Latest

ಮಹಿಳೆಯನ್ನು ನರಬಲಿ ಕೊಟ್ಟು ದೇಹವನ್ನು 56 ತುಂಡು ಮಾಡಿ ಸೇವಿಸಿರುವ ರಾಕ್ಷಸರು.

ಬೇಗ ಹಣ ಮಾಡುವ ಆಸೆಯಲ್ಲಿ ಇಬ್ಬರು ಮಹಿಳೆಯರ ನರಬಲಿ ಕೊಟ್ಟು 56 ತುಂಡು ಮಾಡಿರುವ ಘಟನೆ ಕೇರಳ ರಾಜ್ಯದ ತಿರುವನಂತಪುರಂನಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಪೊಲೀಸರ ತನಿಖೆಯ ನಂತರ ಟ್ವಿಸ್ಟ್ ಸಿಕ್ಕಿದೆ ಅದೇನೆಂದರೆ ದೇಹವನ್ನು 56 ತುಂಡರಿಸಿದ ನಂತರ ಅದನ್ನು ಸೇವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ನರಬಲಿಯಾದ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಸಾಯಿಸುವುದಕ್ಕೂ ಮೊದಲು ಅವರಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ಮಹಿಳೆಯರ ಸ್ತನಗಳನ್ನು ಕತ್ತರಿಸಿ, ರಕ್ತ ಹರಿಯುವಂತೆ ಮಾಡಲಾಗಿದ್ದು, ಬಳಿಕ ಒಂದು ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಮಹಿಳೆಯರ ದೇಹದ ಭಾಗಗಳು ಒಟ್ಟು 3 ಹೊಂಡಗಳಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ 2020ರಲ್ಲಿ 75 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಆತ ದಂಪತಿ ಭಗವಲ್ ಸಿಂಗ್ ಹಾಗೂ ಲೈಲಾಗೆ ಬೇಗನೆ ಹಣ ಗಳಿಸಲು ನರಬಲಿ ನೀಡುವಂತೆ ಸಲಹೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಫಿ ಸಾಮಾಜಿಕ ಮಾಧ್ಯಮಗಳಲ್ಲಿ ರೋಸ್ಲಿನ್ ಹಾಗೂ ಪದ್ಮಾರನ್ನು ಸಂಪರ್ಕಿಸಿ, ಅಶ್ಲೀಲ ಚಿತ್ರದಲ್ಲಿ ನಟಿಸಲು ಹಣದ ಆಮಿಷ ಒಡ್ಡಿದ್ದ ಎಂದು ಶಂಕಿಸಲಾಗಿದೆ. ನರಬಲಿ ವೇಳೆ ಶಫಿ ಪದ್ಮಾಳ ಕತ್ತು ಹಿಸುಕಿ, ಶಿರಚ್ಛೇದ ಮಾಡಿ ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಲೈಲಾ ರೋಸೆಲಿನ್‌ಳ ಕತ್ತು ಹಿಸುಕಿ, ಆಕೆಯ ಸ್ತನಗಳನ್ನು ಕತ್ತರಿಸಿದ್ದಾಳೆ. ಆಕೆಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

5 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

5 hours ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

6 hours ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

1 day ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

1 day ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

1 day ago