ಚಿತ್ರದುರ್ಗ: ಸಾಲ ಕೇಳಿದ ತಪ್ಪಿಗೆ ಯುವತಿಯೊಬ್ಬಳನ್ನು ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಕಲ್ಲಿನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಅಮಾನುಷ ಕೃತ್ಯದ ಬಲಿಯಾದವರು ರಾಮಘಟ್ಟ ಗ್ರಾಮದ 25 ವರ್ಷದ ಆಶಾ.

ಅಾಶಾ ಖಾಸಗಿ ಶಾಲೆಯೊಂದರಲ್ಲಿ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ ಪರಿಚಿತನಾದ ಅನಿಲಾಸನ್‌ ಎಂಬಾತನಿಗೆ ಸುಮಾರು 50 ಸಾವಿರ ರೂಪಾಯಿ ಸಾಲ ನೀಡಿದ್ದರು. ಆದರೆ ಅನಿಲಾಸನ್ ಸಾಲವನ್ನು ವಾಪಸ್ ನೀಡದೆ ಸಮಯಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆಶಾ ಹಲವು ಬಾರಿ ಹಣ ಕೇಳಿದ್ದರು. ಈ ಕುರಿತು ಕೆಲವರ ಸಮ್ಮುಖದಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಇತ್ತೀಚೆಗಷ್ಟೆ, ಹಣ ಹಿಂತಿರುಗಿಸುವ ನೆಪದಲ್ಲಿ ಅನಿಲಾಸನ್‌ ಆಶಾಗೆ ಕರೆ ಮಾಡಿ, ಚಿತ್ರದುರ್ಗದ ಕೆಂಗುಂಟೆ ಸಮೀಪದ ಅರಣ್ಯ ಪ್ರದೇಶಕ್ಕೆ ಬರಲು ಹೇಳಿದ್ದ. ಆಶಾ ಅಲ್ಲಿ ತಲುಪಿದ ಬಳಿಕ, ಈ ಹಿಂದೆ ಯೋಜಿಸಿದ್ದಂತೆಯೇ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕಲ್ಲಿನಿಂದ ತಲೆಗೆ ಭಾರಿಯಾಗಿ ಹೊಡೆದು ಹತ್ಯೆಗೈದಿದ್ದಾನೆ.

ಘಟನೆ ಬಳಿಕ ಪೊಲೀಸರ ತನಿಖೆಯಿಂದ ಸತ್ಯ ಹೊರಬಿದ್ದಿದ್ದು, ಆರೋಪಿ ಅನಿಲಾಸನ್‌ ಅನ್ನು ಬಂಧಿಸಲಾಗಿದೆ. ಘಟನೆಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾಲ ತಗ್ಗಿಸುವ ನೆಪದಲ್ಲಿ ಜೀವ ತೆಗೆದುಕೊಳ್ಳುವ ತನಕದ ನಿರ್ಧಾರ ದಾರುಣ ಚರ್ಚೆಗೆ ಗ್ರಾಸವಾಗಿದೆ.

Related News

error: Content is protected !!