Latest

ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಅಂಗಡಿ ಮಾಲೀಕನಿಂದ ಹಲ್ಲೆ ಮಾಡಿಸಿಕೊಂಡು ಆಸ್ಪತ್ರೆ ಸೇರಿದ ಆಟೋ ಚಾಲಕ.

ಮದ್ಯಪಾನ ಮಾಡಿ ನಿಶೆಯಲ್ಲಿ ಪಾನಶಾಪ್ ಅಂಗಡಿಗೆ ಹೋಗಿ ಬೇಕಾಗಿದ್ದನ್ನ ಪಡೆದು ಕೊಂಡಿದ್ದಾನೆ ನಂತರ ಪಾನ್ ಶಾಪ್ ಅಂಗಡಿ ಮಾಲೀಕ ಹಣ ಕೊಡಿ ಎಂದರೇ ಮದ್ಯಪಾನ ಮಾಡಿದ್ದ ಆಟೋ ಚಾಲಕ ನನಗೇ ಹಣ ಕೆಳುತ್ತಿಯಾ ಮಗನೇ ಎಂದೂ ಹಲ್ಲೆ ಮಾಡಲು ಯತ್ನಿಸಿದ್ದಾನೆ ಆಗ ಪಾನ್ ಶಾಪ್ ಅಂಗಡಿ ಮಾಲೀಕ ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಅಲ್ಲಿಯೇ ಇದ್ದ ಕತ್ತರಿಯಿಂದ ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದ ಘಟನೆ ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಗೋಕುಲ್ ರೋಡ್ ಹರ್ಷ ಪಾನ್ ಶಾಪ್ ದಲ್ಲಿ ನಡೆದಿದೆ.
ನಿನ್ನೆ ಮದ್ಯಾಹ್ನದ ಸಮಯದಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿರುವ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದ ಸ್ಥಳೀಯ ನಿವಾಸಿ ಆಟೋ ಚಾಲಕ ಸೋಮು ಎಂಬ ವ್ಯಕ್ತಿ ಕಂಠ ಪೂರ್ತಿ ಕುಡಿದು ( ಮದ್ಯಪಾನ ಮಾಡಿ ) ಮದ್ಯದ ನೀಶೆಯಲ್ಲಿ ಹರ್ಷ ಪಾನ್ ಶಾಪ್ ಗೆ ಬಂದಿದ್ದಾನೆ ಪಾನ್ ಶಾಪ್ ದಲ್ಲಿ ತನಗೆ ಬೇಕಾಗಿದ್ದನ್ನು ಕೇಳಿ ಪಡೆದಿದ್ದಾನೆ ಆಮೇಲೆ ಪಾನ್ ಶಾಪ್ ಅಂಗಡಿ ಮಾಲೀಕ ಸೋಮು ಗೆ ಬಿಲ್ ಕೊಡಿ ಎಂದು ಕೇಳಿದ್ದಾನೆ ಅದರಿಂದ ಕುಡಿದ ನಿಶೆಯಲ್ಲಿದ್ದ ಸೋಮು ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಪಾನ್ ಶಾಪ್ ಮಾಲೀಕ ವೃದ್ದನಾಗಿದ್ದು ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಎಲೆ (ಬೀಡಾ) ಕತ್ತರಿಸುವ ಕತ್ತರಿಯಿಂದ ಆಟೋ ಚಾಲಕನ (ಸೋಮು) ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದಿದ್ದಾನೆ ಈ ದುರ್ಘನೆಯಲ್ಲಿ ತೀವ್ರ ಗಂಭೀರವಾಗಿ ಗಾಯಗೊಂಡ ಸೋಮುನನ್ನು ಸ್ಥಳೀಯರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಇನ್ನೂ ಮಾಹಿತಿ ತಿಳಿದ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾನ್ ಶಾಪ್ ಅಂಗಡಿ ಮಾಲೀಕ ವೃದ್ಧನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ.

ಭ್ರಷ್ಟರ ಬೇಟೆ

Recent Posts

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

14 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

16 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

2 days ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

2 days ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

2 days ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

3 days ago