ಕೋಲಾರ ಗ್ರಾಮಾಂತರ ಪೊಲೀಸರಿಗೆ ಬಾತ್ಮಿದಾರರದಿಂದ ಬಂದ ಮಾಹಿತಿ ಮೇರೆಗೆ , ಕೋಲಾರ – ಶ್ರೀನಿವಾಸಪುರ ರಸ್ತೆಯಲ್ಲಿರುವ ಮಹರ್ಷಿ ಶಾಲೆಯ ಮುಂಭಾಗ ಒಬ್ಬ ವ್ಯಕ್ತಿಯು ಬ್ಯಾಗನ್ನು ಟಿ.ವಿಎಸ್. XL 100. ಸಂಖ್ಯೆ AP 03 BZ 0930 ದ್ವಿಚಕ್ರ ವಾಹನದಲ್ಲಿ ಗಂಜಾ ಇಟ್ಟುಕೊಂಡಿರುವುದು ಕಂಡು ಬಂದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆಸಾಮಿಯನ್ನ ವಶಕ್ಕೆ ಪಡೆದು ಅವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಶ್ರೀನಿವಾಸ ಅಲಿಯಾಸ್ ಶ್ರೀನಿವಾಸಲು ಬಿನ್ ಹನುಮಂತಪ್ಪ ವಯಸ್ಸು 45 ವರ್ಷ, ವಾಸ ಬಾಗೇಪಲ್ಲಿ ಗ್ರಾಮ ಪುಂಗನೂರು ತಾಲ್ಲೂಕು, ಎಂದು ತನ್ನ ಬಳಿ ಇದ್ದ ಗಾಂಜಾವನ್ನು ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದಾನೆ. ಪರಿಶೀಲನೆ ಮಾಡಿದಾಗ ಒಂದು ಪೇಪರ್ ನಲ್ಲಿ ಅಂದಾಜು 1,50, 000/- ಸಾವಿರ ರೂ ಬೆಳೆ ಬಾಳುವ ಗಾಂಜಾ ಹಾಗೂ ಡಿಜಿಟಲ್ ಮಾಪನ ಇರುವುದು ಪತ್ತೆಯಾಗಿದೆ, ಅರೋಪಿ ಮತ್ತು ಮಾಲು ಹಾಗೂ TVS XL100 ದ್ವಿಚಕ್ರ ವಾಹನವನ್ನು ಪೋಲಿಸರು ವಶಕ್ಕೆ ಪಡೆದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖೀಲ್ ಬಿ ಐಪಿಎಸ್‌ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರವಿಶಂಕರ್ ಮತ್ತು ಶ್ಜಗದೀಶ್ ರವರ ಮಾರ್ಗದರ್ಶನದಲ್ಲಿ ಎಂ.ಹೆಚ್. ನಾಗ್ತೆ ಪೊಲೀಸ್ ಉಪಾಧೀಕ್ಷಕರು ಕೋಲಾರ ಉಪ ವಿಭಾಗ ರವರ ನೇತೃತ್ವದಲ್ಲಿ ಪಿ.ಐ ಕಾಂತ್ ರಾಜ್ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ರವರು ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ: ರೋಷನ್ ಜಮೀರ್

Related News

error: Content is protected !!