Latest

30 ವರ್ಷದ ಹಿಂದಿನ ಲಂಚ ಪ್ರಕರಣ: ನಿವೃತ್ತಿಗೆ 10 ವರ್ಷವಾದ ಮೇಲೆ ಗ್ರಾಮ ಲೆಕ್ಕಾಧಿಕಾರಿಗೆ ಜೈಲುದಂಡ

ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ 30 ವರ್ಷಗಳ ಹಿಂದೆ ನಡೆದಿದ್ದು, ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ಆರೋಪಿ ಮತ್ತೆ ಕಾರಾಗೃಹ ಪಾಲಾಗಿದ್ದಾರೆ.

ನಾಗೇಶ್ ಶಿವಂಗೇಕರ್ ಎಂಬವರು ಬೆಳಗಾವಿ ಜಿಲ್ಲೆಯ ಕಡೋಲಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ, ಪಹಣಿ ಪತ್ರದಲ್ಲಿ ವಾಟ್ನಿ ಮಾಡಲು 500 ರೂಪಾಯಿ ಲಂಚವನ್ನು ಕೇಳಿದ್ದಾರಂತೆ. ಈ ಬಗ್ಗೆ ಲಕ್ಷ್ಮಣ ಕಟಾಂಬಳೆ ಎಂಬುವವರು ಲೋಕಾಯುಕ್ತೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು 500 ರೂ. ಲಂಚ ಪಡೆಯುತ್ತಿರುವ ವೇಳೆ ದಾಳಿ ನಡೆಸಿ ನಾಗೇಶ್ ಅವರನ್ನು ಬಂಧಿಸಿದ್ದರು.

ಈ ಪ್ರಕರಣದ ವಿಚಾರಣೆ 2006 ರಲ್ಲಿ ಪೂರ್ಣಗೊಂಡು, ಸ್ಥಳೀಯ ನ್ಯಾಯಾಲಯ ನಾಗೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿತ್ತು. ನಂತರ ಅವರು ಈ ತೀರ್ಪು ವಿರುದ್ಧ ಧಾರವಾಡ ಬೃಹತ್ ನ್ಯಾಯಾಲಯದ ಶರಣಾಗಿದ್ದು, ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು.

ಆದರೆ ಲೋಕಾಯುಕ್ತ ಈ ತಾತ್ಕಾಲಿಕ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು. ಇದೀಗ ತೀರ್ಪು , ಸುಪ್ರೀಂ ಕೋರ್ಟ್ ಲೋಕಾಯುಕ್ತ ಪರ ನಿಲ್ಲುತ್ತಾ ಮೂಲ ತೀರ್ಪನ್ನು ಮಾನ್ಯ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈಗ 10 ವರ್ಷಗಳ ಹಿಂದೆ ನಿವೃತ್ತರಾದ ನಾಗೇಶ್ ಶಿವಂಗೇಕರ್ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

ಇಲ್ಲಿ ವಿಶೇಷವೆಂದರೆ, ದೂರು ನೀಡಿದ್ದ ವ್ಯಕ್ತಿ ಲಕ್ಷ್ಮಣ ಕಟಾಂಬಳೆ 5 ವರ್ಷಗಳ ಹಿಂದೆ ಸಾವನ್ನಪ್ಪಿದ್ದರೂ ಕೂಡ ನ್ಯಾಯದ ಚಕ್ರ ತನ್ನ ಪಥವನ್ನು ಮುಂದುವರಿಸಿ ಕೊನೆಗೂ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಲು ಕಾರಣವಾಯಿತು.

ಈ ಘಟನೆಯು “ವಿಧಿ ಯವಳಿಗೆ ವಿಳಂಬವಾಯಿತೆ ಹೊರತು ವಿಳಾಸ ತಪ್ಪದು” ಎಂಬ ಮಾತಿಗೆ ಮತ್ತೆ ದೃಢತೆ ನೀಡಿದಂತಾಗಿದೆ.

nazeer ahamad

Recent Posts

ಮೋದಿ ಭೇಟಿ ಮುನ್ನ ಜಿಲೆಟಿನ್-ಟೈಮರ್ ಪತ್ತೆ! ಉಗ್ರ ಸಂಚೋ? ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಗೆ ಮುನ್ನವೇ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಘಟನೆ ಹೊಸ ಆತಂಕಕ್ಕೆ…

1 day ago

ಕಿರುತೆರೆ-ಬೆಳ್ಳಿತೆರೆಗೆ ಶಾಕ್‌: ನಟ ದಿಲೀಪ್‌ ರಾಜ್ ಹೃದಯಾಘಾತದಿಂದ ನಿಧನ

ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ, ನಿರ್ಮಾಪಕ ಮತ್ತು ಕಂಠದಾನ ಕಲಾವಿದ ದಿಲೀಪ್‌ ರಾಜ್…

1 day ago

ಭೂದಾಖಲೆಗಳ ನಕಲು ಶುಲ್ಕ ಪರಿಷ್ಕರಣೆ: ಸರ್ಕಾರದಿಂದ ಹೊಸ ಏಕರೂಪದ ದರ ಜಾರಿ

ಭೂಮಾಪನ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಮೂಲ ದಾಖಲೆಗಳ ನಕಲುಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ವಿವಿಧ…

2 days ago

ಮದರಸಾದಿಂದ 24 ಮಕ್ಕಳು ಪರಾರಿ! ತುಮಕೂರಿನಲ್ಲಿ ಬಯಲಾಯ್ತು ಅಮಾನವೀಯ ಹಿಂಸೆ

ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…

2 days ago

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

3 days ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

3 days ago