ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗಿವೆ, ಮತ್ತು ಇದೀಗ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ಗೂ ಹ್ಯಾಕಿಂಗ್ ವೈರಸ್ನ ಕಾಟ ಶುರುವಾಗಿದೆ.
ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡುವ ಹೊಸ ತಂತ್ರಾಂಶವು ಪೋಸ್ಟ್ಗಳಲ್ಲಿ ಭಯ ಹುಟ್ಟಿಸಿದೆ. ಈ ತಂತ್ರಾಂಶವನ್ನು ಎಪಿಕೆ ಫೈಲ್ಗಳ ಮೂಲಕ ಹ್ಯಾಕರ್ಸ್ಗಳು ಮೊಬೈಲ್ಗಳ ಸಂಪೂರ್ಣ ನಿಯಂತ್ರಣವನ್ನು ಪಡೆದು, ವೈಯಕ್ತಿಕ ಮಾಹಿತಿಯನ್ನು ದೋಚಬಹುದು. ಇದೇ ಕಾರಣಕ್ಕಾಗಿ ಪೊಲೀಸರು ಎಪಿಕೆ ಫೈಲ್ಗಳನ್ನು ಯಾವುದೇ ರೀತಿಯಲ್ಲಿ ಕ್ಲಿಕ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಸಲಿಯಲ್ಲಿಯೂ, ಈ ತಂತ್ರಾಂಶವು ಪ್ಲೇ ಸ್ಟೋರ್ನಲ್ಲಿಯೇ ಲಭ್ಯವಿದ್ದು, ಸೈಬರ್ ಕಳ್ಳರು ಇದನ್ನು ಕಸ್ಟಮೈಸ್ ಮಾಡಿ ವಾಟ್ಸಾಪ್ ಮೂಲಕ ಹರಡಿಸುತ್ತಿದ್ದಾರೆ. ಇದು ಹಳೆಯ ತಂತ್ರಜ್ಞಾನವಾದರೂ, ಇದನ್ನ ಕ್ಲಿಕ್ ಮಾಡಿದಾಕ್ಷಣ ಹ್ಯಾಕರ್ಸ್ ಗಳಿಗೆ ಎಲ್ಲಾ ಮಾಹಿತಿಯನ್ನು ಲಭ್ಯವಾಗಿಸಲು ಸಹಾಯ ಮಾಡುತ್ತದೆ.
ಆದಕಾರಣ, ನೀವು ಎಪಿಕೆ ಫೈಲ್ ಕ್ಲಿಕ್ ಮಾಡಿದರೆ, ಕೂಡಲೇ ಅದನ್ನು ಡಿಲೀಟ್ ಮಾಡಿ, ನಿಮ್ಮ ಮೊಬೈಲ್ನಲ್ಲಿರುವ ಬ್ಯಾಂಕ್ ಪಾಸ್ವರ್ಡ್, ಮೊಬೈಲ್ ಪಾಸ್ವರ್ಡ್, ಇಮೇಲ್, ಮತ್ತು ಯುಪಿಐ ಪಾಸ್ವರ್ಡ್ಗಳನ್ನು ಕೂಡಲೇ ಬದಲಾಯಿಸಲು ಸೈಬರ್ ಪೊಲೀಸ್ಗಳು ಸಲಹೆ ನೀಡಿದ್ದಾರೆ.
ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ…
ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…