ಬಿಹಾರ್ ರಾಜ್ಯದ ಸೀತಾರ್ಮಹಿಯ ಮಲ್ಲಾಹಿ ಗ್ರಾಮದಲ್ಲಿ ನಡೆದ ಮಾನವೀಯತೆ ಮರೆತ ಘಟನೆ ಇಡೀ ದೇಶದ ಗಮನಸೆಳೆದಿದೆ. ಒಂದಷ್ಟು ಚಾಕಲೇಟ್ ಕದ್ದಿದ್ದಾರೆ ಎಂಬ ಆರೋಪದ ಮೇಲೆ ಐದು ಬಾಲಕರನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿರುವ ಕ್ರೂರ ಕೃತ್ಯ ನಡೆಯಿತು.

ಬುಧವಾರ ಸಂಜೆ ದಿನಸಿ ಅಂಗಡಿಯೊಂದರಲ್ಲಿ ಕೆಲವು ಬಾಲಕರು ಚಾಕಲೇಟ್ ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಾದ ನಾಗೇಶ್ವರ ಶರ್ಮಾ, ಐದು ಬಾಲಕರನ್ನು ತನ್ನ ಅಂಗಡಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ವೇಳೆ ಒಬ್ಬ ಬಾಲಕ ತಪ್ಪು ಮಾಡಿಕೊಂಡಿದ್ದು, ಈ ವಿಚಾರದಿಂದ ಮತ್ತಷ್ಟು ಆಕ್ರೋಶಗೊಂಡ ಶರ್ಮಾ, ಐದು ಮಕ್ಕಳ ಬಟ್ಟೆ ಬಿಚ್ಚಿಸಿ, ಅವರ ಮುಖಕ್ಕೆ ಬಿಳಿ ಸುಣ್ಣ ಹಚ್ಚಿಸಿ, ಚಪ್ಪಲಿಯನ್ನು ಕುತ್ತಿಗೆಗೆ ಹಾರವಂತೆ ಹಾಕಿದ್ದಾರೆ. ಬಳಿಕ ಎಲ್ಲರನ್ನು ಒಂದೇ ಹಗ್ಗದಲ್ಲಿ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ.

ಘಟನೆ ಇಲ್ಲಿಯಲ್ಲೇ ನಿಂತಿಲ್ಲ. ಈ ದೃಶ್ಯಗಳನ್ನು ಶರ್ಮಾ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ತಮ್ಮ ಮಗ ಪ್ರಕಾಶ್ ಕುಮಾರ್ ಮತ್ತು ಗ್ರಾಮಸ್ಥ ಕೃಷ್ಣ ಕುಮಾರ್ ಸಹಾಯದಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರ ಆಕ್ರೋಶ ಜೋರಾಗಿ ವ್ಯಕ್ತವಾಯಿತು. ಸ್ಥಳೀಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈಗಾಗಲೇ ನಿಂದಿತರಾದ ನಾಗೇಶ್ವರ ಶರ್ಮಾ, ಅವರ ಮಗ ಪ್ರಕಾಶ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಈ ಘಟನೆಯಿಂದ ಮಕ್ಕಳ ಮೇಲಿನ ಹಿಂಸೆ ಮತ್ತು ಅವಮಾನಕಾರಿ ನಡೆಗಳನ್ನು ತಡೆಗಟ್ಟಲು ಕಠಿಣ ಕ್ರಮ ಅಗತ್ಯ ಎಂಬ ಚರ್ಚೆಗೆ ಮೂಲ ನೀಡಿದ್ದು, ಕಾನೂನಿನಡಿಯಲ್ಲಿ ತಕ್ಷಣದ ಕಠಿಣ ಶಿಕ್ಷೆ ನೀಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!