
ಕಲಬುರಗಿ: ಪತ್ನಿಯನ್ನು ಮನೆಗೆ ಬರಲು ಕೇಳಿದ್ದಕ್ಕೆ ಆಕೆಯ ಸಹೋದರ ಗಲಾಟೆ ಮಾಡಿ ಭಾವನಿಗೆ ಚಾಕು ಇರಿದ ಘಟನೆ ಕಲಬುರಗಿ ಜಿಲ್ಲೆಯ ಗಾಜಿಪುರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಭಾವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂದ್ ಎಂಬ ಯುವಕ ತನ್ನ ಪತ್ನಿ ಸ್ನೇಹಾ ಅವರನ್ನು ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಆದರೆ ಮದುವೆಯ ನಂತರ ದಾಂಪತ್ಯದಲ್ಲಿ ಬಿರುಕು ಬಿದ್ದು ಸ್ನೇಹಾ ತಾಯಿ ಮನೆಗೆ ಮರಳಿದ್ದಳು. ಇತ್ತೀಚೆಗೆ ಆನಂದ್ ತಮ್ಮ ಅಣ್ಣನ ಮದುವೆ ನಿಮಿತ್ತ ಪತ್ನಿಯನ್ನು ಮನೆಗೆ ಆಹ್ವಾನಿಸಿದ್ದ.
ಈ ಬಗ್ಗೆ ಸ್ನೇಹಾ ಸಹೋದರ ಟೋನಿ ಆಕ್ರೋಶ ವ್ಯಕ್ತಪಡಿಸಿ, ತನ್ನ ಸ್ನೇಹಿತರೊಂದಿಗೆ ಸೇರಿ ಆನಂದ್ ಮೇಲಗೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಇರಿತದಿಂದ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.