Latest

ಭಟ್ಕಳ ಸಮುದ್ರ ದುರಂತ: ದೋಣಿ ಮುಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರು ರಕ್ಷಣೆ

ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸಮುದ್ರದ ಅಳಿವೆ ಅಂಚಿನಲ್ಲಿ ಮುಳುಗಿ, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಈ ದುರಂತದಲ್ಲಿ ಇದ್ದ ಆರು ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ತಕ್ಷಣವೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ನಾಲ್ವರನ್ನು ಹುಡುಕಲು ಕರಾವಳಿ ಕಾವಲು ಪಡೆ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಅಲೆಗಳ ಅಬ್ಬರಕ್ಕೆ ದೋಣಿ ಬಲಿಯಾದಂತಾಗಿದೆ

ಮೆಲುಕು ಹಾಕಿದ ವರದಿಯಂತೆ, ಭಟ್ಕಳದ ಮೀನುಗಾರರೊಬ್ಬರ ದೋಣಿ ಬೆಳಿಗ್ಗೆ ಸಮುದ್ರದೊಳಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ತೀವ್ರ ಅಲೆಗಳ ಅಬ್ಬರಕ್ಕೆ ದೋಣಿ ಸಮತೋಲ ತಪ್ಪಿಸಿ ಮುಳುಗಿದೆ. ಪರಿಣಾಮ, ನಾಲ್ವರು ಸಮುದ್ರದೊಳಗೆ ಕೊಚ್ಚಿ ಹೋಗಿದ್ದಾರೆ.

ರಕ್ಷಿಸಲ್ಪಟ್ಟವರು:

ಮನೋಹರ ಈರಯ್ಯ ಮೊಗೇರ (31), ಭಟ್ಕಳದ ಬೆಳೆ ಬಂದರ್ ನಿವಾಸಿ

ಜಾಲಿ ರಾಮ ಮಾಸ್ತಿ ಖಾರ್ವಿ (43), ಜಾಲಿ ಕೋಡಿಯ ನಿವಾಸಿ

ನಾಪತ್ತೆಯಾದವರು:

ರಾಮಕೃಷ್ಣ ಮಂಜು ಮೊಗೇರ (40), ಜಾಲಿ ಕೊಡಿ

ಸತೀಶ್ ತಿಮ್ಮಪ್ಪ ಮೊಗೇರ (26), ಅಳ್ವೆಕೋಡಿa

ಗಣೇಶ್ ಮಂಜುನಾಥ ಮೊಗೇರ (27), ಅಳ್ವೇಕೋಡಿ ಮುಗ್ರಿ ಮನೆ

ನಿಶ್ಚಿತ ಮೊಗೇರ (30), ಅಳ್ವೇಕೋಡಿಯ ಕನ್ನಡ ಶಾಲೆಯ ಬಳಿ ನಿವಾಸಿ

ಘಟನಾ ಸ್ಥಳದಲ್ಲಿ ಭಾರಿ ಜನ ಸೇರಿಕೆ

ದೋಣಿ ಮುಳುಗಿದ ಸುದ್ದಿ ಸ್ಥಳೀಯವಾಗಿ ಹರಡುತ್ತಿದ್ದಂತೆ, ಭಟ್ಕಳದ ದಡಪ್ರದೇಶದಲ್ಲಿ ಸಾವಿರಾರು ಜನರು ಸೇರಿ ಆತಂಕ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಮೀನುಗಾರರ ಬಂಧುಗಳು ಹಾಗೂ ಸಹಮೀರರು ಆಘಾತದಲ್ಲಿದ್ದಾರೆ.

ಇದೇ ವೇಳೆ ಪಕ್ಕದ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಇಂತಹದ್ದೇ ದುರ್ಘಟನೆ ಇನ್ನೂ ಮಾಸಿಲ್ಲದೇ ಇತ್ತ ಭಟ್ಕಳದಲ್ಲಿ ಸಂಭವಿಸಿದ ಈ ದುರಂತ ಸ್ಥಳೀಯ ಸಮುದಾಯದಲ್ಲಿ ಭಾರೀ ದುಃಖ ಮತ್ತು ಭೀತಿಯನ್ನು ಉಂಟುಮಾಡಿದೆ.

ಶೋಧ ಕಾರ್ಯಾಚರಣೆ ಭಾರೀ ಗತಿ ಪಡೆದು ಮುಂದುವರಿದಿದೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

ರೀಲ್ಸ್ ಹುಚ್ಚಾಟದ ದುರಂತ: ಹುಬ್ಬಳ್ಳಿಯಲ್ಲಿ ಬಾಲಕ ಸಾವು – ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…

1 hour ago

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

14 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

16 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago