Categories: CrimeLatest

‘ನೀಲಿ ಡ್ರಮ್’ ಭೀತಿ: ಪತ್ನಿಯ ಬೆದರಿಕೆಗೆ ಹೆದರಿ ಆಕೆಯನ್ನು ಪ್ರಿಯಕರನ ಜೊತೆ ಕಳುಹಿಸಿದ ಪತಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ನೀಲಿ ಡ್ರಮ್’ ಎಂಬ ಪದ ಕ್ರೌರ್ಯದ ಸಂಕೇತವಾಗಿ ಹರಿದಾಡುತ್ತಿದೆ. ಇದೇ ಭೀತಿಯ ನಡುವೆ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಿಚಿತ್ರ ಘಟನೆೊಂದು ಬೆಳಕಿಗೆ ಬಂದಿದೆ. ಪತ್ನಿಯ ಬೆದರಿಕೆಗೆ ಹೆದರಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿರುವುದು ಗಮನ ಸೆಳೆದಿದೆ.

ದೌಲತ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್ ಕಳೆದ ಏಳು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದರು. ದಂಪತಿಗೆ ಆರು ತಿಂಗಳ ಮಗು ಕೂಡ ಇದೆ. ಆದರೆ, ಅವರ ಪತ್ನಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ.

ಪತ್ನಿಯ ಮೊಬೈಲ್‌ನಲ್ಲಿ ಪ್ರಿಯಕರನೊಂದಿಗೆ ತೆಗೆದ ಆಕ್ಷೇಪಾರ್ಹ ಫೋಟೋಗಳು ಮತ್ತು ಫೇಸ್‌ಬುಕ್‌ನಲ್ಲಿ “ಸಿಮೆಂಟ್ ಮತ್ತು ನೀಲಿ ಡ್ರಮ್” ಎಂಬ ಶೀರ್ಷಿಕೆಯ ಪೋಸ್ಟ್ ಕಂಡು ರಾಜಕುಮಾರ್ ಆತಂಕಗೊಂಡಿದ್ದಾರೆ. ಈ ಪೋಸ್ಟ್ ಹಿಂದಿನ ಮೀರತ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ನೆನಪಿಸುವಂತಿತ್ತು.

ಆ ಪ್ರಕರಣದಲ್ಲಿ ಮುಸ್ಕಾನ್ ಎಂಬ ಮಹಿಳೆ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ಪತಿಯನ್ನು ಕೊಂದು, ಶವವನ್ನು ನೀಲಿ ಡ್ರಮ್‌ನಲ್ಲಿ ಇಟ್ಟು ಸಿಮೆಂಟ್‌ನಿಂದ ಮುಚ್ಚಿದ್ದಳು. ಇದೇ ಘಟನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, “ನೀನು ಅಡ್ಡ ಬಂದರೆ ನಿನ್ನನ್ನೂ ಇದೇ ರೀತಿಯಲ್ಲಿ ಕೊಲ್ಲುತ್ತೇನೆ” ಎಂದು ಪತ್ನಿ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ಜೀವ ಭಯದಿಂದ ಕಂಗೆಟ್ಟ ರಾಜಕುಮಾರ್ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ಮಹಿಳಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. ಈ ವೇಳೆ ಪತ್ನಿ ಪ್ರಿಯಕರನೊಂದಿಗೆ ಬದುಕುವುದಾಗಿ ಹಠ ಹಿಡಿದಿದ್ದಾಳೆ.

ಕೊನೆಗೆ, ತನ್ನ ಜೀವದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜಕುಮಾರ್ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. “ಆಕೆ ನನಗೆ ಅಡುಗೆ ಮಾಡುತ್ತಿರಲಿಲ್ಲ, ಮಗುವಿನ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ” ಎಂದು ರಾಜಕುಮಾರ್ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ SSR ನೇಮಕಾತಿ: ಅರ್ಜಿ ಆಹ್ವಾನ

ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಘಟಕವಾದ ಭಾರತೀಯ ನೌಕಾಪಡೆಯು 2027ರ ಜನವರಿ ಮತ್ತು ಫೆಬ್ರವರಿ ಬ್ಯಾಚ್‌ಗಳಿಗಾಗಿ ‘ಅಗ್ನಿವೀರ್ ಸೀನಿಯರ್ ಸೆಕೆಂಡರಿ…

10 hours ago

ಅಥಣಿ ತಾಲೂಕಿನಲ್ಲಿ ಹದಗೆಟ್ಟ ರಸ್ತೆ: ಯಲಿಹಡಲಗಿ–ಅಡಹಳಟ್ಟಿ ಮಾರ್ಗದಲ್ಲಿ ಜನರ ಆಕ್ರೋಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ–ಅಡಹಳಟ್ಟಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು, ತೆಗ್ಗು-ಗುಂಡಿಗಳಿಂದ ತುಂಬಿಕೊಂಡಿದೆ. ರಸ್ತೆಯ ದುಸ್ಥಿತಿಯಿಂದ ಬೈಕ್ ಸವಾರರು…

16 hours ago

ಅರ್ಧಕ್ಕೆ ನಿಂತ ಶೌಚಾಲಯ, ಮೂತ್ರದ ದುರ್ವಾಸನೆ: ಅಥಣಿಯಲ್ಲಿ ಸಾರ್ವಜನಿಕರ ಆಕ್ರೋಶ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬೆನ್ನಿಪೇಟೆಯ ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗದಲ್ಲಿ, ಜಿ ಮಾರ್ಟ್ ಎದುರಿನ ಪ್ರದೇಶದಲ್ಲಿ ಗಂಭೀರ ಸ್ವಚ್ಛತಾ ಸಮಸ್ಯೆ…

16 hours ago

‘ಧುರಂಧರ್: ದಿ ರಿವೆಂಜ್’ಗೆ ನಟಿ ರಮ್ಯಾ ಕಟು ಟೀಕೆ: “ಹಣ, ಸಮಯ ವ್ಯರ್ಥ ಮಾಡಿಕೊಳ್ಳಬೇಡಿ”

‘ಧುರಂಧರ್: ದಿ ರಿವೆಂಜ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ನಟಿ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ…

17 hours ago

‘ಫಸ್ಟ್ ನೈಟ್’ ನಿರಾಕರಣೆ: ಪತಿ ವಿರುದ್ಧ ಮಹಿಳೆಯ ದೂರು, ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ

ಬೆಂಗಳೂರು ನಗರದಲ್ಲಿ ದಿನೇದಿನೇ ವಿಭಿನ್ನ ಸ್ವರೂಪದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇತ್ತೀಚೆಗೆ ಮತ್ತೊಂದು ಅಸಾಮಾನ್ಯ ಘಟನೆ ಗಮನ ಸೆಳೆದಿದೆ. ಮದುವೆಯಾದ…

17 hours ago

ಲಂಚ ಸ್ವೀಕರಿಸುವಾಗ ದಾಳಿ – ಕಾರಿನಲ್ಲಿ ಪರಾರಿಯಾಗುತ್ತಿದ್ದ ಅಧಿಕಾರಿಯನ್ನು ಬೆನ್ನತ್ತಿ ಬಂಧಿಸಿದ ಲೋಕಾಯುಕ್ತ

ಕೋಲಾರದಲ್ಲಿ ಲಂಚ ಸ್ವೀಕರಿಸುವ ವೇಳೆ ನಡೆದ ಲೋಕಾಯುಕ್ತ ದಾಳಿ ಸಿನಿಮೀಯ ತಿರುವು ಪಡೆದುಕೊಂಡಿದ್ದು, ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿ…

1 day ago