ಮದ್ಯಪಾನ ಮಾಡಿ ನಿಶೆಯಲ್ಲಿ ಪಾನಶಾಪ್ ಅಂಗಡಿಗೆ ಹೋಗಿ ಬೇಕಾಗಿದ್ದನ್ನ ಪಡೆದು ಕೊಂಡಿದ್ದಾನೆ ನಂತರ ಪಾನ್ ಶಾಪ್ ಅಂಗಡಿ ಮಾಲೀಕ ಹಣ ಕೊಡಿ ಎಂದರೇ ಮದ್ಯಪಾನ ಮಾಡಿದ್ದ ಆಟೋ ಚಾಲಕ ನನಗೇ ಹಣ ಕೆಳುತ್ತಿಯಾ ಮಗನೇ ಎಂದೂ ಹಲ್ಲೆ ಮಾಡಲು ಯತ್ನಿಸಿದ್ದಾನೆ ಆಗ ಪಾನ್ ಶಾಪ್ ಅಂಗಡಿ ಮಾಲೀಕ ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಅಲ್ಲಿಯೇ ಇದ್ದ ಕತ್ತರಿಯಿಂದ ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದ ಘಟನೆ ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಗೋಕುಲ್ ರೋಡ್ ಹರ್ಷ ಪಾನ್ ಶಾಪ್ ದಲ್ಲಿ ನಡೆದಿದೆ.
ನಿನ್ನೆ ಮದ್ಯಾಹ್ನದ ಸಮಯದಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿರುವ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದ ಸ್ಥಳೀಯ ನಿವಾಸಿ ಆಟೋ ಚಾಲಕ ಸೋಮು ಎಂಬ ವ್ಯಕ್ತಿ ಕಂಠ ಪೂರ್ತಿ ಕುಡಿದು ( ಮದ್ಯಪಾನ ಮಾಡಿ ) ಮದ್ಯದ ನೀಶೆಯಲ್ಲಿ ಹರ್ಷ ಪಾನ್ ಶಾಪ್ ಗೆ ಬಂದಿದ್ದಾನೆ ಪಾನ್ ಶಾಪ್ ದಲ್ಲಿ ತನಗೆ ಬೇಕಾಗಿದ್ದನ್ನು ಕೇಳಿ ಪಡೆದಿದ್ದಾನೆ ಆಮೇಲೆ ಪಾನ್ ಶಾಪ್ ಅಂಗಡಿ ಮಾಲೀಕ ಸೋಮು ಗೆ ಬಿಲ್ ಕೊಡಿ ಎಂದು ಕೇಳಿದ್ದಾನೆ ಅದರಿಂದ ಕುಡಿದ ನಿಶೆಯಲ್ಲಿದ್ದ ಸೋಮು ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಪಾನ್ ಶಾಪ್ ಮಾಲೀಕ ವೃದ್ದನಾಗಿದ್ದು ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಎಲೆ (ಬೀಡಾ) ಕತ್ತರಿಸುವ ಕತ್ತರಿಯಿಂದ ಆಟೋ ಚಾಲಕನ (ಸೋಮು) ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದಿದ್ದಾನೆ ಈ ದುರ್ಘನೆಯಲ್ಲಿ ತೀವ್ರ ಗಂಭೀರವಾಗಿ ಗಾಯಗೊಂಡ ಸೋಮುನನ್ನು ಸ್ಥಳೀಯರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಇನ್ನೂ ಮಾಹಿತಿ ತಿಳಿದ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾನ್ ಶಾಪ್ ಅಂಗಡಿ ಮಾಲೀಕ ವೃದ್ಧನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…