
ಬೆಂಗಳೂರು, ಏಪ್ರಿಲ್ 21: ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಾಹನ ಚಲಾವಣೆ ಸಂದರ್ಭದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುತ್ತಿರುವ ದೃಶ್ಯಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ.
ಇತ್ತೀಚೆಗೆ ಜೆ.ಪಿ.ನಗರದ 8ನೇ ಹಂತದಲ್ಲಿ ಒಂದು road rage ಘಟನೆ ನಡಿತಿದ್ದು, ಆತಂಕ ಸೃಷ್ಟಿಸಿದೆ. ಮೂಲ ಮಾಹಿತಿಯ ಪ್ರಕಾರ, ಕಾರು ಚಾಲಕನು ಶಾಂತಿಯುತವಾಗಿ ತನ್ನ ದಾರಿಯಲ್ಲಿ ಸಾಗುತ್ತಿದ್ದ ವೇಳೆ, ಆತೋ ಚಾಲಕನು ಆತನಿಗೆ ಅಡ್ಡವಾಗಿ ನಿಲ್ಲಿಸಿ ಹಾರ್ನ್ ಹಾಕುತ್ತಾ ಕಿರಿಕಿರಿಯಾಗಿದ್ದ. ಕಾರು ಚಾಲಕ ಈ ಅಸಹನೀಯ ವರ್ತನೆಯ ಕುರಿತು ಪ್ರಶ್ನಿಸಿದಾಗ, ಆತೋ ಚಾಲಕನಿಂದ ಮಧ್ಯದ ಬೆರಳು ತೋರಿಸಿ ನಿಂದನೆಗೂ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಸಣ್ಣ ಮಾತು ತಕರಾರಾಗಿ ಬದಲಾಗಿದ ನಂತರ, ಆಟೋ ಚಾಲಕ ತನ್ನ ಗೆಳೆಯರೊಂದಿಗೆ ವಾಹನವನ್ನು ಅಡ್ಡಗಟ್ಟಿ ಮತ್ತಷ್ಟು ಗಲಾಟೆ ಸೃಷ್ಟಿಸುವ ಯತ್ನವನ್ನೂ ಮಾಡಿದ್ದ. ಘಟನೆಯ ತೀವ್ರತೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕಾರು ಚಾಲಕ ತಕ್ಷಣ ಹೊಯ್ಸಳ ಪೊಲೀಸರಿಗೆ ಕರೆಮಾಡಿದ. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆಟೋ ಚಾಲಕ ಹಾಗೂ ಆತನ ಜೊತೆಗಿದ್ದ ಯುವಕರು ಸ್ಥಳದಿಂದ ಪರಾರಿಯಾಗಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ರಸ್ತೆ ಮೇಲೆ ಶಾಂತಿ ಕಾಪಾಡಿಕೊಳ್ಳಬೇಕು ಎಂಬ ಮನವಿ ಸಹ ಪೊಲೀಸ್ ಇಲಾಖೆ ಮಾಡಿದೆ.