Latest

ಮಾಲೀಕನ ನಂಬಿಕೆಗೆ ದ್ರೋಹ: ಮನೆಕೆಲಸದಾ ಮಹಿಳೆಯಿಂದ 1 ಕೋಟಿ ಕಳವು

ಬೆಂಗಳೂರು: ಮಾಲೀಕನ ಮನೆಯಿಂದ ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳವಿಗೆ ಎಳೆಯುತ್ತಿದ್ದ ಮನೆಕೆಲಸದಾಕೆಯನ್ನು ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಾಗಿರುವ ಉಮಾ (43) ಎಂಬ ಮಹಿಳೆ, ರೂ. 67 ಲಕ್ಷ ನಗದು ಹಾಗೂ ಚಿನ್ನಾಭರಣ ಸೇರಿ ಒಟ್ಟು 1 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಕದಿಯುತ್ತಿದ್ದಳು.

ಚಾಮರಾಜಪೇಟೆಯ ನಿವಾಸಿಯಾಗಿರುವ ಉದ್ಯಮಿ ರಾಧಾ ಎಂಬವರು ತನ್ನ ನಿವಾಸದಲ್ಲಿ ಉಮಾಳನ್ನು ತಿಂಗಳಿಗೆ ರೂ. 23,000 ವೇತನದ ಮೇರೆಗೆ ಕೆಲಸಕ್ಕೆ ನೇಮಿಸಿದ್ದರು. ರಾಧಾ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮನೆ ಕೆಲಸಕ್ಕಾಗಿ ಉಮಾಳ ಸಹಾಯ ಬೇಕಾಗಿತ್ತು.

ಆದರೆ ಜೂನ್ 4ರಂದು ಬೆಳಿಗ್ಗೆ ಉಮಾ ಕೈಯಲ್ಲಿ ಬ್ಯಾಗ್ ಹಿಡಿದು ಹೊರಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿತ್ತು. ತಕ್ಷಣ ಅನುಮಾನಗೊಂಡ ರಾಧಾ ತಮ್ಮ ಬೀರನ್ನು ಪರಿಶೀಲಿಸಿದಾಗ, ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ರಾಧಾ ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ನಡೆಸಿ ಉಮಾವನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಕಳವು ಎಸಗಿರುವುದಾಗಿ ಆರೋಪಿಯು ಸ್ವೀಕರಿಸಿದ್ದಾಳೆ.

ಈ ಹಿಂದೆ ಕೂಡ ಉಮಾ ಇನ್ನೊಂದು ಮನೆಯಲ್ಲಿಯೂ ದುಶ್ಚಟದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಂಡಿದ್ದ ಮಾಹಿತಿ ಲಭ್ಯವಾಗಿದೆ. ಪೊಲೀಸರು ಈಗಾಗಲೇ ಉಮಾಳಿಂದ ಭಾಗಶಃ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

nazeer ahamad

Recent Posts

ಆಟವಾಡುತ್ತಿದ್ದ 2 ವರ್ಷದ ಮಗು ಕಾಲುವೆಗೆ ಬಿದ್ದು ದುರ್ಘಟನಾತ್ಮಕ ಸಾವು

ಭಟ್ಕಳ: ತಾಯಿ-ತಂದೆಯ ಕಣ್ಣಿಗೆ ನಂಬಲಾಗದ ದುಃಖ ತರಿದ ಘಟನೆ ಭಟ್ಕಳದ ಆಝಾದ ನಗರದಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಎರಡು…

33 minutes ago

ಗೌರಿಬಿದನೂರು ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಇಬ್ಬರು ಸಾವು

ಗೌರಿಬಿದನೂರು : ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ…

1 hour ago

ಪ್ರೀತಿ ಮದುವೆಯ ಬೆನ್ನಲ್ಲೇ ದೌರ್ಜನ್ಯ: ಹುಬ್ಬಳ್ಳಿಯಲ್ಲಿ ಯುವತಿಯನ್ನು ಗೋಣಿ ಚೀಲದಲ್ಲಿ ಎಳೆದೊಯ್ಯಲಾದ ಪೋಷಕರು

ಹುಬ್ಬಳ್ಳಿ: ಪ್ರೇಮಿಸಿ ವಿವಾಹವಾದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ವರದಿಯಾಗಿದೆ.…

3 hours ago

ಚಾರ್‌ಧಾಮ್ ಯಾತ್ರೆ ವೇಳೆ ಹೆಲಿಕಾಪ್ಟರ್ ಅಪಘಾತ: ಐದು ಯಾತ್ರಿಕರು ಸಾವು.

ಉತ್ತರಾಖಂಡದ ಕೆದಾರನಾಥ ಮಾರ್ಗದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಐವರು ಯಾತ್ರಿಕರು ಮೃತಪಟ್ಟಿದ್ದಾರೆ. ಈ ದುರಂತವು…

6 hours ago

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಯುವ ಮುಖಂಡ ವಿರುದ್ಧ ದೂರು.

ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ವಿರುದ್ಧ ಗಂಭೀರ ಆರೋಪಗಳು ಹೊರ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದ ಆಧಾರದ…

6 hours ago

ಹಾಸನ ಆಸ್ಪತ್ರೆಯಲ್ಲಿ ನೈತಿಕ ಪೊಲೀಸ್ ಗಿರಿ: ಮೊಬೈಲ್ ಕಳವು ಆರೋಪಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ

ಹಾಸನ: ಜಿಲ್ಲೆಯ ಮುಖ್ಯ ಆಸ್ಪತ್ರೆಯ ಆವರಣದಲ್ಲಿ ಮಾನವತೆಯ ಮೌಲ್ಯಗಳಿಗೆ ಧಕ್ಕೆ ತರುವ ಘಟನೆ ನಡೆದಿದೆ. ಮೊಬೈಲ್ ಕಳವು ಆರೋಪದ ಮೇಲೆ…

7 hours ago