ಬೀದರ್: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ಸಿಬ್ಬಂದಿ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಹೈದರಾಬಾದ್‌ನಲ್ಲಿ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ತೀವ್ರ ಕಾರ್ಯಾಚರಣೆ:
ಘಟನೆ ಬಳಿಕ 9 ತಂಡಗಳನ್ನು ರಚಿಸಿದ್ದ ಪೊಲೀಸರು ಹಂತಕರನ್ನು ಬೆನ್ನಟ್ಟಿದರು. ಚೇಸಿಂಗ್ ಮೂಲಕ ಹೈದರಾಬಾದ್‌ನಲ್ಲಿ ಅವರನ್ನು ಹಿಡಿದಿದ್ದಾರೆ. ಬಂಧನದ ವೇಳೆ ಅಫ್ಜಲ್ಗಂಜ್ ಪ್ರದೇಶದ ಟ್ರಾವಲ್ ಏಜೆನ್ಸಿಗೆ ನುಗ್ಗಿದ ಖದೀಮರು, ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದರು. ಈ ವೇಳೆ ಗುಂಡು ಮಿಸ್ ಆಗಿ ಟ್ರಾವಲ್ ಏಜೆನ್ಸಿ ಸಿಬ್ಬಂದಿಯೊಬ್ಬರಿಗೆ ತಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಘಟನೆ ವಿವರ:
ಎಟಿಎಂಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿಗೆ ಕಾರದ ಪುಡಿ ಎರಚಿ, ಇಬ್ಬರು ದರೋಡೆಕೋರರು 5-6 ಸುತ್ತು ಗುಂಡು ಹಾರಿಸಿ, ₹83 ಲಕ್ಷ ಹಣದ ಪೆಟ್ಟಿಗೆಯನ್ನು ಕಸಿದು ಪರಾರಿಯಾಗಿದ್ದರು. ಶಂಕಿತರು ಅಂತಾರಾಜ್ಯ ಗ್ಯಾಂಗ್‌ನ ಭಾಗವಾಗಿದ್ದಾರೆ ಎಂದು ಅನುವಾದಿಸಲಾಗಿತ್ತು.

ಬಂಧನ ವಿವರ:
ಅಫ್ಜಲ್ಗಂಜ್ ಮತ್ತು ಬೀದರ್ ಪೊಲೀಸರ ಜಂಟಿ ಕಾರ್ಯಾಚರಣೆಯ ಮೂಲಕ ದರೋಡೆಕೋರರನ್ನು ಹಿಡಿಯಲಾಗಿದೆ. ಅವರು ₹83 ಲಕ್ಷ ದೋಚಿದ ನಂತರ ಹೈದರಾಬಾದ್‌ನಿಂದ ರಾಯ್ಪುರಕ್ಕೆ ಬಸ್ ಬುಕಿಂಗ್ ಮಾಡಿದ್ದ ಮಾಹಿತಿ ತಿಳಿದು, ಅದರ ಆಧಾರದ ಮೇಲೆ ಬಂಧಿಸಿದ್ದಾರೆ.

ಪೊಲೀಸರ ಈ ತ್ವರಿತ ಕಾರ್ಯಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಪಡೆಯುತ್ತಿದೆ.

Related News

error: Content is protected !!