ರಾಯಚೂರು: ಇತ್ತೀಚೆಗೆ ಉದ್ಘಾಟನೆಯಾದ ನೂತನ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದಿದೆ ಎಂಬ ಇಮೇಲ್ ಸಂದೇಶ one ಆತಂಕದ ವಾತಾವರಣ ಮೂಡಿಸಿದೆ.

ಶುಕ್ರವಾರ (ಮೇ 2) ಬೆಳಗ್ಗೆ 9.30ರ ಸುಮಾರಿಗೆ ಡಿಸಿ ಕಚೇರಿ ಅಧಿಕೃತ ಇಮೇಲ್‌ಗೆ ಈ ಬೆದರಿಕೆ ಸಂದೇಶ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಯಿತು.

ಮಧ್ಯಾಹ್ನ 12.30ಕ್ಕೆ ಬಾಂಬ್ ನಿಷ್ಟ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ಕಟ್ಟಡದ ಸಂಪೂರ್ಣ ತಪಾಸಣೆಗೆ ಕೈಹಾಕಿದವು. ಅಧಿಕಾರಿಗಳು ಯಾವುದೇ ಸ್ಫೋಟಕ ವಸ್ತು ಕಂಡುಬಂದಿಲ್ಲ ಎಂದು ಪ್ರಾಥಮಿಕ ವರದಿ ನೀಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಬೇಸಿಗೆ ಕಾರಣದಿಂದ ಕಚೇರಿ ವೇಳೆ ಮಧ್ಯಾಹ್ನವರೆಗೆ ಮಾತ್ರವಿದ್ದರಿಂದ, ಉದ್ಯೋಗಿಗಳು ಹೆಚ್ಚಿನ ತಕ್ಷಣದಲ್ಲಿಯೇ ಸ್ಥಳವನ್ನು ಖಾಲಿ ಮಾಡಿದ್ದರು. ಈ ಬೆದರಿಕೆ ಮೇಲ್ ಯಾರಿಂದ ಮತ್ತು ಎಲ್ಲಿ ನಿಂದ ಬಂದಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲಾ ನಿಕಟ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

Leave a Reply

Your email address will not be published. Required fields are marked *

Related News

error: Content is protected !!