ಇಂಡಿ: ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ! ನಿನ್ನೆ ಸಾಯಂಕಾಲ ಸುಮಾರು ಆರು ಗಂಟೆಗೆ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಲಿತ ಯುವಕ ತಾನು ತನ್ನ ಶರ್ಟ್ ಕಾಲರ್ ಅನ್ನು ಸರಿಪಡಿಸಿ ಕೊಳ್ಳುವ ಸಮಯದಲ್ಲಿ, ಊರಿನ ಕೆಲವು ಸವರ್ಣಿಯರ ಗುಂಪೊಂದು, ನಮಗೆ ನೋಡಿ ಶರ್ಟ್ ಕಾಲರ ಏರಿಸುತ್ತಿಯಾ.?, ಎಂದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಬುಯ್ಯಾರ ಗ್ರಾಮದಲ್ಲಿ ನಡೆದಿದೆ.
ಅದಲ್ಲದೆ ಪಿಸ್ತೂಲ್ ಗನ್, ಮಚ್ಚು, ತೋರಿಸಿ. ನೀನೇನಾದರಾ ಪೊಲೀಸ್ ಹತ್ರ ಹೋದ್ರೆ ನಿನಗೂ ನಿನ್ನ್ ತಮ್ಮನಿಗೂ ಶೂಟ್ ಮಾಡುತ್ತೇನೆ ಎಂದು ಧಮ್ಕಿ ಹಾಕಿರುವ ಬಗ್ಗೆ ಸ್ವತಃ ಯುವಕನೇ ಹೇಳಿಕೊಂಡಿದ್ದಾನೆ. ಹಾಗೂ ಜಾತಿ ನಿಂದನೆ, ಮಾಡುವ ಜನರು ಇನ್ನು ಈ ದೇಶದಲ್ಲಿ ಇದಾರಾ… ಎಂದು ನೊಂದ ಯುವಕರು ಕೇಳಿದರೆ.
ನಾವು ಮೊದಲಾದರೂ ಒಂದು ಸಲ. ಅವರ ಮೇಲೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರುಕೊಟ್ಟಿರುತ್ತೇವೆ. ನಿನ್ನೆ ಸಹ ತಳವಾರ ಸಮಾಜದ ಯುವಕರ ಮೇಲೆ ಅಂದರೆ ಮಲ್ಲು ಕುಮಸಗಿ, ಪ್ರೀತಮ ಕುಮಸಗಿ, ರವಿ ಪಂಚಾಯತಿ. ಮಂಜುನಾಥ ಪಂಚಾಯತಿ, ಸಚಿನ ನಾಟಿಕಾರ, ಪರಶುರಾಮ ನಾಟಿಕಾರ, ರವಿ ದೊಡ್ಡಮನಿ, ಇನ್ನು ಅನೇಕರ ಮೇಲೆ ದೂರು ಕೊಟ್ಟಿದ್ದೇವೆ, ಆದರು ಇನ್ನು ಕ್ರಮ ಕೈಗೊಂಡಿಲ್ಲ. ಇದೆ ರೀತಿ ಆದರೆ ನಾವು ವಿಜಯಪುರ ಎಸ್, ಪಿ ಆಫೀಸ್ ಗೆ ಹೋಗುತ್ತೇವೆ ಎಂದು. ನೊಂದ ರೇವಮ್ಮ ಅರಕೇರಿ, ಆಕಾಶ ಅರಕೇರಿ, ಶ್ರೀಕಾಂತ ಅರಕೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಸಂಗಪ್ಪ ಚಲವಾದಿ
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…
ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…
ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ್ಯಾಪಿಡೋ ಚಾಲಕನಿಂದ ಮಹಿಳೆಯ…
ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…
ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…