ಬೆಂಗಳೂರು: ಜಾತಿ ನಿಂದನೆ ಹಾಗೂ ದೌರ್ಜನ್ಯ ಆರೋಪದ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ವಿರುದ್ಧ ಬೆಂಗಳೂರು ನಗರದ ಜೆ.ಪಿ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಜಾನಪದ ಕಲಾವಿದ ಜೋಗಿಲ ಸಿದ್ದರಾಜು ನೀಡಿದ ದೂರಿನಂತೆ, ಕಳೆದ ಮೂರು ವರ್ಷಗಳಿಂದ ಪ್ರಾಯೋಜಿತ ಜಾನಪದ ತಂಡಗಳ ಸಂಭಾವನೆ ಬಿಡುಗಡೆ ಮಾಡುವಂತೆ ಕೇಳಿದಾಗ, ಗಾಯತ್ರಿ ಅವರು ತಮ್ಮ ಜಾತಿಯನ್ನು ನಿಂದಿಸಿ ಅಪಮಾನಿಸಿದ್ದು ಮಾತ್ರವಲ್ಲದೆ, ಅವರ ಮೊಬೈಲ್‌ ಕಸಿದು ಹಲ್ಲೆಗೂ ಮುಂದಾಗಿದ್ದಾರಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಜು ಅವರು ಈಗಾಗಲೇ ಮುಖ್ಯಮಂತ್ರಿ ಅವರಿಗೂ ದೂರು ಸಲ್ಲಿಸಿದ್ದಾರೆ.

ಇದರ ಹಿನ್ನೆಲೆಯಲ್ಲಿ ಸಂಸ್ಕೃತಿ ಇಲಾಖೆಯ ಅತಿರೇಖ ಮತ್ತು ಅಧಿಕಾರ ದುರಾವಳಿಯ ವಿರುದ್ಧ ಕಲಾವಿದರೊಳಗೆ ಆಕ್ರೋಶವೂ ವ್ಯಕ್ತವಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಸಮಾಧಾನ ಸಭೆ ನಡೆಸಲು ಪ್ರಯತ್ನಿಸಲಾದರೂ, ಗಾಯತ್ರಿ ಅವರು ಸಭೆಗೆ ಹಾಜರಾಗದ ವಿಷಯ ಕೂಡ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಸಂಬಂಧ ನಿಗದಿತ ಪ್ರಕ್ರಿಯೆಯಂತೆ ಪೊಲೀಸರು ಕ್ರಮ ಕೈಗೊಂಡಿದ್ದು, ಕೆ.ಎಂ. ಗಾಯತ್ರಿ ವಿರುದ್ಧ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

error: Content is protected !!