Latest

ಸಾವಿನ ದವಡೆಯಲ್ಲಿ ನಿಂತು ವಿಡಿಯೋ ಮಾಡಿದ ಯುವಕ; ಮನಕಲಕುವಂತಿದೆ ದೃಶ್ಯ.

ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ವಿದ್ಯಾರ್ಥಿಯು ಸೆರೆಹಿಡಿದಿರುವ ಭೀಕರ ಕ್ಷಣಗಳು ಟರ್ಕಿ ದೇಶದ ಜನರ ಹೃದಯವನ್ನು ಕರಗಿಸಿದೆ.
ವಿದ್ಯಾರ್ಥಿ ತಾಹಾ ಎರ್ಡೆಮ್ ಮತ್ತು ಅವರ ಕುಟುಂಬವು ಫೆ.6 ರ ಮುಂಜಾನೆ ಅವರ ತವರು ಆದಿಯಮಾನ್‌ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಅವರು ವಾಸವಿದ್ದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಭೂಕಂಪದಿಂದ ಕುಸಿದು ಬಿತ್ತು.
ಸೆಕೆಂಡುಗಳಲ್ಲಿ, ತಾಹಾ, ಅವನ ತಾಯಿ, ತಂದೆ ಮತ್ತು ಕಿರಿಯ ಸಹೋದರ ಮತ್ತು ಸಹೋದರಿ ಕಟ್ಟಡದೊಂದಿಗೆ ಕೆಳಕ್ಕೆ ಬಿದ್ದರು. ಟನ್‌ಗಟ್ಟಲೆ ಕಲ್ಲುಮಣ್ಣುಗಳ ಅಡಿಯಲ್ಲಿ ಅವರು ಸಿಕ್ಕಿಬಿದ್ದರು. ಈ ವೇಳೆ ತಾಹಾ ತನ್ನ ಸೆಲ್‌ಫೋನ್ ತೆಗೆದುಕೊಂಡು ಅಂತಿಮ ವಿದಾಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾನೆ. ತನ್ನ ಮರಣದ ನಂತರ ಫೋನ್ ಪತ್ತೆಯಾಗುತ್ತದೆ ಎಂದು ಆಶಿಸಿ, “ಇದು ನಾನು ನಿಮಗಾಗಿ ಚಿತ್ರೀಕರಣ ಮಾಡುವ ಕೊನೆಯ ವೀಡಿಯೊ ಎಂದು ನಾನು ಭಾವಿಸುತ್ತೇನೆ” ಎಂದು ತನ್ನ ಸುತ್ತಮುತ್ತ ಕಟ್ಟಡದ ಅವಶೇಷ ಬಿದ್ದ ಕಿರಿದಾದ ಜಾಗದಲ್ಲಿ ತಾಹಾ ವಿಡಿಯೋ ರೆಕಾರ್ಡ್ ಮಾಡಿದ್ದಾನೆ
“ನಾನು ಪಶ್ಚಾತ್ತಾಪಪಡುವ ಅನೇಕ ವಿಷಯಗಳಿವೆ, ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ, ನಾನು ಇಂದು ಜೀವಂತವಾಗಿ ಇಲ್ಲಿಂದ ಹೊರಬಂದರೆ ನಾನು ಮಾಡಲು ಬಯಸುವ ಅನೇಕ ಕೆಲಸಗಳಿವೆ, ನಾವು ಇನ್ನೂ ನಡುಗುತ್ತಿದ್ದೇವೆ, ನನ್ನ ಕೈ ಅಲುಗಾಡುತ್ತಿಲ್ಲ, ಇದು ಭೂಕಂಪವಾಗಿದೆ.” ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಹಾಗೂ ವಿಡಿಯೋ ಕೊನೆಯಲ್ಲಿ ಅರೇಬಿಕ್ ಭಾಷೆಯಲ್ಲಿ ದೇವರನ್ನು ಜಪಿಸುತ್ತಾನೆ.
ಕೈ ಕಾಲನ್ನೂ ಆಡಿಸಲಾಗದೇ ಬದುಕಿಗಾಗಿ ಹಾತೊರೆಯುತ್ತಾ ನಡುಗುತ್ತಿದ್ದ ಕಟ್ಟಡದ ಅವಶೇಷಗಳ ಮಧ್ಯೆ ವಿಡಿಯೋ ಮಾಡಿದ್ದು ಇದೀಗ ಅದು ವೈರಲ್ ಆಗ್ತಿದೆ. ನಾಶವಾದ ಕಟ್ಟಡದಿಂದ ತಾಹಾ ನನ್ನು ರಕ್ಷಿಸಲಾಗಿದೆ ಹಾಗೂ ಕೆಲವು ಗಂಟೆಗಳ ಬಳಿಕ ಅವರ ಕುಟುಂಬದವರನ್ನು ರಕ್ಷಿಸಿದ್ದು ಸಾವಿನ ದವಡೆಯಿಂದ ಪಾರಾದ ಕುಟುಂಬ ಈಗ ಮತ್ತೆ ಒಂದಾಗಿದೆ.

ಭ್ರಷ್ಟರ ಬೇಟೆ

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

24 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

1 day ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

1 day ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 days ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

2 days ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

2 days ago