ಹುಬ್ಬಳ್ಳಿ ಧಾರವಾಡ ಪೊಲೀಸರು ಮತ್ತೊಮ್ಮೆ ದೊಡ್ಡ ಬೇಟೆ ನಡೆಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು, ಮುಖ್ಯ ರಸ್ತೆಗಳ ಮೂಲಕ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 90 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿಕೊಂಡು, ಎಸಿಪಿ ಶಿವಪ್ರಕಾಶ್ ನಾಯ್ಕ್ ಹಾಗೂ ಇನ್ಸ್ಪೆಕ್ಟರ್ ಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಹಣವು ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದುದಾಗಿ ತಿಳಿದುಬಂದಿದ್ದು, ಹೆಚ್ಚಿನ ತನಿಖೆಗಾಗಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯು ಪೊಲೀಸರು ತೀವ್ರ ಪರಿಶೀಲನೆಯೊಂದಿಗೆ ನಡೆದಿದ್ದು, ಪೊಲೀಸ್ ತಂಡದ ತೀಕ್ಷ್ಣ ನಿರೀಕ್ಷಣೆಗೆ ಸಿಕ್ಕಿಬಿದ್ದ ಹಣವು ಪ್ರಸ್ತುತ ತನಿಖೆಯ ಅಡಿಯಲ್ಲಿ ಇದೆ.

error: Content is protected !!