Latest

ಬೈಕ್‌ನಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಮೈಸೂರು ನಗರ, ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಂಭೀರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಲು ಪೊಲೀಸರಿಗೆ ಯಶಸ್ಸು ಲಭಿಸಿದೆ.

ಪ್ರಕರಣದ ಸಂಕ್ಷಿಪ್ತ ವಿವರ:
ಪಿರ್ಯಾದಿದಾರರಾದ ಎಂ.ಎನ್. ಗಿರೀಶ್ ಬಿನ್ ನಾಗಶೆಟ್ಟಿ (44 ವರ್ಷ), ಎಲೆಕ್ಟ್ರಿಕಲ್ ಕೆಲಸಗಾರರು, ಎಸ್.ವಿ.ಪಿ. ನಗರ, ಮೈಸೂರು, ದಿನಾಂಕ: 13/03/2025 ರಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, “ರಾತ್ರಿ ಸುಮಾರು 9-00 ಗಂಟೆಗೆ ನಾಲ್ಕು ಮಂದಿ ದರೋಡೆಕೋರರು, ಎರಡು ಬೈಕ್‌ಗಳಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ, ನನ್ನ ಹೆಂಡತಿ ಮತ್ತು ಮಕ್ಕಳಿಗೆ ಬೆದರಿಕೆ ಮಾಡಿ, ಮಚ್ಚುಗಳಿಂದ ಗಾಯಗೊಳಿಸಿ, ನನ್ನ 23 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಈ ದೂರಿನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ.ನಂ: 23/2025, ಕಲಂ: 309(6), 329(4), 310(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.

ಪೊಲೀಸರಿಂದ ಕೈಗೊಳ್ಳಲಾದ ಕಾರ್ಯಾಚರಣೆ:
ಮಾನ್ಯ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಐ.ಪಿ.ಎಸ್. ರವರ ನಿರ್ದೇಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ) ಶ್ರೀಮತಿ ಜಾಹ್ನವಿ.ಎಸ್., ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ದೇವರಾಜ ವಿಭಾಗದ ಎ.ಸಿ.ಪಿ. ಶ್ರೀ ರಾಜೇಂದ್ರ ನೇತೃತ್ವದಲ್ಲಿ, ಆಲನಹಳ್ಳಿ ಠಾಣೆಯ ಪಿ.ಐ. ಶ್ರೀಮತಿ ಸ್ವರ್ಣ.ಜಿ.ಎಸ್., ಎಸ್.ಐ. ಗಂಗಾಧರ್ ಹಾಗೂ ಸಿಬ್ಬಂದಿಗಳಾದ ಚೇತನ, ಕಿರಣ್ ರಾಥೋಡ್, ಲಿಂಗರಾಜಪ್ಪ, ಮಂಜುನಾಥ್ ಗದಗೈಗೋಳ, ಮಲ್ಲಿಕಾರ್ಜುನ, ಸಂತೋಷ್ ಕುಮಾರ್, ಶಾಜಿಯಾ ಬಾನು, ಅಭಿಷೇಕ್ ಮತ್ತು ಆಟೋಮಿಷನ್ ಸೆಂಟರ್‌ನ ಎಸ್.ಐ. ಚಂದ್ರಶೇಖರ್ ರಾವ್, ಸಿಬ್ಬಂದಿಗಳಾದ ಪ್ರದೀಪ್, ಶಿವಕುಮಾರ್ ಹಾಗೂ ಸಿ.ಡಿ.ಆರ್ ವಿಭಾಗದ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಬಂಧಿತ ಆರೋಪಿಗಳು:

1. ಯೋಗಾನಂದ @ ಯೋಗ @ ಆನಂದ @ ದಡಿಯಾ @ ಉಪೇಂದ್ರ ಬಿನ್ ಕೃಷ್ಣಗೌಡ (34 ವರ್ಷ), ಆಟೋ ಚಾಲಕ, ಮಾರಸಿಂಗನಹಳ್ಳಿ, ಮದ್ದೂರು, ಮಂಡ್ಯ ಜಿಲ್ಲೆ.

2. ಅಭಿಷೇಕ್ @ ಬ್ಯಾಡ್ರಾಯನಪುರ ಅಭಿ, ಆಟೋ ಚಾಲಕ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು.

3. ಮನು ಕುಮಾರ್ ಬಿನ್ ವೀರಯ್ಯ (27 ವರ್ಷ), ಬಿತ್ತರಿ ನೀರಿನ ಕ್ಯಾನ್ ಡಿಲಿವರಿ ಕೆಲಸ, ಕಣ್ಣೂರು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ.

4. ಆಕಾಶ್ ಬಿನ್ ನಾಗರಾಜು (26 ವರ್ಷ), ಟ್ಯಾಟೂ ಕಲಾವಿದ, ಕಣ್ಣೂರು, ಕೊಳ್ಳೆಗಾಲ, ಚಾಮರಾಜನಗರ.

5. ವೆಂಕಟೇಶ್.ಎಸ್ @ ಗಜ ಬಿನ್ ಶಿವಣ್ಣ (26 ವರ್ಷ), ಕಾರು ಚಾಲಕ, ಗುಂಡಶೆಟ್ಟಿಹಳ್ಳಿ, ಚನ್ನರಾಯಪಟ್ಟಣ, ಹಾಸನ.

ವಶಪಡಿಸಿದ ಮಾಲುಗಳು:

23 ಗ್ರಾಂ ತೂಕದ ಚಿನ್ನದ ಸರ

2 ಮಚ್ಚುಗಳು

2 ಡ್ರಾಗನ್‌ಗಳು

2 ರಾಡುಗಳು

ಮಾಸ್ಕ್, ಕೈಕವಚಗಳು, ಹೆಲ್ಮೆಟ್‌ಗಳು

ಬಜಾಜ್ ಪಲ್ಸರ್ 125 ಮತ್ತು ಬಜಾಜ್ ಪಲ್ಸರ್ 150 ಬೈಕ್‌ಗಳು
ಒಟ್ಟು ಮೌಲ್ಯ: ₹4,00,000

ಆರೋಪಿಗಳು ಬಳಸಿದ ವಾಹನಗಳ ವಿವರ:
ಈ ದರೋಡೆಕೋರರು ಬಳಸಿದ ಬೈಕ್‌ಗಳು ಮೈಸೂರಿನ ಘಟನೆಗೆ ಮೊದಲೇ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೋಷಿತ ಪ್ರಕರಣಗಳಾಗಿ ದಾಖಲಾಗಿವೆ:

1. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 23/2025, ಕಲಂ 303(2) ಬಿ.ಎನ್.ಎಸ್.

2. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 57/2025, ಕಲಂ 303(2) ಬಿ.ಎನ್.ಎಸ್.

 
ಆಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮದ ಫಲವಾಗಿ ಪ್ರಕರಣ ಬೆರಿಸಿದ್ದು. ಮಾನ್ಯ ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ವರದಿ: ಬಸವಣ್ಣ

nazeer ahamad

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

13 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

13 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

13 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

13 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

14 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

1 day ago