ಬೆಳ್ತಂಗಡಿ, ಮೇ 13 – ಬೆಳ್ತಂಗಡಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಭಾಷಣದಿಂದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಗುರುವಾಯನಕೆರೆಯಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅವರು ಮಾಡಿದ ಮತಭೇದ ಉಣಡುವ ಹೇಳಿಕೆಯ ವಿಡಿಯೋ ಇದೀಗ ಹರಿದಾಡುತ್ತಿದೆ.

‘ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ’ ಎಂಬ ಸಂಘಟನೆ ಆಯೋಜಿಸಿದ್ದ “ಸುಹಾಸ್ ಶೆಟ್ಟಿ ನುಡಿನಮನ” ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾರತಿ ಶೆಟ್ಟಿ ಮಾತನಾಡುತ್ತಾ, “ಸರಕಸರಿಗೆ ದರ ಜಾಸ್ತಿಯಾದರೂ ನಾವು ನಮ್ಮವರ ಅಂಗಡಿಗಳಿಂದಲೇ ಖರೀದಿ ಮಾಡಬೇಕು. ಅದು ನಮ್ಮ ಸಮುದಾಯದ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆ. ದರ ಕಡಿಮೆಯೋ ಅಥವಾ ಮಾತು ಸಿಹಿಯೋ ಎಂಬ ಕಾರಣಕ್ಕೆ ಇತರ ಸಮುದಾಯದ ಅಂಗಡಿಗಳ ಕಡೆ ಹೋಗಬಾರದು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅದಕ್ಕೂ ಮೀರಿದ ಹೇಳಿಕೆಯೊಂದರಲ್ಲಿ ಅವರು, “ಗುರುವಾಯನಕೆರೆ ಪೇಟೆಯಲ್ಲಿ ಮುಸ್ಲಿಂ ರಿಕ್ಷಾ ಚಾಲಕರ ಪ್ರಮಾಣ ಹೆಚ್ಚಾಗಿದೆ. ಬೆಳಿಗ್ಗೆ ಆಗುವ ವೇಳೆಗೆ ಹಿಂದೂ ಚಾಲಕರು ಕಾಣೆಯೇ ಆಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಮ್ಮವರು ಹೆಚ್ಚು ಸಕ್ರಿಯರಾಗಬೇಕಾಗಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ನವೀನ್ ನೆರಿಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಭಾರತಿ ಶೆಟ್ಟಿಯ ಈ ಹೇಳಿಕೆ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಸಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಏನೆಂದು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಿರೀಕ್ಷಿಸಲಾಗಿದೆ.

Related News

error: Content is protected !!