Latest

ಈ.ಐ.ಡಿ ಶುಗರ್ ಫ್ಯಾಕ್ಟರಿಯ ವಿಷಪೂರಿತ ನೀರು ಕುಡಿದು ಮೇಕೆಗಳ ಸಾವು.

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದ ಪರಸಪ್ಪ ಹನಮಪ್ಪ ಗಂಗೂರ ಎಂಬವರಿಗೆ ಸೇರಿದ 07 ಮೇಕೆಗಳು ಶುಗರ್ ಫ್ಯಾಕ್ಟರಿಯ ವಿಷಪೂರಿತ ನೀರು ಕುಡಿದು ಮೃತಪಟ್ಟಿವೆ. ಹಾಗೂ ಇನ್ನೂ 02 ಮೇಕೆಗಳು ಅಸ್ವಸ್ಥವಾಗಿವೆ. ಇದಕ್ಕೆ ಕಾರಣ ಸಮೀಪದಲ್ಲಿರುವ ಈ.ಐ.ಡಿ ಪ್ಯಾರಿ ಇಂಡಿಯಾ ಶುಗರ್ ಫ್ಯಾಕ್ಟರಿಯ ಕೊಳಚೆ ಹಾಗೂ ವಿಷಪೂರಿತ ನೀರು ಕುಡಿದು ಮೇಕೆಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಶುಗರ್ ಫ್ಯಾಕ್ಟರಿಯವರು ವಿಷಪೂರಿತ ನೀರನ್ನು ಹಳ್ಳ, ಕೆರೆ, ಹಾಗೂ ಕಾಲುವೆಗಳಿಗೆ ಬಿಡುತ್ತಿರುವುದರಿಂದ ಪ್ರಾಣಿಗಳು ಆ ನೀರನ್ನು ಕುಡಿದು ಸಾವನ್ನಪ್ಪುತ್ತೀವೆ. ಈ ವಿಷಯವಾಗಿ ಶುಗರ್ ಫ್ಯಾಕ್ಟರಿಯ ಹಿರಿಯ ಅಧಿಕಾರಿಯಾದ ಜೈರಾಮ್ ಎಂಬವನಿಗೆ ಕರೆ ಮಾಡಿ ತಿಳಿಸಿದರೆ ನನಗೆ ಅದಕ್ಕೆ ಸಂಬಂಧವಿಲ್ಲ ಎಂಬ ಉಡಾಫೆ ಉತ್ತರ ನೀಡಿದ್ದಾನೆ. ಈ ರೀತಿ ಪ್ರಾಣಿಗಳಿಗೆ ಹಾನಿಯಾದರೆ ಅವುಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಬಹಳ ಕಷ್ಟವಾಗುತ್ತದೆ. ಪ್ರಾಣಿಗಳ ಮೇಲೆಯೇ ಅವಲಂಬಿತವಾಗಿರುವ ಪರಸಪ್ಪ ಗಂಗೂರ ಇವರಿಗೆ ತುಂಬಲಾರದ ನಷ್ಟವಾಗಿದೆ. ಸ್ಥಳಕ್ಕೆ ಆಗಮಿಸಿದ ಎ.ಎಸ್.ಐ ಬಸವರಾಜ ಜಮದಾರ್ ಖಾನಿ ಪರಿಶೀಲನೆ ನಡೆಸಿದ್ದಾರೆ.

ಆದ್ದರಿಂದ ಈ.ಐ.ಡಿ ಶುಗರ್ ಫ್ಯಾಕ್ಟರಿಯ ಅಧಿಕಾರಿಗಳು (Management team) ಈ ಕೂಡಲೇ ಇವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಹಾಗೂ ಕೆರೆ, ಹಳ್ಳಗಳಿಗೆ ವಿಷಪೂರಿತ ನೀರನ್ನು ಬಿಡುವುದನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಹಾಗೂ ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.
ಈ ವರದಿಯನ್ನು ಕಂಡು ಶುಗರ್ ಫ್ಯಾಕ್ಟರಿಯವರು ಹಾಗೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡಬೇಕಿದೆ.

ವರದಿ: ಮುತ್ತಪ್ಪ ಬಡಿಗೇರ

ಭ್ರಷ್ಟರ ಬೇಟೆ

Recent Posts

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

5 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

7 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

1 day ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

1 day ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

1 day ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 days ago