Crime

ತಲೆಯ ಸೂಪ್ ಕುಡಿದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ: ಮಾನವ ಮಾಂಸದ ರಹಸ್ಯ ಬಯಲಾಗಿದೆಯಾ?

ಲಕ್ನೋ: ದೇಶದ ಇತಿಹಾಸದಲ್ಲಿಯೇ ಅತಿಭಯಾನಕ ಮತ್ತು ವಿಕೃತ ಮನಸ್ಥಿತಿಯ ಸರಣಿ ಕೊಲೆಗಾರನೊಬ್ಬನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಈ ಪ್ರಕರಣ ಮತ್ತೊಂದು ನೈಜ ಜೀವಂತ ರಕ್ತಚಂಡ ಕಥೆಯಂತೆ ಓದುಗರನು ಅಲುಗಿಸಿದೆ.

ನರಭಕ್ಷಕ ಎಂಬ ಕರಾಳ ಹೆಸರು ಪಡೆದ ರಾಮ್ ನಿರಂಜನ್ ಅಲಿಯಾಸ್ ರಾಜಾ ಕೊಲಂದರ್ ಮತ್ತು ಆತನ ಸಹಚರ ವಾಚ್ ರಾಜ್ ಎಂಬವರಿಗೆ ಲಕ್ನೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಘೋಷಿಸಿದೆ.

ರಾಜಾ ಕೊಲಂದರ್ 14 ಜನರನ್ನು ನಿಷ್ಠುರವಾಗಿ ಕೊಂದು, ಅವರ ದೇಹ ಭಾಗಗಳನ್ನು ಕಡಿಯುತ್ತಿದ್ದ, ತಲೆಯನ್ನು ಕತ್ತರಿಸಿ ಅದರಿಂದ ಸೂಪ್ ತಯಾರಿಸಿ ಕುಡಿಯುತ್ತಿದ್ದನು ಎಂಬ ಮಾಹಿತಿ ನ್ಯಾಯಾಲಯದ ಮುಂದಿಟ್ಟಾಗ ಅದು ಭಯಾನಕ ಸತ್ಯವಾಗಿ ಹೊರಬಂದಿತು. ತನಗೆ ಮಾನವರ ತಲೆಯ ಸೂಪ್ ಕುಡಿದರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂಬ ವಿಕೃತ ನಂಬಿಕೆಯಲ್ಲಿ ಈತ ಈ ಕೃತ್ಯಗಳನ್ನು ಎಸಗುತ್ತಿದ್ದನೆಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದ್ದಾಗ ಕೂಡಾ, ರಾಜಾ ಕೊಲಂದರ್ ಯಾವುದೇ ಪಶ್ಚಾತಾಪವಿಲ್ಲದೆ, ನಿರ್ಲಕ್ಷ್ಯಭಾವದಿಂದ ಮಂದಹಾಸ ಬೀರುತ್ತಿದ್ದನೆಂಬುದು ಸಂತ್ರಸ್ತ ಕುಟುಂಬಗಳಿಗೆ ಇನ್ನಷ್ಟು ನೋವು ತಂದಿದೆ.

ಅತಿಕೃೂರ ಹಾಗೂ ಮಾನವೀಯತೆಯ ಎಲ್ಲ ಮಿತಿ ದಾಟಿದ ಈ ಕೊಲೆ ಪ್ರಕರಣದಲ್ಲಿ ರಾಜಾ ಕೊಲಂದರ್‌ಗಿಂತಲೂ ದೊಡ್ಡ ಪಾತ್ರ ವಾಚ್ ರಾಜ್ ಎಂಬಾತನದ್ದು ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಈತನ ಸಹಾಯದಿಂದಲೇ ರಾಜಾ ಹಲವು ಜನರನ್ನು ಅಪಹರಿಸಿ, ಕೊಂದು, ಅವರ ದೇಹವನ್ನು ಭಕ್ಷಿಸುತ್ತಿದ್ದ

nazeer ahamad

Recent Posts

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

11 hours ago

ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಮೇಲೆ ಆರ್‌ಟಿಒ ದಾಳಿ: ₹3 ಕೋಟಿ ದಂಡ, ₹15 ಕೋಟಿ ಮೌಲ್ಯದ ವಾಹನ ವಶ

ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…

12 hours ago

ಕೆ.ಆರ್.ಪೇಟೆ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ ವ್ಯಕ್ತಿ ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…

12 hours ago

ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಮಹಿಳೆಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಪ್ರಕರಣ ದಾಖಲು

ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…

14 hours ago

ಪುತ್ತೂರಿನಲ್ಲಿ ಆತ್ಮಹತ್ಯೆ ಆಘಾತ: ಏಳು ತಿಂಗಳ ಗರ್ಭಿಣಿ ನೇಣುಬಿಗಿದುಕೊಂಡು ಜೀವವಿಡುವ ದುರ್ಘಟನೆ

ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…

15 hours ago

ಕೋಲಾರ್ ಎಸ್‌ಬಿಐ ಎಟಿಎಂ ದರೋಡೆ: ಕಳ್ಳರು ₹27 ಲಕ್ಷ ನಗದು ದೋಚಿ ಪರಾರಿ.!

ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…

18 hours ago