ಧಾರವಾಡ: ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದ ದಿನವೇ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಉತ್ತರ ವಲಯದ ಮುಖ್ಯ ಇಂಜಿನಿಯರ್ ಎಚ್. ಸುರೇಶ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ತಂಡ ಶನಿವಾರದಂದು ಆಕಸ್ಮಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿ ದಾಖಲೆಗಳು ಮತ್ತು ಅಮೂಲ್ಯ ವಸ್ತುಗಳು ಪತ್ತೆಯಾಗಿವೆ.

ನಿವೃತ್ತಿ ಸಂಭ್ರಮಕ್ಕೆ ಶಾಕ್ ನೀಡಿದ ಲೋಕಾಯುಕ್ತ

ನಿವೃತ್ತಿ ನಿಮಿತ್ತ ಎಚ್. ಸುರೇಶ್ ಅವರ ಧಾರವಾಡದ ಸರ್ಕಾರಿ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂತಹ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ಮನೆ ಹಾಗೂ ಕಚೇರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಲ್ಲ ಸಮಾರಂಭಗಳು ತಕ್ಷಣವೇ ಸ್ಥಗಿತಗೊಂಡವು.

ದಾಳಿಯಲ್ಲಿ ಪತ್ತೆಯಾದ ಆಸ್ತಿಗಳ ವಿವರ

ದಾಳಿಯ ವೇಳೆ ಲೋಕಾಯುಕ್ತ ಅಧಿಕಾರಿಗಳು ಸಾಕಷ್ಟು ಪ್ರಮಾಣದ ಆಸ್ತಿ ದಾಖಲೆಗಳು ಹಾಗೂ ನಗದು, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಸಿಕ್ಕಿರುವ ಪ್ರಮುಖ ವಸ್ತುಗಳು ಇಂತಿವೆ:

₹76,600 ನಗದು

₹21.58 ಲಕ್ಷ ಮೌಲ್ಯದ ಚಿನ್ನಾಭರಣ

₹2.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ

₹13.44 ಲಕ್ಷ ಮೌಲ್ಯದ ಎರಡು ಫ್ಲಾಟ್‌ಗಳ ದಾಖಲೆ

₹50 ಲಕ್ಷ ಮೌಲ್ಯದ ಆರು ವಾಣಿಜ್ಯ ಮಳಿಗೆಗಳ ದಾಖಲೆ

₹2.60 ಕೋಟಿ ಮೌಲ್ಯದ ವಾಸದ ಮನೆ

₹35.36 ಲಕ್ಷ ಮೌಲ್ಯದ 11 ಎಕರೆ ಕೃಷಿ ಭೂಮಿ

₹1.65 ಕೋಟಿ ಮೌಲ್ಯದ ನಿಗದಿತ ಠೇವಣಿ ಪತ್ರಗಳು

₹26 ಲಕ್ಷ ಮೌಲ್ಯದ ಎರಡು ಕಾರುಗಳು

₹25 ಲಕ್ಷ ಮೌಲ್ಯದ ಪೀಠೋಪಕರಣಗಳು

ಒಟ್ಟು ಜಪ್ತಿ ಮಾಡಿದ ಆಸ್ತಿಯ ಮೌಲ್ಯವು ₹3.31 ಕೋಟಿ ವರೆಗೆ ತಲುಪಿದೆ.

ಅಕ್ರಮ ಆಸ್ತಿ ಗಳಿಕೆ: ಪ್ರಕರಣ ದಾಖಲು

ಅಧಿಕಾರಿಯ ಆದಾಯಕ್ಕೆ ಹೋಲಿಸಿದರೆ 153.54% ಅಧಿಕ ಆಸ್ತಿ ಹೊಂದಿರುವುದು ದೃಢಪಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಪೊಲೀಸರು ಎಚ್. ಸುರೇಶ್ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪದಡಿ ಪ್ರಕರಣ ದಾಖಲಿಸಿ ಮುಂದಿನ ಹಂತದ ತನಿಖೆ ನಡೆಸುತ್ತಿದ್ದಾರೆ.

Related News

error: Content is protected !!