Latest

ಶರ್ಟ್ ನ ಕಾಲರ್ ಸರಿಪಡಿಸಿ ಕೊಂಡಿದ್ದಕ್ಕೆ ಹುಡುಗರ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ!

ಇಂಡಿ: ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ! ನಿನ್ನೆ ಸಾಯಂಕಾಲ ಸುಮಾರು ಆರು ಗಂಟೆಗೆ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಲಿತ ಯುವಕ ತಾನು ತನ್ನ ಶರ್ಟ್ ಕಾಲರ್ ಅನ್ನು ಸರಿಪಡಿಸಿ ಕೊಳ್ಳುವ ಸಮಯದಲ್ಲಿ, ಊರಿನ ಕೆಲವು ಸವರ್ಣಿಯರ ಗುಂಪೊಂದು, ನಮಗೆ ನೋಡಿ ಶರ್ಟ್ ಕಾಲರ ಏರಿಸುತ್ತಿಯಾ.?, ಎಂದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಬುಯ್ಯಾರ ಗ್ರಾಮದಲ್ಲಿ ನಡೆದಿದೆ.
ಅದಲ್ಲದೆ ಪಿಸ್ತೂಲ್ ಗನ್, ಮಚ್ಚು, ತೋರಿಸಿ. ನೀನೇನಾದರಾ ಪೊಲೀಸ್ ಹತ್ರ ಹೋದ್ರೆ ನಿನಗೂ ನಿನ್ನ್ ತಮ್ಮನಿಗೂ ಶೂಟ್ ಮಾಡುತ್ತೇನೆ ಎಂದು ಧಮ್ಕಿ ಹಾಕಿರುವ ಬಗ್ಗೆ ಸ್ವತಃ ಯುವಕನೇ ಹೇಳಿಕೊಂಡಿದ್ದಾನೆ. ಹಾಗೂ ಜಾತಿ ನಿಂದನೆ, ಮಾಡುವ ಜನರು ಇನ್ನು ಈ ದೇಶದಲ್ಲಿ ಇದಾರಾ… ಎಂದು ನೊಂದ ಯುವಕರು ಕೇಳಿದರೆ.
ನಾವು ಮೊದಲಾದರೂ ಒಂದು ಸಲ. ಅವರ ಮೇಲೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರುಕೊಟ್ಟಿರುತ್ತೇವೆ. ನಿನ್ನೆ ಸಹ ತಳವಾರ ಸಮಾಜದ ಯುವಕರ ಮೇಲೆ ಅಂದರೆ ಮಲ್ಲು ಕುಮಸಗಿ, ಪ್ರೀತಮ ಕುಮಸಗಿ, ರವಿ ಪಂಚಾಯತಿ. ಮಂಜುನಾಥ ಪಂಚಾಯತಿ, ಸಚಿನ ನಾಟಿಕಾರ, ಪರಶುರಾಮ ನಾಟಿಕಾರ, ರವಿ ದೊಡ್ಡಮನಿ, ಇನ್ನು ಅನೇಕರ ಮೇಲೆ ದೂರು ಕೊಟ್ಟಿದ್ದೇವೆ, ಆದರು ಇನ್ನು ಕ್ರಮ ಕೈಗೊಂಡಿಲ್ಲ. ಇದೆ ರೀತಿ ಆದರೆ ನಾವು ವಿಜಯಪುರ ಎಸ್, ಪಿ ಆಫೀಸ್ ಗೆ ಹೋಗುತ್ತೇವೆ ಎಂದು. ನೊಂದ ರೇವಮ್ಮ ಅರಕೇರಿ, ಆಕಾಶ ಅರಕೇರಿ, ಶ್ರೀಕಾಂತ ಅರಕೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಸಂಗಪ್ಪ ಚಲವಾದಿ

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago