Latest

ಬನವಾಸಿಯಲ್ಲಿ ಪಶುಗಳಿಗೆ ವಿಕೋಪಕ್ಕೆ ತಲುಪಿರುವ ಚರ್ಮ-ಗಂಟು ರೋಗ.

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬರುವ ಬನವಾಸಿಯಲ್ಲಿ ಸಾಕಷ್ಟು ಜನರು ಜಾನುವಾರುಗಳನ್ನು ಅವಲಂಬಿಸಿ ತಮ್ಮ ಕೃಷಿ ಕಾರ್ಯಗಳಿಗೆ ದಿನನಿತ್ಯ ಹಾಲು ಮಾರಾಟ ಮಾಡುವುದು ಹಾಗೂ ಗೊಬ್ಬರ ಮುಂತಾದವುಗಳನ್ನು ಜಾನುವಾರುಗಳಿಂದ ಪಡೆದು ಬಡ ಕುಟುಂಬಗಳು ಜೀವನವನ್ನು ಸಾಗಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿರಸಿಯ ಬನವಾಸಿಯಲ್ಲಿ ಸಾಕಷ್ಟು ಜಾನುವಾರುಗಳಿದ್ದು ಈ ಜಾನುವಾರುಗಳಲ್ಲಿ ಸರಿ ಸುಮಾರು 64 ಹಸುಗಳು ಚರ್ಮ ರೋಗ ಗಂಟು ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಬನವಾಸಿಯ ಬಾಗದ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಅಂತೂ ಈ ರೋಗ ಹೇಳತೀರದಾಗಿದೆ. ಈ ರೋಗವು ಏಷ್ಟು ಭಯಾನಕವಾಗಿವೆ ಎಂದರೆ ಒಂದು ಜನುವರುವಿಗೆ ಬಂದರೆ ಮತ್ತೊಂದು ಸಮೀಪವಿರುವ ಜನುವಾರುವಿಗೆ ಕೇವಲ ಗಾಳಿಯ ಮುಖಾಂತರ ಇಲ್ಲವಾದರೆ ರೋಗ ಬಂದ ಜಾನುವಾರುವಿಗೆ ಕಚ್ಚಿದ ಸೊಳ್ಳೆ ಮತ್ತೊಂದು ಹಸುವಿಗೆ ಕಚ್ಚಿದರೆ ಆ ಹಸುವಿಗೂ ಕೂಡ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಶು ವದ್ಯರು ತಿಳಿಸಿದ್ದಾರೆ . ಈ ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪಶುಗಳಿಗೆ ಲಸಿಕೆ ಹಾಕಲಾಗಿದ್ದು ಇನ್ನೂ ಉಳಿದ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುವ ಕೆಲಸ ನಡೆಯುತ್ತಿದೆ.ಇನ್ನೂ ಮುಂದಾದರು ರೈತರ ಬೆನ್ನೆಲುಬಾದ ಜಾನುವಾರುಗಳನ್ನು ಪಶು ಸಂಗೋಪನಾ ಇಲಾಖೆ ಅಧಿಕಾರಿ ವದ್ಯರು ಎಚ್ಚೆತ್ತುಕೊಂಡು ಉಳಿದ ಜಾನುವಾರುಗಳಿಗೆ ಲಸಿಕೆ ನೀಡಿ ಜನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರಾ ಕಾದು ನೋಡಬೇಕಾಗಿದೆ….

ವರದಿ: ಶ್ರೀಪಾದ್ ಹೆಗಡೆ

ಭ್ರಷ್ಟರ ಬೇಟೆ

Recent Posts

ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಗಲಾಟೆ – ಕಾಂಗ್ರೆಸ್ ಮುಖಂಡ ಧನಂಜಯ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ನಗರದ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಧನಂಜಯ್ ಸೇರಿದಂತೆ ಕೆಲವರ ವಿರುದ್ಧ…

2 hours ago

ಮಡಿಕೇರಿ ನಗರದಲ್ಲಿ ಆರ್ಥಿಕ ಸಂಕಷ್ಟದಿಂದ ವ್ಯಕ್ತಿಯೊಬ್ಬರ ಆತ್ಮಹತ್ಯೆ

ಮಡಿಕೇರಿ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದ ವ್ಯಕ್ತಿಯೊಬ್ಬರು ಗುಂಡು ಹೊಡೆದು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಘಟನೆ ಮಡಿಕೇರಿ ಕೋಟೆ…

2 hours ago

“ಪತ್ನಿಯ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸತ್ಯ ಬಹಿರಂಗ

ಬೆಳಗಾವಿ: ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ 33 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಅನಗೋಳದ ದುರ್ಗಾ…

3 hours ago

ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಪತ್ತೆ: ವಾರ್ಡನ್ ಕಿರುಕುಳಕ್ಕೆ ತೀವ್ರ ಆರೋಪ”

ಚಿಕ್ಕಬಳ್ಳಾಪುರ, ಮೇ 30: ತಿಪ್ಪೇನಹಳ್ಳಿಯ ಸಮೀಪದಲ್ಲಿರುವ ಮಕ್ಕಳ ಆಸರೆ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಇದೀಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ವಾರ್ಡನ್…

3 hours ago

ಐಪಿಎಲ್ ಟಿಕೆಟ್ ಕಳ್ಳ ವಹಿವಾಟು – ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳು ಅಮಾನತು

ಬೆಂಗಳೂರು ನಗರದಲ್ಲಿ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್‌ಗಳ ಅಕ್ರಮ ಮಾರಾಟ ಪ್ರಕರಣಕ್ಕೆ ತೊಡಗಿರುವ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳನ್ನು…

4 hours ago

ವಿಜಿಲೆನ್ಸ್ ದಾಳಿಯಿಂದ ಗಾಬರಿಗೊಂಡ ಎಂಜಿನಿಯರ್: 500 ರೂ. ಬಂಡಲ್​ಗಳನ್ನು ಕಿಟಕಿಯಿಂದ ಹೊರ ಎಸೆದ ಘಟನೆ

ಭುವನೇಶ್ವರ: ಒಡಿಶಾದಲ್ಲಿ ವಿಜಿಲೆನ್ಸ್ (ವಿಚಕ್ಷಣ) ಅಧಿಕಾರಿಗಳ ದಾಳಿಯಿಂದ ಭಯಭೀತರಾದ ಸರ್ಕಾರಿ ಎಂಜಿನಿಯರ್ ಒಬ್ಬರು ತಮ್ಮ ಮನೆಯಿಂದ ನಗದು ಬಂಡಲ್‌ಗಳನ್ನು ಕಿಟಕಿ…

6 hours ago