Categories: CorruptionLatest

₹75 ಸಾವಿರ ಲಂಚಕ್ಕೆ ಬೇಡಿಕೆ: ನೀರು ಸರಬರಾಜು ನಿಗಮದ ಇಬ್ಬರು ಇಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

ನೀರು ಮತ್ತು ಒಳಚರಂಡಿ ಕಾಮಗಾರಿಯ ಎಸ್ಟಿಮೇಟ್‌ಗೆ ಅನುಮೋದನೆ ನೀಡಲು ₹75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಇಬ್ಬರು ಇಂಜಿನಿಯರ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಶೋಕ್ ಮತ್ತು ಕಾಶಿನಾಥ್ ಎಂದು ಗುರುತಿಸಲಾಗಿದೆ. ಇವರು ರಿಯಲ್ ಎಸ್ಟೇಟ್ ಉದ್ಯಮಿ ವೀರೇಶ್ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಖಾಸಗಿ ಲೇಔಟ್‌ಗೆ ಅಗತ್ಯ ಅನುಮೋದನೆ ನೀಡಲು ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಬಳ್ಳಾರಿಯ 2.47 ಎಕರೆ ವಿಸ್ತೀರ್ಣದ ಖಾಸಗಿ ಲೇಔಟ್‌ಗೆ ಅನುಮತಿ ನೀಡುವ ಸಂಬಂಧ ಒಟ್ಟು ₹75 ಸಾವಿರ ಲಂಚ ಕೇಳಲಾಗಿತ್ತು. ಅದರಂತೆ ಮೊದಲ ಕಂತಾಗಿ ₹55 ಸಾವಿರವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಲಂಚವಾಗಿ ಪಡೆದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

ಹನಿ ಟ್ರ್ಯಾಪ್ ಜಾಲದ ಕರಾಳ ಮುಖ ಬಯಲು: ಉಡುಪಿ ಉದ್ಯಮಿ ಸಂದೀಪ್ ಸಾಲಿಯಾನ್ ನಿಗೂಢ ಸಾವು ಪ್ರಕರಣದಲ್ಲಿ ಮಹಿಳೆ ಬಂಧನ

ಗೋವಾ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತಳಾದ ಮಹಿಳೆಯೊಬ್ಬಳು, ಉಡುಪಿ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ನಿಗೂಢ ಸಾವು…

6 hours ago

ಚಿತ್ರದುರ್ಗದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಬರ್ಬರ ಹತ್ಯೆ; ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ

ಚಿತ್ರದುರ್ಗ ಜಿಲ್ಲೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್‌ರೊಬ್ಬರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿ, ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ…

6 hours ago

40 ವರ್ಷದ ಪತ್ನಿಗೆ 22ರ ಯುವ ಪೂಜಾರಿಯೊಂದಿಗೆ ಮದುವೆ ಮಾಡಿಸಿದ ಪತಿ; ವೈರಲ್ ಆಯ್ತು ವಿಚಿತ್ರ ಘಟನೆ!

ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ಅಕ್ರಮ ಸಂಬಂಧಗಳ ವಿಚಾರ ಹೊರಬಂದಾಗ ಜಗಳ, ಕಲಹ, ಪೊಲೀಸ್ ಪ್ರಕರಣಗಳು ಅಥವಾ ದುರಂತ ಘಟನೆಗಳೇ ಹೆಚ್ಚು…

6 hours ago

ಭ್ರಷ್ಟ ಡಿಎಸ್‌ಪಿ ಕಪ್ಪು ಸಾಮ್ರಾಜ್ಯ ಬಯಲು: ₹200 ಕೋಟಿ ಅಕ್ರಮ ಆಸ್ತಿ, 50 ಎಕರೆ ಜಮೀನು ಪತ್ತೆ

ಹೈದರಾಬಾದ್: ತೆಲಂಗಾಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಡಿಎಸ್‌ಪಿಯೊಬ್ಬರ ಕೋಟ್ಯಂತರ ರೂಪಾಯಿ ಮೌಲ್ಯದ…

11 hours ago

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ವಂಚನೆ! ಶಿವಮೊಗ್ಗದ ಸಚಿನ್-ಸುಜಾತ ಜೋಡಿ ಬಂಧನ

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದ ಮೇಲೆ ಶಿವಮೊಗ್ಗ ಮೂಲದ ಸಚಿನ್ ಮತ್ತು ಸುಜಾತ…

11 hours ago

ಬಾಕಿ ಸಂಬಳಕ್ಕೆ ವಿಚಿತ್ರ ಸೇಡು! ಬಾಸ್ ಮಗಳನ್ನೇ ಮದುವೆಯಾದ ಸಾಫ್ಟ್‌ವೇರ್ ಇಂಜಿನಿಯರ್

ಸಂಬಳ ನೀಡದೆ ಉದ್ಯೋಗಿಗಳನ್ನು ಸತಾಯಿಸುವ ಘಟನೆಗಳು ಹೊಸದಲ್ಲ. ಆದರೆ ದೆಹಲಿಯಲ್ಲಿ ನಡೆದಿದೆ ಎನ್ನಲಾದ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ…

11 hours ago