Categories: Latest

ಗರುಡಾ ಗ್ಯಾಂಗ್’ನ ಕ್ಯಾಪ್ಟನ್ ಸಹಿತ ಮೂವರನ್ನು ಅರೆಸ್ಟ್ ಮಾಡಿದ ಭಟ್ಕಳ ಪೊಲೀಸರು

ಭಟ್ಕಳ: ರಸ್ತೆಯಲ್ಲಿ ದರೋಡೆಮಾಡುವ ‘ಗರುಡಾ ಗ್ಯಾಂಗ್’ಗೆ ಭಟ್ಕಳ ಪೊಲೀಸರು ತೀವ್ರ ಪಾಠ ಕಲಿಸಿದ್ದಾರೆ. ಬೆಳಗಿನ ಜಾವ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಕ್ಯಾಪ್ಟನ್ ಸೇರಿ ಮೂವರನ್ನು ಬಂಧಿಸಲಾಗಿದೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಮೇ 28ರ ನಸುಕಿನ 3 ಗಂಟೆ. ಭಟ್ಕಳದ ಸಾಗರ ರಸ್ತೆಯ ಬಿಲಾಲ್‌ಖಂಡ ಬಳಿ ಐವರು ಯುವಕರು ಮಂಕಿ ಟೋಪಿ ಹಾಕಿಕೊಂಡು ಕಾರಿನಲ್ಲಿ ಕಾವಲು ಹಿಡಿದಿದ್ದರು. ದರೋಡೆ ಸಂಚು ಸ್ಪಷ್ಟ. ಅವರ ಬಳಿ ಚಾಕು, ಕಾರಪುಡಿ, ಬೆಲ್ಟ್, ಮೊಬೈಲ್, ಹಣ ಎಲ್ಲವೂ ಸಿದ್ದ.

ಸಂದೇಹಕ್ಕೆ ಸ್ಥಳಕ್ಕೆ ಬಂದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರನ್ನು ಕಂಡ ತಕ್ಷಣ ಗ್ಯಾಂಗ್ ಓಡಲು ಯತ್ನಿಸಿತು. ಇನೋವಾ ಕಾರು ಹಿಮ್ಮುಖವಾಗಿ ಓಡಿಸಲು ಯತ್ನಿಸಿದಾಗ ಗಟಾರಕ್ಕೆ ಬಿದ್ದಿತು. ಈ ದರ್ಬಾರದಲ್ಲಿ ಇಬ್ಬರು ಆರೋಪಿಗಳು – ಭಟ್ಕಳದ ಜಿಶಾನ್ ಮತ್ತು ನಬೀಲ್ ಪರಾರಿಯಾಗಿದರು.

ಮೂವರನ್ನು ಹಿಡಿಯಲು ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದ ತಂಡ ನಿರಂತರ ಹೋರಾಟ ನಡೆಸಿತು. ಕೊನೆಗೆ ಮೂರು ಬೇಟೆ! ಬಂಧಿತರು: ಮಂಗಳೂರಿನ ಜಲೀಲ್ ಹುಸೈನ್ (11 ಅಪರಾಧ ಪ್ರಕರಣಗಳ ಆರೋಪಿ), ಭಟ್ಕಳದ ನಾಶೀರ್ ಹಕಿಂ (2 ಪ್ರಕರಣ), ಮತ್ತು ಒಬ್ಬ ಅಪ್ರಾಪ್ತ.

ಪೊಲೀಸರು ಕಾರು, 1500 ರೂ. ನಗದು, ಮೊಬೈಲ್, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾದವರಿಗಾಗಿ ವಿಶೇಷ ತಂಡ ರಚನೆಯಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಎಂ. ನಾರಾಯಣ, ಎಡ್ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ್ ಎಂ.ಕೆ ಬೆನ್ನೆಲುಬಾಗಿ ನಿಂತಿದ್ದರು.

ವರದಿ: ಕುಮಾರ್ ನಾಯಕ್

nazeer ahamad

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

17 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

17 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

17 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

18 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

18 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

2 days ago