ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಏತನೀರಾವರಿ ಹೊಳೆಯಲ್ಲಿ ತಲೆ, ಕೈ ಹಾಗೂ ಕಾಲುಗಳು ಕತ್ತರಿ ಹಾಕಿದ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಶವದ ಭಾಗಗಳು ಪತ್ತೆಯಾಗಿದೆ.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಈ ಶವದ ಅಸ್ಥಿಪಂಜರವನ್ನು ಸ್ಥಳೀಯರು ಇಂದು ಬೆಳಗ್ಗೆ ಕಾಣಿಸಿಕೊಂಡು ಕೂಡಲೇ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಸ್ಥಿತಿಗತಿ ನೋಡುವಾಗಲೇ ಇದು ಸಂಶಯಾಸ್ಪದ ಮರಣ ಎಂಬುದು ಸ್ಪಷ್ಟವಾಗಿದೆ.

ಮಾಹಿತಿ ಪಡೆದ ಕೂಡಲೇ ಮೈಸೂರು ಜಿಲ್ಲೆಯ ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಹಾಗೂ ಬಿಳಿಕೆರೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪೂಜಾ ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆಗಾಗಿ ಸ್ಥಳದ ಸುತ್ತಮುತ್ತ ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲಿಸುವ ಕೆಲಸವೂ ಆರಂಭವಾಗಿದೆ.

ಮೃತ ವ್ಯಕ್ತಿಯ ಗುರುತು ಇಲ್ಲದ ಕಾರಣದಿಂದಾಗಿ ಪೊಲೀಸರು ಈಗ ಶವದ ಗುರುತು ಹಿಡಿಯಲು ಸಾರ್ವಜನಿಕರ ಸಹಾಯ ಬೇಡುತ್ತಿದ್ದಾರೆ. ಶವದ ಇತರೆ ಅಂಗಾಂಗಗಳು ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆ ಹಿನ್ನೆಲೆಯಲ್ಲಿ ಶವವನ್ನು ಚೂರುಚೂರು ಮಾಡಿರುವ ಶಂಕೆಯಿದ್ದು, ಇದನ್ನು ಆಧಾರವಿಟ್ಟು ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದ ಸುಳಿವು ಹುಡುಕುತ್ತಿದ್ದಾರೆ.

ಈ ಘಟನೆ ಕುರಿತಂತೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಜೋರಾಗಿದೆ.

Leave a Reply

Your email address will not be published. Required fields are marked *

error: Content is protected !!