ಜೀವನದಲ್ಲಿ ವಿಧಿ ಕೆಲವೊಮ್ಮೆ ಯೂ-ಟರ್ನ್ ಹೊಡೆದಾಗ ಎಂತಹವರೂ ಒಮ್ಮೆಗಂತೂ ಕಂಗಾಲಾಗುವುದು ಸಹಜ. ಅಂತಹದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಹೈದರಾಬಾದ್ನಿಂದ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಯುವತಿ ಹಸಿವಿನಿಂದ ಕಂಗೆಟ್ಟು ರಸ್ತೆ ಬದಿಯಲ್ಲಿ ಭಿಕ್ಷೆ ಎತ್ತುವ ಕಥೆ ಬೆಳಕಿಗೆ ಬಂದಿದೆ. ಈ ಯುವತಿ, ಡೆಟ್ರಾಯಿಟ್ನ ಟ್ರೈನ್ ವಿಶ್ವವಿದ್ಯಾಲಯದಿಂದ ತನ್ನ ಎಂಎಸ್ ಅನ್ನು ಮುಂದುವರಿಸಲು ಹೋದ ಹೈದರಾಬಾದ್ ನ ಮಹಿಳೆ ಚಿಕಾಗೋದಲ್ಲಿ ಹಸಿವಿನಿಂದ ಬಳಲುತ್ತಾ ರಸ್ತೆ ಬದಿಯಲ್ಲಿ ಕುಳಿತಿರುವುದು ಕಂಡು ಬಂದಿದೆ.
ಮಜ್ಲಿಸ್ ಬಚಾವೊ ತೆಹ್ರೀಕ್ ( MBT ) ಟ್ವಿಟರ್ ನಲ್ಲಿ ಅಮ್ಜದುಲ್ಲಾ ಖಾನ್ ಅವರ ವಕ್ತಾರರು ಹಂಚಿಕೊಂಡ ವೀಡಿಯೊ ಮಹಿಳೆಯನ್ನು ಸಂಪೂರ್ಣವಾಗಿ ದುರಂತ ಸ್ಥಿತಿಯಲ್ಲಿ ತೋರಿಸುತ್ತಿದೆ. ಆಕೆ ಅಮೆರಿಕದ ಪ್ರಸಿದ್ಧ ನಗರವಾದ ಚಿಕಾಗೋದ ಬೀದಿಯ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡುಬಂದಿದೆ.
ಈ ವಿಡಿಯೋದಲ್ಲಿ ಆ ಮಹಿಳೆ, ತನ್ನ ಹೆಸರನ್ನು ಸೈದಾ ಲುಲು ಮಿನ್ಹಾಜ್ ಜೈಡಿ ಎಂದು ಹೇಳಿದ್ದು, ತಾನು ಹೈದರಾಬಾದ್ಗೆ ಸೇರಿದವಳು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದಾಗ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ದೇಹದಿಂದ ಪರೀಕ್ಷೆಗೆಂದು ರಕ್ತದ ಮಾದರಿಗಳನ್ನು ಹೊರತೆಗೆದಾಗ ಆ ಮಹಿಳೆ ಇನ್ನಷ್ಟು ದುರ್ಬಲರಾದರು.
ವೀಡಿಯೊದಲ್ಲಿರುವ ವ್ಯಕ್ತಿಯು ಮಹಿಳೆಗೆ ದಾಲ್-ರೋಟಿಯನ್ನು ರಾತ್ರಿಯ ಊಟಕ್ಕೆ ನೀಡುತ್ತಾನೆ. ಜತೆಗೆ ಆಕೆಗೆ ಸಹಾಯ ಮಾಡುವ ಭರವಸೆಯನ್ನೂ ನೀಡುತ್ತಾನೆ. ಅವನು ಆಕೆಯಲ್ಲಿ ಭಾರತಕ್ಕೆ ಹಿಂತಿರುಗಲು ಕೇಳಿಕೊಳ್ಳುತ್ತಾನೆ. ಈ ನಡುವೆ, ಟ್ವಿಟರ್ನಲ್ಲಿ ಮಹಿಳೆಯ ಫೋಟೊ ಹಾಗೂ ದಾಖಲೆಗಳು ವೈರಲ್ ಆಗಿದ್ದು, ಸುದ್ದಿ ಶರವೇಗದೊಂದಿಗೆ ಹೈದರಾಬಾದ್ ತಲುಪಿದೆ. ಮಹಿಳೆಯ ತಾಯಿ ತನ್ನ ಮಗಳನ್ನು ಭಾರತಕ್ಕೆ ಮರಳಿ ಕರೆತರಲು ಸಹಾಯ ಕೋರಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ.
ಈ ವೀಡಿಯೊದಿಂದ ದಿಗ್ಭ್ರಮೆಗೊಂಡ ನೆಟ್ಟಿಗರು, ಆಕೆಯನ್ನು ಮತ್ತೆ ಹೈದರಾಬಾದ್ ಗೆ ತರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ಬಳಕೆದಾರರಲ್ಲಿ ಒಬ್ಬರು, ‘ಅವರ ಸ್ಥಿತಿಯನ್ನು ನೋಡಿ ನನಗೆ ಆಘಾತವಾಗಿದೆ. ನನಗೆ ಅವರು ಬಾಲ್ಯದಿಂದಲೂ ಪರಿಚಿತರು. ಅವರು ಸ್ಟೂಡಿಯಸ್ ವಿದ್ಯಾರ್ಥಿಯಾಗಿದ್ದರು’ ಎಂದು ಕಾಮೆಂಟ್ ಮಾಡಿದ್ದಾರೆ.
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…