Latest

“ಯೂಟ್ಯೂಬ್‌ನಲ್ಲಿ ಕಲಿತ ಕ್ರೈಂ ಟ್ರಿಕ್ಸ್: 140 ಮನೆಗಳ ಲುಟೆಗೆ ಹೊಣೆಗಾರನ ಬಂಧನ

ಬೆಂಗಳೂರು: ಆನ್‌ಲೈನ್‌ನಿಂದ ಕಳ್ಳತನಕ್ಕೆ ತರಬೇತಿ ಪಡೆದು ನವೀನ ತಂತ್ರಗಳನ್ನು ಬಳಸಿಕೊಂಡು 140ಕ್ಕೂ ಹೆಚ್ಚು ಮನೆಗಳನ್ನು ಲುಟುಗೈದಿರುವ ಕುಖ್ಯಾತ ಕಳ್ಳನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರಹಳ್ಳಿಯ ನಿವಾಸಿ ಪ್ರಕಾಶ್ ಅಲಿಯಾಸ್ ಬಾಲಾಜಿ (43) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯಿಂದ 779 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕಾಶ್ ತಾಂತ್ರಿಕ ಜಾಣ್ಮೆ ಬಳಸಿ ಅಪರಾಧ ಮಾಡುತ್ತಿದ್ದ. ಯೂಟ್ಯೂಬ್‌ ನೋಡಿ ಲಾಕ್ ತೆಗೆಯುವ ತಂತ್ರಗಳನ್ನು ಕಲಿತಿದ್ದ ಈತನಿಗೆ ಕೀ ಮೇಕಿಂಗ್ ಮಷಿನ್ ಬೇಕಾದಂತೆ ಅನಿಸಿ ಆನ್‌ಲೈನ್ ಮೂಲಕ ಖರೀದಿ ಮಾಡಿಕೊಂಡ. ಅಪಾರ್ಟ್‌ಮೆಂಟ್ ಖರೀದಿಯ ಆಸೆ ತೋರಿದಂತೆ ಮನೆಗಳಿಗೆ ಭೇಟಿ ನೀಡುತ್ತಿದ್ದ ಈತನ ಗುರಿ – ಮಹಿಳೆಯರ ಚಪ್ಪಲಿ ಕಾಣಿಸುತ್ತಿರುವ ಮನೆಗಳು!

ಹಾಗೆ ಕೀ ನಕಲಿ ಮಾಡಿಸಿಕೊಂಡು, ಮನೆಯ ಬಾಗಿಲು ತೆರೆದು ಒಳನುಗ್ಗುತ್ತಿದ್ದ. ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಸ್ವಿಗ್ಗಿ ಅಥವಾ ಜೊಮ್ಯಾಟೋ ಡೆಲಿವರಿ ಬ್ಯಾಗ್‌ನಲ್ಲಿ ತುಂಬಿಕೊಂಡು ಶಾಂತವಾಗಿ ತೆರಳುತ್ತಿದ್ದ. ಸಾರ್ವಜನಿಕರ ಮಧ್ಯೆ ಮರೆವಾಗಲು ಇದು ಸಹಾಯವಾಗುತ್ತಿತ್ತಂತೆ. ಕದ್ದ ಚಿನ್ನವನ್ನು ರಾಜೀವ್ ಎಂಬ ಪರಿಚಿತನ ಮೂಲಕ ಮಾರಾಟ ಮಾಡಿಸುತ್ತಿದ್ದ.

ಪ್ರಕಾಶ್ ಬಾಲ್ಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಬಳಿಯಲ್ಲಿ ಬೆಳೆದ. ಆರ್ಥಿಕ ಸಂಕಷ್ಟದಿಂದ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಈತ ಕಿಂಚಿತ್ ವಯಸ್ಸಿನಲ್ಲೇ ಕಳ್ಳತನದ ಮಾರ್ಗ ಹಿಡಿದ. ಕಾಲಕಾಲಕ್ಕೆ ಜೈಲಿಗೂ ತೆರಳಿ ಬಂದಿದ್ದ ಈತನ ನವೀನ ಶೈಲಿಯ ಕಳ್ಳತನ ಕ್ರಮ ಪೊಲೀಸ್ ಇಲಾಖೆಗೆ ತಲೆನೋವಿನ ವಿಷಯವಾಗಿತ್ತು.

ಆದರೆ ಇತ್ತೀಚೆಗೆ ನಡೆದ ಹಲವು ಪ್ರಕರಣಗಳ ಕುರಿತ ತನಿಖೆ ವೇಳೆ ಬಾಲಾಜಿ ಮಾದರಿಯಿರುವ ಕ್ಲೂಗಳನ್ನು ಪಡೆದು ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಪ್ರಕಾಶ್ ಮೇಲೊಂದು ಸೆಂಟ್ರಲ್ ಕ್ರೈಮ್ ಬ್ರಾಂಚ್ ವಿಶೇಷ ತನಿಖೆ ನಡೆಸುತ್ತಿರುವ ಮಾಹಿತಿ ಲಭಿಸಿದೆ.

nazeer ahamad

Recent Posts

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

1 hour ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

1 hour ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

1 hour ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

2 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

2 hours ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

3 hours ago