ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಸುಮಾರು 5 ಗಂಟೆಗೆ ತಿಳಿದು ಬಂದಿದೆ.

ಬಂಗಾರಪೇಟೆ ಪಟ್ಟಣದ ಮಾದಯ್ಯ ರಸ್ತೆಯಲ್ಲಿರುವ ಸುರಭಿ ಹೋಟೆಲ್ ಪಕ್ಕದಲ್ಲಿರುವ ಸ್ಮಾರ್ಟ್ ಕಂಪ್ಯೂಟರ್ ಇನ್ಸಿಟ್ಯೂಟ್ ಮಹಡಿ ಮೇಲಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಅದೇ ಇನ್ಸಿಟ್ಯೂಟ್ ನ ಟೀಚರ್ ಆಗಿ ಕೆಲಸ ಮಾಡುತ್ತಿದ್ದು, ಬಂಗಾರಪೇಟೆ ತಾಲೂಕಿನ ಚಿಕ್ಕವಲಗಮಾದಿ ಗ್ರಾಮದ ನಿವಾಸಿ ಸುಷ್ಮ (23) ವರ್ಷ ಎಂದು ತಿಳಿದು ಬಂದಿದೆ. ಎಂದಿನಂತೆ ಇನ್ಸಿಟ್ಯೂಟ್ ಗೆ ಆಗಮಿಸಿದ ಸುಷ್ಟ ಮಹಡಿ ಮೇಲೆ ಇರುವ ಕೊಠಡಿ ಒಳಗಡೆಯಿಂದ ಚಿಲುಕ ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಮಧ್ಯಾಹ್ನ ಸಮಯದಲ್ಲಿ ಸುಷ್ಮಾ ರವರು ಮಹಡಿ ಮೇಲಿನ ಕೊಠಡಿಗೆ ಹೋದವರು ಬಹಳಷ್ಟು ಸಮಯವಾದರೂ ಇನ್ಸಿಟ್ಯೂಟ್ ಗೆ ಆಗಮಿಸದೆ ಇರುವುದನ್ನ ಗಮನಿಸಿದ ಸಹೋದ್ಯೋಗಿ ಮೇಲೆ ಹೋಗಿ ನೋಡಿದಾಗ ಬಾಗಿಲಿಗೆ ಚಿಲುಕ ಹಾಕಿಕೊಂಡಿರುವುದರಿಂದ ತೆರೆಯಲು ಸಾಧ್ಯವಾಗಲಿಲ್ಲ.

ಅನುಮಾನದ ಬಂದ ಮೇಲೆ ಕೂಡಲೇ ಪೊಲೀಸರಿಗೆ ತಳಿಸಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿ.ಐ. ದಯಾನಂದ್ ರವರು ಮತ್ತು ಪೊಲೀಸ್ ಸಿಬ್ಬಂದಿ ನಾಗರಾಜ್ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳು ಒಳಗಡೆ ಚಿಲುಕ ಹಾಕಿದ್ದ ಬಾಗಿಲನ್ನು ಬಲವಂತವಾಗಿ ತೆಗೆದು ನೋಡಿದಾಗ ಸುಷ್ಮ ಪ್ಯಾನ್ ಗೆ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣಗಳು ತಿಳಿದು ಬಂದಿಲ್ಲ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ವರದಿ: ರೋಶನ್ ಜಮೀರ್

error: Content is protected !!