Latest

79ರ ವೃದ್ಧನ ಮೇಲೆ ಹನಿ ಟ್ರ್ಯಪ್ ಗೆ ಮುಂದಾದ ಆಂಟಿಗೆ ಅದೃಷ್ಟ ಕೈಕೊಡ್ತು.

79ರ ವಯಸ್ಸಿನ ವೃದ್ಧನಿಗೆ ಹನಿ ಟ್ರ್ಯಾಪ್ ಮಾಡಲು ಮಧ್ಯಮ ವಯಸ್ಸಿನ ಮಹಿಳೆ ಮುಂದಾಗಿರುವ ಘಟನೆ ಕೆಟಿಜಿನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
79ರ ವಯಸ್ಸಿನ ವೃದ್ಧನಾದ ಶಿವಕುಮಾರ್ನ ಬಳಿ ಯಶೋದ ಎಂಬ ಮಹಿಳೆ ಕಷ್ಟವಿದೆ ಎಂದು ಹೇಳಿ 85,000ಗಳನ್ನು ಹಣ ಪಡೆದಿರುತ್ತಾಳೆ. ಹಣ ಹಿಂತಿರುಗಿಸಬೇಕಾದಂತಹ ಗಡವು ಮುಗಿದ ನಂತರವೂ ಸಹ ಹಣ ಹಿಂತಿರುಗಿಸಿರುವುದಿಲ್ಲ.
ಇದೇ ವಿಚಾರವಾಗಿ ಶಿವಕುಮಾರ್ ಯಶೋದಾಳ ಬಳಿ ಪದೇಪದೇ ಸಾಲ ಮರುಪಾವತಿಸಲು ಕೇಳಿರುತ್ತಾರೆ.
ಇದರಿಂದ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಯಶೋಧ ವೃದ್ಧನ ಮೇಲೆ ಹನಿ ಟ್ರ್ಯಾಪ್ ಮಾಡಲು ಮುಂದಾಗಿದ್ದಾಳೆ.
ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಯಶೋಧ ವಾಸವಿದ್ದು ಸಾಲ ಹಿಂದಿರುಗಿಸುವುದಾಗಿ ಹೇಳಿ ಶಿವಕುಮಾರನನು ಮನೆಗೆ ಕರೆಸಿಕೊಂಡಿರುತ್ತಾಳೆ.
ಮನೆಗೆ ಬಂದ ಶಿವಕುಮಾರ ನಿಗೆ ಜ್ಯೂಸ್ ನಲ್ಲಿ ಆಮೇಲೆ ಬರುವ ಔಷಧಿಯನ್ನು ಹಾಕಿ ಆತನನ್ನು ಬೆತ್ತಲೆ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿರುತ್ತಾಳೆ.
ಇದೇ ಚಿತ್ರಗಳನ್ನು ಇಟ್ಟುಕೊಂಡು ನಂತರ ವೃದ್ಧನ ಬಳಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ.
ಆತಂಕಗೊಂಡ ವೃದ್ಧ ಕೆಟೀಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಯಶೋದಾಳನ್ನು ಬಂಧಿಸಿದ್ದಾರೆ.

ಕೊಟ್ಟ ಸಾಲವನ್ನು ಹಿಂದಿರುಗಿಸದೆ ಹನಿ ಟ್ರ್ಯಾಪ್ ನ ಮೂಲಕ ಸಾಕಷ್ಟು ಹಣ ಮಾಡುವ ಆಸೆಗೆ ಬಿದ್ದ ಆಂಟಿ ಈಗ ಕಂಬಿಯಿಂದ.

ಭ್ರಷ್ಟರ ಬೇಟೆ

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

17 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

18 hours ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

18 hours ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 days ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

2 days ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

2 days ago