Latest

“ಅಲ್ಲಾ ನಮಗೆ ಪ್ರಧಾನಿ ಮೋದಿ ಅಂತಹ ನಾಯಕನನ್ನು ನೀಡಿ” ಪಾಕಿಸ್ತಾನ ಯುವಕನ ಬೇಡಿಕೆ; ವಿಡಿಯೋ ವೈರಲ್.

ಪಾಕಿಸ್ತಾನದ ಯುವಕನೊಬ್ಬ ನಮಗೆ ಭಾರತದ ಪ್ರಧಾನಿ ಮೋದಿಯಂತಹ ನಾಯಕ ಬೇಕು ಎಂದು ಹೇಳುವ ವೀಡಿಯೊವನ್ನ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಯುವಕ, ‘ನಾವು ಪಾಕಿಸ್ತಾನದ ಯಾವುದೇ ನಾಯಕನನ್ನ ಬಯಸೋದಿಲ್ಲ. ಭಾರತದ ಪ್ರಧಾನಿ ಮೋದಿಯವರಂತಹ ನಾಯಕನನ್ನ ಮಾತ್ರ ಬಯಸುತ್ತೇವೆ’ ಎಂದು ಹೇಳಿದ್ದಾನೆ. ವೀಡಿಯೊದಲ್ಲಿ, ಪಾಕಿಸ್ತಾನವು ಇನ್ಮುಂದೆ ಭಾರತಕ್ಕೆ ಸಮನಾಗಲು ಸಾಧ್ಯವಿಲ್ಲ ಎಂದಿದ್ದಾನೆ.
ವಿಭಜನೆಯ ಹೊರತಾಗಿಯೂ, ಭಾರತವು ಸಾಕಷ್ಟು ಅಭಿವೃದ್ಧಿಯಾಗಿದೆ. ಆದ್ರೆ, ಪಾಕಿಸ್ತಾನವು ಅಲ್ಲಿಯೇ ಉಳಿದಿದೆ ಎಂದು ಯುವಕ ಹೇಳಿದ್ದಾನೆ. ಇನ್ನು ವಿಭಜನೆಯಾಗದಿದ್ದರೆ, ನಾವು ಇಂದು ಭಾರತದ ಜನರಂತೆ ಟೊಮೆಟೊವನ್ನ 20 ರೂ.ಗೆ ಮತ್ತು ಪೆಟ್ರೋಲ್ ಅನ್ನು 150 ರೂ.ಗೆ ಖರೀದಿಸುವುತ್ತಿದ್ದೇವು ಎಂದ ನೋವು ತೋಡಿಕೊಂಡಿದ್ದಾನೆ. ಇನ್ನು ವೀಡಿಯೊದಲ್ಲಿ, ಯುವಕ ಭಾರತದೊಂದಿಗೆ ಪ್ರಧಾನಿ ಮೋದಿಯವರನ್ನ ಹೊಗಳುತ್ತಿರುವುದನ್ನ ಕಾಣಬಹುದು.

ನಮಗೆ ನವಾಜ್ ಷರೀಫ್ ಅಥವಾ ಇಮ್ರಾನ್ ಖಾನ್ ಬೇಕಿಲ್ಲ, ಅಲ್ಲಾಹನು ನಮಗೆ ಮೋದಿಯನ್ನು ಕೊಡಲಿ.! ಈ ವೀಡಿಯೊವನ್ನ ಫೆಬ್ರವರಿ 20ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಪಾಕಿಸ್ತಾನದ ಯೂಟ್ಯೂಬರ್ ಸನಾ ಅಮ್ಜದ್ ಅವರ ಎಪಿಸೋಡ್ನ ಈ ಕ್ಲಿಪ್ ಈಗ ಹೆಚ್ಚು ವೈರಲ್ ಆಗುತ್ತಿದೆ. ಆದಾಗ್ಯೂ, ಯುವಕ ವೀಡಿಯೊದಲ್ಲಿ ಭಾರತ ಮತ್ತು ಪಿಎಂ ಮೋದಿಯವರ ಬಗ್ಗೆ ಅನೇಕ ವಿಷಯಗಳನ್ನ ಹೇಳಿದ್ದಾನೆ ಮತ್ತು ಅವನು ಭಾರತ ಮತ್ತು ಪ್ರಧಾನಿಯನ್ನ ಅನೇಕ ಸ್ಥಳಗಳಲ್ಲಿ ಶ್ಲಾಘಿಸುತ್ತಿರುವುದು ಕಂಡುಬಂದಿದೆ. ವೀಡಿಯೊ ಮುಗಿಯುವ ಮೊದಲು, ಯುವಕ ತನ್ನ ಬಯಕೆಯನ್ನ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲಿ ಯಾವುದೇ ಪಾಕಿಸ್ತಾನಿ ನಾಯಕನನ್ನ ಬೆಂಬಲಿಸೋದಿಲ್ಲ ಎಂದು ಹೇಳಿದ್ದಾನೆ. ನಾವು ನವಾಜ್ ಷರೀಫ್ ಅಥವಾ ಇಮ್ರಾನ್ ಖಾನ್ ಅವರನ್ನ ಬಯಸುವುದಿಲ್ಲ. ಅಷ್ಟೇ ಅಲ್ಲ, ಪರ್ವೇಜ್ ಮುಷರಫ್ ಮತ್ತು ಭುಟ್ಟೋ ಅವರನ್ನೂ ಬಯಸುವುದಿಲ್ಲ ಎಂದು ಹೇಳಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಆ ವ್ಯಕ್ತಿಯು ಕ್ಲಿಪ್’ನ ಕೊನೆಯಲ್ಲಿ ‘ಅಲ್ಲಾಹ್ ನಮಗೆ ಮೋದಿಯನ್ನು ನೀಡಿ’ ಎಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾನೆ.

ಭ್ರಷ್ಟರ ಬೇಟೆ

Recent Posts

“ಶೇ.100ಫಲಿತಾಂಶದ ನಾಟಕದ ಹಿಂದೆ ಸುಳ್ಳು ಆಟ: ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳ ದುರ್ಬಳಕೆ”

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…

3 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

18 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

20 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

2 days ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

2 days ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

2 days ago