Latest

ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಿ.ಸಿ.ಬಿ. ಪೊಲೀಸರ ಭರ್ಜರಿ ಕಾರ್ಯಾಚರಣೆ

ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂ.ಡಿ.ಎA.ಎ. ಡ್ರಗ್ಸ್ ಮಾರಾಟದ ಜಾಲಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದು, ಅದೇ ರೀತಿ ಸದರಿ ಕಾರ್ಯವನ್ನು ಮುಂದುವರೆಸಿ ದಿನಾಂಕ: ೨೨/೧೦/೨೦೨೨ ರಂದು ಖಚಿತ ಮಾಹಿತಿ ಮೇರೆಗೆ ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಕಾರಿನೊಳಗಡೆ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರ ವಶದಲ್ಲಿದ್ದ ೫ ಕೆ.ಜಿ. ೬೯೧ ಗ್ರಾಂ ತೂಕದ ಗಾಂಜಾ, ಒಂದು ಮಾರುತಿ ೮೦೦ ಕಾರು, ೧೦,೦೦೦/-ರೂ ನಗರದು ಹಾಗೂ ೩ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಈ ಸಂಬAಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದೇ ರೀತಿ ದಿನಾಂಕ: ೨೩/೧೦/೨೦೨೨ ರಂದು ಸಿ.ಸಿ.ಬಿ. ಪೊಲೀಸರು ಖಚಿತ ಮಾಹಿತಿ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆ ಸರಹದ್ದು ಮಂಡಿ ಮೊಹಲ್ಲಾದ ೨ನೇ ಈದ್ಗಾದ ಸಿ.ವಿ. ರಸ್ತೆಯ ೭ನೇ ಕ್ರಾಸ್‌ನಲ್ಲಿರುವ ಮನೆ ನಂ: ೩೩೧೦ ರ ಮೇಲೆ ದಾಳಿ ಮಾಡಿ ಅಲ್ಲಿ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊAಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನ ವಶದಲ್ಲಿದ್ದ ೪೧ ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬAಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಆರೋಪಿಗಳು ಸದರಿ ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದರು ಎಂಬ ಬಗ್ಗೆ ಹಾಗೂ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ದಾಳಿ ಕಾರ್ಯಗಳನ್ನು ಮೈಸೂರು ನಗರದ ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರಾದ ಶ್ರೀಮತಿ. ಗೀತ.ಎಂ.ಎಸ್., ಐ.ಪಿ.ಎಸ್. ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ. ಅಶ್ವಥನಾರಾಯಣ.ಸಿ.ಕೆ.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಇನ್ಸ್ಪೆಕ್ಟರ್ ಮಲ್ಲೇಶ.ಎ., ಎ.ಎಸ್.ಐ. ರಾಜು, ಸಿಬ್ಬಂದಿಗಳಾದ ಅನಿಲ್, ಸುಬಾನಲ್ಲಾ ಬಾಲ್‌ದಾರ್, ಡಿ.ಶ್ರೀನಿವಾಸಪ್ರಸಾದ್, ಜೋಸೆಫ್ ನೊರೋನ್ಹ, ರವಿಕುಮಾರ್, ರಾಧೇಶ್, ಜನಾರ್ಧನರಾವ್, ಶ್ರೀನಿವಾಸ.ಕೆ.ಜಿ., ಅರುಣ್‌ಕುಮಾರ್, ರಘು, ಮಮತ ರವರುಗಳು ಮಾಡಿರುತ್ತಾರೆ.
ಸದರಿ ಕಾರ್ಯಾಚರಣೆಯನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ, ಐ.ಪಿ.ಎಸ್.ರವರು ಪ್ರಶಂಸಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಗಲಾಟೆ – ಕಾಂಗ್ರೆಸ್ ಮುಖಂಡ ಧನಂಜಯ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ನಗರದ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಧನಂಜಯ್ ಸೇರಿದಂತೆ ಕೆಲವರ ವಿರುದ್ಧ…

3 hours ago

ಮಡಿಕೇರಿ ನಗರದಲ್ಲಿ ಆರ್ಥಿಕ ಸಂಕಷ್ಟದಿಂದ ವ್ಯಕ್ತಿಯೊಬ್ಬರ ಆತ್ಮಹತ್ಯೆ

ಮಡಿಕೇರಿ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದ ವ್ಯಕ್ತಿಯೊಬ್ಬರು ಗುಂಡು ಹೊಡೆದು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಘಟನೆ ಮಡಿಕೇರಿ ಕೋಟೆ…

3 hours ago

“ಪತ್ನಿಯ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸತ್ಯ ಬಹಿರಂಗ

ಬೆಳಗಾವಿ: ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ 33 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಅನಗೋಳದ ದುರ್ಗಾ…

4 hours ago

ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಪತ್ತೆ: ವಾರ್ಡನ್ ಕಿರುಕುಳಕ್ಕೆ ತೀವ್ರ ಆರೋಪ”

ಚಿಕ್ಕಬಳ್ಳಾಪುರ, ಮೇ 30: ತಿಪ್ಪೇನಹಳ್ಳಿಯ ಸಮೀಪದಲ್ಲಿರುವ ಮಕ್ಕಳ ಆಸರೆ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಇದೀಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ವಾರ್ಡನ್…

4 hours ago

ಐಪಿಎಲ್ ಟಿಕೆಟ್ ಕಳ್ಳ ವಹಿವಾಟು – ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳು ಅಮಾನತು

ಬೆಂಗಳೂರು ನಗರದಲ್ಲಿ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್‌ಗಳ ಅಕ್ರಮ ಮಾರಾಟ ಪ್ರಕರಣಕ್ಕೆ ತೊಡಗಿರುವ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳನ್ನು…

5 hours ago

ವಿಜಿಲೆನ್ಸ್ ದಾಳಿಯಿಂದ ಗಾಬರಿಗೊಂಡ ಎಂಜಿನಿಯರ್: 500 ರೂ. ಬಂಡಲ್​ಗಳನ್ನು ಕಿಟಕಿಯಿಂದ ಹೊರ ಎಸೆದ ಘಟನೆ

ಭುವನೇಶ್ವರ: ಒಡಿಶಾದಲ್ಲಿ ವಿಜಿಲೆನ್ಸ್ (ವಿಚಕ್ಷಣ) ಅಧಿಕಾರಿಗಳ ದಾಳಿಯಿಂದ ಭಯಭೀತರಾದ ಸರ್ಕಾರಿ ಎಂಜಿನಿಯರ್ ಒಬ್ಬರು ತಮ್ಮ ಮನೆಯಿಂದ ನಗದು ಬಂಡಲ್‌ಗಳನ್ನು ಕಿಟಕಿ…

7 hours ago