ಮಂತ್ರಾಲಯ, ಜುಲೈ 13 – ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿಯ ಯಾತ್ರೆಯು ದುರ್ಘಟನೆಯಲ್ಲಿ ಅಂತ್ಯ ಕಂಡಿದೆ. ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಮೂವರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಹಾಸನ ಜಿಲ್ಲೆಯಿಂದ ಮಂತ್ರಾಲಯಕ್ಕೆ ಬಂದಿದ್ದ ಅಜಿತ್ (20), ಸಚಿನ್ (20) ಮತ್ತು ಪ್ರಮೋದ್ (19) ಎಂಬವರು ದರ್ಶನ ಮುಗಿಸಿದ ಬಳಿಕ ಸ್ನಾನಕ್ಕಾಗಿ ನದಿಗೆ ತೆರಳಿದ್ದರು. ಆದರೆ, ಈ ವೇಳೆ ನದಿ ತುಂಬಿ ಹರಿಯುತ್ತಿದ್ದರೂ ಅವರು ಎಚ್ಚರಿಕೆ ಸೂಚನೆಗಳನ್ನು ಪಾಲಿಸದೆ ನದಿಗೆ ಇಳಿದಿದ್ದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ನೀರಿನ ಸೆಳೆತ ಭಾರಿ ಇದ್ದ ಕಾರಣ ಯುವಕರು ಈಜಲು ಸಾಧ್ಯವಾಗದೆ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಸ್ಥಳೀಯ ಅಗ್ನಿಶಾಮಕದಳ ಮತ್ತು ಈಜುಗಾರರ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದೆ.

ಸಂಜೆವರೆಗೂ ಯುವಕರ ಪತ್ತೆಗಾಗಿ ಶೋಧ ನಡೆಯುತ್ತಿದ್ದು, ಈ ಘಟನೆ ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.

ಅಧಿಕಾರಿಗಳು ಭಕ್ತರಿಗೆ ನದಿಯ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಿರುವ ಸಂದರ್ಭದಲ್ಲೂ, ನಿರ್ಲಕ್ಷ್ಯವು ದುರ್ಘಟನೆಯಾಗಿ ಪರಿಣಮಿಸಿದೆ.

ಪರಿವಾರಸ್ಥರು ಹಾಗೂ ಸಹಯಾತ್ರಿಕರಲ್ಲಿ ಆಘಾತ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

Related News

error: Content is protected !!