Latest

ಚಿಗರಿ ಮಾರ್ಗದಲ್ಲಿ ಕಾರುಗಳ ಅಪಘಾತ: ಓರ್ವನ ಸಾವು ಮೂರಿಗೆ ಗಂಭೀರ ಗಾಯ..

ಧಾರವಾಡ: ಹುಬ್ಬಳ್ಳಿ-ಧಾರವಾಡ ಬಿ ಆರ್ ಟಿ ಎಸ್ ಕಾರಿಡಾರ್‌ನ ಪಿಬಿ ರಸ್ತೆ ಮೇಲೆ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಕಲಘೇರಿ ನಿವಾಸಿಯಾಗಿರುವ 34 ವರ್ಷದ ಶಿವಾನಂದ್ ಅಡಿಯಪ್ಪ ಮಾಳಗಿ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಯಾಗಿರುವ 28 ವರ್ಷದ ಮಂಜುನಾಥ್ ತಿಪ್ಪಣ್ಣ ಮಾಳಗಿ ಕಾರು ಚಲಾಯಿಸುತ್ತಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರೂ ಹುಬ್ಬಳಿಯಿಂದ ಧಾರವಾಡದತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಘಟನೆ ಸ್ಥಳವಾದ ಧಾರವಾಡದ ವಾರ್ಡನ್ ಹಾಲ್ ಬಳಿ ಬರುತ್ತಿದ್ದ ವೇಳೆ, ಗದಗ್ ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರು ಎದುರುಗಡೆಯಿಂದ ಬಂದಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ, ಶಿವಾನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮಂಜುನಾಥ್ ಅವರನ್ನು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗದಗ್ ಮೂಲದ ಮನೀಶ್ ರೆಡ್ಡಿ ಬಸವರೆಡ್ಡಿ ಹುಚ್ಚಣ್ಣವರು ಮತ್ತು ಮಂಜುನಾಥ್ ರೆಡ್ಡಿ ಸಾಸಿವೆಹಳ್ಳಿ ಎಂಬವರಿಗೂ ಗಾಯಗಳಾಗಿದ್ದು, ಅವರನ್ನು ಕೂಡ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೊಳಗಾದ ಎರಡೂ ವಾಹನಗಳನ್ನು ಕ್ರೇನ್‌ನ ಸಹಾಯದಿಂದ ಸ್ಥಳಾಂತರಿಸಲಾಗಿದ್ದು, ಸಂಬಂಧಿತ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ವರದಿ: ಶಿವರಾಜ್ ಪಿ.ಆರ್.

nazeer ahamad

Recent Posts

ಭ್ರಷ್ಟಾಚಾರ ಆರೋಪ ಪಿತೂರಿ: ಬಿ.ಆರ್. ಪಾಟೀಲ್ ವಿರುದ್ಧ ಗುತ್ತೇದಾರ ಗಂಭೀರ ವಾಗ್ದಾಳಿ

ಕಲಬುರ್ಗಿ ಜಿಲ್ಲೆ ಆಳಂದ್‌ ಶಾಸಕ ಬಿ.ಆರ್. ಪಾಟೀಲ್‌ ವಿರುದ್ಧ ಗಂಭೀರ ಆರೋಪ ಹೊರಿಸಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾಧ್ಯಮಗಳ…

11 hours ago

ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ: ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ 5 ಮಂದಿ ಬಂಧನ

ಭಟ್ಕಳ : ಮುರುಡೇಶ್ವರದ ಬಳಿ ಇರುವ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದ ಐವರ…

11 hours ago

ಕಾರ್ಯಕ್ರಮದ ಮಧ್ಯೆ ಮಾಜಿ ಶಾಸಕರ ಜೇಬು ಕತ್ತರಿಸಿ 70 ಸಾವಿರ ರೂ. ಕದ್ದ ಕಳ್ಳನಿಗೆ ಧರ್ಮದೇಟು!

ರಾಯಚೂರು: ಸಚಿವ ಎನ್.ಎಸ್. ಬೋಸರಾಜು ಅವರ ಹುಟ್ಟುಹಬ್ಬದ ನಿಮಿತ್ತ ನಡೆದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಚ್ಚರಿಯ ಕಳ್ಳತನ ಘಟನೆ…

15 hours ago

ಫರಿದಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ: ಯುವತಿ ಶವ 10 ಅಡಿ ಆಳದ ಚರಂಡಿಯಲ್ಲಿ ಪತ್ತೆ, ಅತ್ತೆ-ಮಾವ ಸಹಿತ ನಾಲ್ವರು ಬಂಧನ

ಫರಿದಾಬಾದ್ (ಜೂನ್ 20): ಹರಿಯಾಣದ ಫರಿದಾಬಾದ್‌ನ ರೋಶನ್ ನಗರದ ವಸತಿಬೀದಿಯೊಂದರಲ್ಲಿ 10 ಅಡಿ ಆಳದ ಕಂದಕದಲ್ಲಿ ಸಡಿಲ ಸ್ಥಿತಿಯಲ್ಲಿದ್ದ ಮಹಿಳೆಯ…

16 hours ago

ತಹಶೀಲ್ದಾರರ ಡಿಜಿಟಲ್ ಸಹಿ ನಕಲು: ಜಮೀನು ಅಕ್ರಮ ವರ್ಗಾವಣೆಯ ಹಗರಣ ಬಹಿರಂಗ”

ಬೀದರ್ ಜಿಲ್ಲೆಯಲ್ಲಿ ಸರ್ಕಾರದ ಅಧಿಕಾರಿಗಳನ್ನು ಶಾಕ್‌ಗೆ ಒಳಪಡಿಸುವಂತಹ ಭೂಮಿ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಡಿಜಿಟಲ್ ಸಹಿ ಬಳಸಿ ಒಬ್ಬರ…

18 hours ago

ರಾಜಕೀಯ ವೈಷಮ್ಯಕ್ಕೆ ಪ್ರಾಣ ಬಲಿ: ಹಸುವಿಗೆ ಮಚ್ಚಿನಿಂದ ಹಲ್ಲೆ, ಚಿಕಿತ್ಸೆ ಫಲಿಸದೆ ದುರ್ಮರಣ”

ಬೆಂಗಳೂರು: ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿಗೆ ಮಚ್ಚಿಯಿಂದ ಹಲ್ಲೆ ನಡೆಸಿದ ದಾರುಣ ಘಟನೆ ಯಶವಂತಪುರ ವಿಧಾನಸಭಾ ಕ್ಷೇತ್ರದ…

19 hours ago