆ.
ರೋಗಿಯ ಜೀವಕ್ಕೆ ಅಪಾಯವಿರುವುದು ತಿಳಿದುಬಂದ ನಂತರ ಎಂಡೊಸ್ಕೋಪಿ ಮಾಡಿ ನಾಣ್ಯಗಳನ್ನು ಹೊರ ತೆಗೆದು ರೋಗಿಯನ್ನು ಪ್ರಾಣಾಪಾಯದಿಂದ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಿಕಿತ್ಸೆಯ ನಂತರ ರೋಗಿಯು ಚೇತರಿಸಿಕೊಳ್ಳುತ್ತಿರುವನೆಂದು ವೈದ್ಯರು ಹೇಳಿದ್ದಾರೆ.
ಚಿಕಿತ್ಸೆ ನೀಡಿ ರೋಗಿಯನ್ನು ಗುಣಮುಖಗೊಳಿಸಿದ ವೈದ್ಯರನ್ನು ವೈದ್ಯಕೀಯ ಸಮೂಹ ಹಾಗೂ ಶಾಸಕರು ಅಭಿನಂದಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ದನಗಳ ಕಳ್ಳತನ ಮಾಡುತ್ತಿದ್ದವನನ್ನು ಹೊಂಚು ಹಾಕಿ ಹಿಡಿದ ಪೊಲೀಸರು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ದನಗಳ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬಂದಿಸಿದ್ದಾರೆ.ಡಿವೈಎಸ್ಪಿ ಮಲ್ಲೇಶ್…

1 day ago

‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ ಸಂಕಷ್ಟ: ವಿವಾದಾತ್ಮಕ ಹಾಡಿಗೆ ಕೇಂದ್ರ ಸರ್ಕಾರ ಬ್ರೇಕ್..!

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ನಿರ್ದೇಶಕ ಪ್ರೇಮ್ ಸಾರಥ್ಯದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ…

2 days ago

ರಸ್ತೆಗಳಲ್ಲಿ ನಮಾಜ್‌ಗೆ ಕರೆ: ಹೈದರಾಬಾದ್ ಮೂಲದ ವ್ಯಕ್ತಿಯ ವಿವಾದಾತ್ಮಕ ವಿಡಿಯೋ ವೈರಲ್

ಈದ್ ಹಬ್ಬದ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್‌ನ ಸೈಯದ್ ಅಯೂಬ್ ಎಂಬಾತನ ವಿಡಿಯೋ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ‘ಹೈದರಾಬಾದ್…

2 days ago

ಭಾರತ ಸೇರಿದಂತೆ ಏಷ್ಯಾದಲ್ಲಿ ದಾಳಿಗೆ ಐಸಿಸ್ ಕರೆ: ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಾರತ ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು…

2 days ago

ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ: ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು..!

ಮೂಡಬಿದಿರೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಮಂಗಳೂರು…

2 days ago

ಮೋದಿ ಮಿಮಿಕ್ರಿ ವಿವಾದ: LPG ಬೆಲೆ ಏರಿಕೆ ವ್ಯಂಗ್ಯಕ್ಕೆ ಶಿಕ್ಷಕ ಅಮಾನತು

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯನ್ನು ಅಣಕಿಸಿ ಅಡುಗೆ ಅನಿಲ (LPG) ಬೆಲೆ ಏರಿಕೆಯನ್ನು ವ್ಯಂಗ್ಯಾತ್ಮಕವಾಗಿ ಹೇಳಿಕೊಂಡಿದ್ದ ಸರ್ಕಾರಿ…

2 days ago