ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯುವತಿ ಒಬ್ಬರಿಗೆ ಮಾರ್ಚ್ 2ನೇ ತಾರೀಕು ಮದುವೆ ನಿಶ್ಚಯವಾಗಿರುತ್ತದೆ ಇದೇ ಕಾರಣದಿಂದಾಗಿ ಸುಂದರವಾಗಿ ಕಾಣಿಸಿಕೊಳ್ಳಲು ಯುವತಿ 10 ದಿನ ಮೊದಲೇ ಬ್ಯೂಟಿ ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಂಡಿರುತ್ತಾರೆ. ಇದನ್ನು ಮಾಡಿಸಿಕೊಂಡ ಮರುದಿನವೇ ಅವರಿಗೆ ಅಚ್ಚರಿಯೊಂದು ಕಾದಿರುತ್ತದೆ. ಅದೇನೆಂದರೆ, ಸುಂದರವಾಗಬೇಕಿದ್ದ ಮುಖ ವಿಕಾರವಾಗಿರುತ್ತದೆ.
ಫೇಶಿಯಲ್ ಮಾಡಿಸಿಕೊಂಡ ಕಾರಣ ಮುಖವೆಲ್ಲ ಸುಟ್ಟಂತಾಗಿ ಕಪ್ಪಾಗುವುದಲ್ಲದೆ ಊದಿಕೊಂಡಿರುತ್ತದೆ. ಈ ವಿಚಾರವನ್ನು ತಿಳಿದ ಗಂಡಿನ ಕಡೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಲು ಮುಂದಾಗುತ್ತಾರೆ ನಂತರ ಯುವತಿಯು ಬ್ಯೂಟಿ ಪಾರ್ಲರ್ ಅವರ ವಿರುದ್ಧ ದೂರನ್ನು ದಾಖಲಿಸಿದ್ದು ಮಾತುಕತೆಯಲ್ಲಿ ರಜೆ ಮಾಡಿಕೊಂಡಿರುತ್ತಾರೆ. ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಆಗಿರುವುದು ಮೇಕಪ್ ಮಾಡುವ ಮೊದಲು ಅವರ ಚರ್ಮದ ಬಗ್ಗೆ ತಿಳಿಯಬೇಕು ಹಾಗೂ ಅವರು ಯಾವ ಕ್ರೀಮ್ಗಳನ್ನು ಬಳಸುತ್ತಿದ್ದಾರೆ ಎಂದು ಅರಿತು ಮೇಕಪ್ ಮಾಡಬೇಕು ಇಲ್ಲವಾದಲ್ಲಿ ಇಂತಹ ಸಮಸ್ಯೆಗಳು ಆಗುತ್ತವೆ ಎಂದು ತಿಳಿಸಿರುತ್ತಾರೆ. ಹಾಗೂ ಚಿಕಿತ್ಸೆ ನೀಡಿದ ಕೆಲವು ದಿನಗಳ ಬಳಿಕ ಮಹಿಳೆಯ ಮುಖ ಮೊದಲಿನಂತೆ ಆಗುವುದು ಎಂದು ವೈದ್ಯರು ಹೇಳಿರುತ್ತಾರೆ.
ಗಂಡಿನ ಕಡೆಯವರು ಯುವತಿಯ ಸಂಬಂಧಿಕರಾಗಿದ್ದ ಕಾರಣ ಈ ವಿಚಾರವನ್ನು ತಿಳಿದ ಮೇಲೆ ಮದುವೆಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ ನಂತರ ಮಾಡೋಣ ಎಂದು ಒಪ್ಪಿಕೊಂಡಿರುತ್ತಾರೆ.
ಒಟ್ಟಿನಲ್ಲಿ ಮಹಿಳೆಗೆ ಮೇಕಪ್ ಮಾಡಿದ ಅವಾಂತರದ ವಿಚಾರವೀಗ ವೈದ್ಯರು ನೀಡಿದ ಭರವಸೆಯ ಮೇಲೆ ಹಾಗೂ ಗಂಡಿನವರು ಪುನಹ ಮದುವೆಗೆ ಒಪ್ಪಿರುವ ಕಾರಣ ಈ ಪ್ರಕರಣವು ಸುಖಾಂತ್ಯ ಕಂಡಿದೆ ಎಂದು ಹೇಳಬಹುದು.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…