ಆಂಡರಸನ್‌ಪೇಟೆ ಪೊಲೀಸರು ಕರ್ತವ್ಯ ನಿರತ ಲೈನ್‌ಮನ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪೊಗರಪಲ್ಲಿ ನಿವಾಸಿ ಜ್ಞಾನೇಂದ್ರ ರೆಡ್ಡಿಯನ್ನು ಸೋಮವಾರ ಬಂಧಿಸಿದ್ದಾರೆ.

ಮೇ 21ರಂದು ಗುಡಿಬಂಡೆ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಲೈನ್‌ಮನ್ ವೆಂಕಟರಾಮ ಅವರು ಮನೆ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದ ಬೈಕ್‌ ಅನ್ನು ತೆರವಿಗೆ ಹಾಕುವಂತೆ ಅವರು ಬೈಕ್ ಸವಾರ ಜ್ಞಾನೇಂದ್ರ ರೆಡ್ಡಿಗೆ ವಿನಂತಿಸಿದ್ದರಿಂದ ಮಾತಿನ ಚಕಮಕಿ ಉಂಟಾಗಿ, ವಾಗ್ವಾದ ಉಲ್ಬಣವಾಗಿ ಹಲ್ಲೆಗೆ ಕಾರಣವಾಗಿದೆ.

ಘಟನೆ ನಡೆದಾಗಿನಿಂದ ಐದು ದಿನಗಳ ಕಾಲ ಆರೋಪಿಯನ್ನು ಬಂಧಿಸದಿದ್ದ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಬೆಸ್ಕಾಂ ಲೈನ್‌ಮನ್‌ಗಳ ಸಂಘ ಹಾಗೂ ದಲಿತ ಹಿತ ರಕ್ಷಣಾ ಸಂಘಟನೆಗಳು ಸೋಮವಾರ ಆಂಡರಸನ್‌ಪೇಟೆ ಪೊಲೀಸ್ ಠಾಣೆ ಎದುರು ಧರಣಿಗೆ ಸಜ್ಜಾಗಿದ್ದವು.

ಸಂಘಟನೆಗಳ ಒತ್ತಡದ ನಡುವೆಯೇ ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.

Related News

error: Content is protected !!