ಕುಂದಗೋಳ: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಅವಾಂತರದಿಂದ ಜನಜೀವನ ಅಸ್ತವ್ಯಸ್ತಗೂಂಡಿದೆ. ಇನ್ನೂ ರೈತರ ಹೊಲಗದ್ದೆಗಳಲ್ಲಿ ನೀರು ನಿಂತು ಜಲವೃಂತಗೊಂಡಿವೆ. ಹಳ್ಳ ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆ ರಸ್ತೆಯ ಡಾಂಬರು ಮೇಲು ಪದರು ಕಿತ್ತು ರಸ್ತೆ ಸಂಚಾರ ಸ್ಥಗಿತಗೂಂಡಿದೆ.
ಹೌದು..! ಇಲ್ಲೊಂದು ಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು. ಈ ಭಾಗದ ಜನರಿಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕುಂದಗೋಳ ತಾಲೂಕಿನ ಚಿಕ್ಕನರ್ತಿ ಹಾಗೂ ಹೀರೆನರ್ತಿ ಮಧ್ಯದಲ್ಲಿ ಹಾದುಹೋಗುವ ಗೊಗಿ ಹಳ್ಳ ವಿಪರೀತ ಮಳೆಯಿಂದಾಗಿ ಡಾಂಬರು ಕೊಚ್ಚಿ ಹೋದ ಪರಿಣಾಮ ರಸ್ತೆ ಸಂಚಾರ ಹರೋಹರ.
ಯರಗುಪ್ಪಿ ಮಾರ್ಗವಾಗಿ ಕುಂದಗೋಳ ಪಟ್ಟಣಕ್ಕೆ ದಿನನಿತ್ಯ ಕೊಲಿ ಕಾರ್ಮಿಕರು, ರೈತರು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಹೀಗೆ ಈ ರಸ್ತೆಯ ಮಧ್ಯ ಸಂಚಾರಿಸುತ್ತಾರೆ. ಪರ್ಯಾಯ ರಸ್ತೆ ಇಲ್ಲದೇ ಸಾರಿಗೆ ಇಲಾಖೆ ಬಸ್ಸುಗಳು ಬೆನಕನಹಳ್ಳಿ ಹಾಗೂ ಚಿಕ್ಕನರ್ತಿ ಗ್ರಾಮದಲ್ಲಿ ನಿಂತು ಪ್ರಯಾಣಕರು ಕರೆದುಹೋಯತ್ತಾರೆ. ಇಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆನಂತರ ಇಲ್ಲಿಗೆ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಬೇಟಿ ನೀಡಿಲ್ಲ. ಇಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಓಡಾಡಲು ಸಮಸ್ಯೆಯಾಗಿದ್ದು. ಕೂಡಲೇ ಈ ಸೇತುವೆ ಅಗಲೀಕರಣ ಆಗಬೇಕುನ್ನವುದೇ ಇಲ್ಲಿ ಜನ ಒತ್ತಾಯಸಿದ್ದಾರೆ.
ಕಳೆದ ಮೂರು ತಿಂಗಳು ಹಿಂದೆ ಮಳೆ ಸುರಿದಿ ಪರಿಣಾಮ ಡಾಂಬರು ಕಿತ್ತು ಹೋಗಿತ್ತು. ಲೋಕೋಪಯೋಗಿ ಇಲಾಖೆ ಅಲೊಂದಿಷ್ಟು ಇಲ್ಲಿದೊಂದಿಷ್ಟು ಮಣ್ಣು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು, ಆದರೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲಿದೆ ಇರುವುದು ಸಾರ್ವಜನಿಕ ವಲಯದಲ್ಲಿ ನಿರಾಶೆ ಊಂಟಾಗಿದೆ.
ಕೊಡಲೇ ಲೋಕೋಪಯೋಗಿ ಇಲಾಖೆ ಸುಗಮ ಸಂಚಾರಕ್ಕೆ ರಸ್ತೆ ಕಲ್ಪಿಸಿ ಕೊಡಬೇಕೆಂದು ಇಲ್ಲಿನ ಸಾರ್ವಜನಿಕರ ಅಗ್ರಹವಾಗಿದೆ.
ವರದಿ; ಶಾನು ಯಲಿಗಾರ
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…
ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…
ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…
ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್ನ ರಾಜ್ಕೋಟ್ ಮೂಲದ ರಾಜೇಶ್ ಸಕ್ರಿಯಾ…