
ಭಟ್ಕಳ (ಜೂನ್ 30): ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಚಡ್ಡುಮನೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಎಮ್ಮೆ ವಧೆಯ ಪ್ರಕರಣ ಒಂದು ಬೆಳಕಿಗೆ ಬಂದು ಗ್ರಾಮಸ್ಥರಲ್ಲಿ ಆಘಾತದ ಆಕ್ರೋಶವೂ ಮೂಡಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಾಲು ನೀಡುವ ಎಮ್ಮೆ ಕದ್ದೊಯ್ದು ಅನಾಥವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಪೀಡಿತ ರೈತ ರಚನ್ ನಾಯ್ಕ ಅವರು ತಮ್ಮ ಮನೆಯ ಬಳಿ ಪ್ರೀತಿಯಿಂದ ಎಮ್ಮೆ ಸಾಕುತ್ತಿದ್ದು, ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದರು. ಭಾನುವಾರ ರಾತ್ರಿ ದುಷ್ಕರ್ಮಿಗಳು ಅವರ ಎಮ್ಮೆ ಮೇಲೆ ಕಣ್ಣು ಹಾಕಿ, ಅದನ್ನು ಕದ್ದೊಯ್ದು ಚಡ್ಡುಮನೆಯ ಹತ್ತಿರವಿರುವ ಅರಣ್ಯ ಪ್ರದೇಶದೊಂದರಲ್ಲಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಎಮ್ಮೆ ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ರಚನ್ ನಾಯ್ಕ, ನಿರ್ಜನ ಪ್ರದೇಶದಲ್ಲಿ ಎಮ್ಮೆಯ ಮೃತದೇಹ ಕಂಡುಬಂದಿದ್ದು, ರುಂಡ ಮತ್ತು ಶರೀರ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯವನ್ನು ನೋಡಿದ ರಚನ್ ಭಾವುಕವಾಗಿ ಕಂಬನಿ ಮಿಡಿದಿದ್ದಾರೆ.
ಈ ವಿಚಾರ ಗ್ರಾಮದಲ್ಲಿ ಹರಡಿದ ತಕ್ಷಣ, ಸ್ಥಳಕ್ಕೆ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದು ಜಾಗರಣಾ ವೇದಿಕೆ ಸಂಚಾಲಕ ಜಯಂತ ನಾಯ್ಕ, ನಾಗೇಶ್ ನಾಯ್ಕ, ಕುಮಾರ್ ನಾಯ್ಕ ಸೇರಿದಂತೆ ಹಲವರು ಭೇಟಿ ನೀಡಿದರು. ನಂತರ ಪೀಡಿತ ಕುಟುಂಬದ ಪರವಾಗಿ ಪೊಲೀಸರು ಭೇಟಿ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯ ವ್ಯಕ್ತಪಡಿಸಿದರು.
ಘಟನೆಯ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ಸಭೆ ಜರುಗಿದಿದೆ. ಬಿಜೆಪಿ ಮುಖಂಡರುಗಳಾದ ಶ್ರೀಕಾಂತ ನಾಯ್ಕ, ರಾಘವೇಂದ್ರ ಮುಠ್ಠಳ್ಳಿ ಸಹ ಸಂಬಂಧಪಟ್ಟ ಸ್ಥಳಕ್ಕೆ ತೆರಳಿ ರಚನ್ ನಾಯ್ಕ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಘಟನೆ ಕುರಿತು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಗ್ರಾಮದ ಜನರು ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಕಾನೂನುಬದ್ಧ ಶಿಕ್ಷೆ ನೀಡುವಂತೆ ಬೇಡಿಸಿದ್ದಾರೆ.