ಧರ್ಮಸ್ಥಳ: ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣ ಸಂಬಂಧ ಸತತ ನಾಲ್ಕನೇ ದಿನವೂ ಶೋಧ ಕಾರ್ಯ ತೀವ್ರವಾಗಿಯೇ ಮುಂದುವರಿದಿದ್ದು, ಇಂದು ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬುಧವಾರ ಧರ್ಮಸ್ಥಳದ ಸೈಟ್ ನಂ.1ರಲ್ಲಿ ಆಳದಂತೆ ತೀವ್ರ ಪರಿಶೋಧನೆ ನಡೆಸಿದ್ದು, ಅನೇಕ ಕುತೂಹಲ ಕೆರಳಿಸುವ ವಸ್ತುಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ಪ್ರಮುಖವಾಗಿ 2.5 ಅಡಿ ಆಳದಲ್ಲಿ ಪತ್ತೆಯಾದ ಕೆಂಪು ಬಣ್ಣದ ರವಿಕೆ, ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಬೆಳಕು ಕಂಡಿವೆ.
ಎಸ್ಐಟಿ ಅಧಿಕೃತವಾಗಿ ಈ ವಸ್ತುಗಳ ಪತ್ತೆ ಬಗ್ಗೆ ದೃಢೀಕರಣ ನೀಡಿದ್ದು, ಇವು ಪ್ರಕರಣಕ್ಕೆ ಹೊಸ ಬೆಳಕು ತರಲಿರುವ ಸಾಧ್ಯತೆ ಹೆಚ್ಚಾಗಿದೆ. ಶವ ಹೂತು ಆರೋಪಗಳ ಹಿನ್ನೆಲೆಯಲ್ಲಿಯೇ ಇಂತಹ ದಾಖಲೆ ಅಥವಾ ವ್ಯಕ್ತಿ ಗುರುತಿಸುವ ಸಾಮಗ್ರಿಗಳು ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹತ್ತಿಕ್ಕಿದೆ.
ಈ ಬೆಳವಣಿಗೆಯೊಂದಿಗೆ, ಧರ್ಮಸ್ಥಳ ಶವ ಹೂತು ಪ್ರಕರಣವು ನವ ಸುಳಿವಿನ ದಿಕ್ಕಿನಲ್ಲಿ ಸಾಗಲಿದ್ದು, ತನಿಖೆಗೆ ದೊಡ್ಡ ತಿರುವು ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ವೈಜ್ಞಾನಿಕ ಪರೀಕ್ಷೆ, ಡಿಎನ್ಎ ವಿಶ್ಲೇಷಣೆ ಮೂಲಕ ಆರೋಪಿ ಅಥವಾ ಶವದ ಗುರುತು ಪತ್ತೆಹಚ್ಚುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಸ್ತುತ ಸ್ಥಳದಲ್ಲಿ ಪೊಲೀಸ್ ಭದ್ರತೆ ಮತ್ತಷ್ಟು ಗಟ್ಟಿ ಮಾಡಲಾಗಿದ್ದು, ಸ್ಥಳೀಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸೀಮಿತ ಪ್ರವೇಶವಿದೆ. ಇನ್ನಷ್ಟು ಮಾಹಿತಿ ಬಹಿರಂಗವಾಗುವವರೆಗೆ ತನಿಖಾ ವರದಿಯ ನಿರೀಕ್ಷೆಯಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392
ಬೆಳ್ತಂಗಡಿ, ಜುಲೈ 31: ಧರ್ಮಸ್ಥಳದ ನಿಗೂಢ ಶವ ಹೂತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ಕ್ಕೆ…
ಕೊಪ್ಪಳ, ಜುಲೈ 31: ರಾಜ್ಯದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಹಿಂದೆ ಹೊರಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿದ್ದ ಕಳಕಪ್ಪ…
ದೇವದುರ್ಗ: ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಪ್ರಭಾರದಲ್ಲಿದ್ದ ಗ್ರೇಡ್-2 ಕಾರ್ಯದರ್ಶಿ ಶಂಶುದ್ದೀನ್ ಅವರನ್ನು ಕರ್ತವ್ಯ ಲೋಪ ಮತ್ತು ಕಾರ್ಯನಿರ್ವಹಣೆಯಲ್ಲಿ ತೋರಿದ…
ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ…
ಬೆಳ್ತಂಗಡಿ, ಜುಲೈ 31 – ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಿಗೂಢವಾಗಿ ಹೂತ ಶವಗಳ ಮಾಹಿತಿ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ…
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲ್ಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕುಡಿಯಲು ಹಣ ಕೇಳಿದ ಮಗನಿಗೆ ತಾಯಿ ನಿಷೇಧಿಸಿದ್ದಕ್ಕೆ…