ಮುಂಡಗೋಡ:- ದಿನಾಂಕ 03-04-2025ರಂದು ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಬಂದು ಮಾಡಿಸಿ ನೋಟಿಸ್ ನೀಡಿದ್ದಾರೆ. ಮುಂಡಗೋಡ ತಾಲೂಕಿನ ಹಲವು ಭಾಗಗಳಲ್ಲಿ ಈ ಕೆಳಗಿನಂತೆ ದಾಳಿಯು ನಡೆದಿದೆ.

  1. ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
  2. ಶ್ರೀ ರೇಣುಕಾ ಮೆಡಿಕಲ್ ಮತ್ತು ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
  3. ಕೋಡಂಬಿಯಲ್ಲಿ ಅಹ್ಮದಸಾಬ ಎನ್ನುವವರು ತಮ್ಮ ಮನೆಯ ಪಕ್ಕದ ಶೆಡನಲ್ಲಿ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದು, ಇವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್ ಲಗತ್ತಿಸಿ, ಕೀಲಿ ಹಾಕಲಾಯಿತು
  4. ಶ್ರೀ ಗುರು ಕ್ಲಿನಿಕ್, ಡಾ| ಅಮರ ಶಿಂಧೆ, ಇವರು ಕೋಡಂಬಿ ಮತ್ತು ಪಾಳಾ ಹಾಗೂ ತಮ್ಮ ಮನೆಯಲ್ಲಿ ಕೂಡ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರಿಂದ ಸದರಿಯವರ 2 ಕ್ಲಿನಿಕ್‌ಗಳಿಗೆ ಕೀಲಿ ಹಾಕಿ ಬಂದ ಮಾಡಲಾಯಿತು ಮತ್ತು ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಸಿ ನೋಟಿಸ್‌ ನೀಡಲಾಯಿತು.
  5. ಧನ್ವಂತರಿ ಕ್ಲಿನಿಕ್, ಕಾತೂರು ಆರ್.ಜಿ ಪೂಜಾರ್ ಎನ್ನುವವರು ಯಾವುದೇ ವಿದ್ಯಾರ್ಹತೆ ಹೊಂದದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಕ್ಲಿನಿಕ್ ಬಂದ ಮಾಡಿಸಿ ನೋಟಿಸ್ ನೀಡಲಾಯಿತು.
  6. ಗೋಪಾಲ ಬೆನ್ನೂರು ಎಂಬುವವರು ಗಣೇಶಪುರದ ಬಾಡಿಗೆ ಮನೆಯಲ್ಲಿ ಯಾವುದೇ ಬೋರ್ಡ್ ಹಾಗೂ ಯಾವುದೇ ವಿದ್ಯಾರ್ಹತೆ ಹೊಂದದೇ ಆನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್‌ ಲಗತ್ತಿಸಿ, ಕೀಲಿ ಹಾಕಲಾಯಿತು.
  7. ಧನ್ವಂತರಿ ಕ್ಲಿನಿಕ್, ಕಾವಲಕೊಪ್ಪದಲ್ಲಿ ಬಸವರಾಜ ಹಡಪದ ಎಂಬುವವರು ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರಿಗೆ ನೋಟಿಸ್ ನೀಡಿ, ಕ್ಲಿನಿಕ್‌ಗೆ ಕೀಲಿ ಹಾಕಲಾಯಿತು.

ಕೆ.ಪಿ.ಎಮ್.ಇ ಪ್ರಾಧಿಕಾರದ ತಂಡವು ಈ ದಾಳಿಯನ್ನು ನಡೆಸಿದ್ದು, ತಂಡದಲ್ಲಿ ಐ.ಎಮ್.ಎ ಮುಂಡಗೋಡದ ಅಧ್ಯಕ್ಷರಾದ ಡಾ| ರವಿ ಹೆಗಡೆ, ಡಾ| ನರೇಂದ್ರ ಪವಾರ, ತಾಲೂಕಾ ಆರೋಗ್ಯಾಧಿಕಾರಿಗಳು, ಡಾ| ಸಂಜೀವ ಗಲಗಲಿ, ವೈದ್ಯಾಧಿಕಾರಿಗಳು, ಆಯುರ್ವೇದ ಆಸ್ಪತ್ರೆ, ಡಾ| ಭರತ ಡಿ.ಟಿ ಆಡಳಿತ ವೈದ್ಯಾಧಿಕಾರಿಗಳು, ಪ್ರಾ.ಅ.ಕೇಂದ್ರ ಹುನಗುಂದ, ಪೋಲೀಸ್ ಇಲಾಖೆಯಿಂದ ಶ್ರೀ ಲೋಕೇಶ್ವರ ಮೆಸ್ತ, ಎ.ಎಸ್.ಐ ಮತ್ತು ಶ್ರೀ ನಾಗರಾಜರವರು ದಾಳಿಯಲ್ಲಿ ಭಾಗವಹಿಸಿದ್ದರು.

Related News

error: Content is protected !!