ಕಲಬುರಗಿಯಲ್ಲಿ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿಯೊಬ್ಬಳು ಗಂಡನ ಎರಡು ಕಾಲು ಮುರಿಸುವಂತೆ ಸುಪಾರಿ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಕಲಬುರಗಿ ನಗರದ ಅತ್ತರ ಕಾಂಪೌಂಡ್ ಬಳಿಯಾಗಿದೆ.

ವೆಂಕಟೇಶ್ ಎಂಬಾತ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ, ಪತ್ನಿ ಉಮಾದೇವಿ ತೀವ್ರ ಕೋಪಗೊಂಡಿದ್ದಳು. ಪತಿಯ ವರ್ತನೆಗೆ ಬೇಸತ್ತಿದ್ದಾಳೆ, ಹೀಗಾಗಿ ಅವನನ್ನು ಸುಮ್ಮನಾಗಿಸಲು ಅವರ ಕಾಲು ಮುರಿಸುವ ಯೋಜನೆ ರೂಪಿಸಿದ್ದಾಳೆ. ಈ ಯೋಜನೆಗಾಗಿ ಆಕೆಯು ಆರಿಫ್, ಮನೋಹರ್, ಮತ್ತು ಸುನೀಲ್ ಎಂಬುವವರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದಾಳೆ.

ಯೋಜನೆ ಅನ್ವಯ, ಆರೋಪಿಗಳು ವೆಂಕಟೇಶನ್ನು ಗುರಿಯಾಗಿಸಿ ಅವನ ಎರಡು ಕಾಲುಗಳನ್ನು ಮುರಿದಿದ್ದಾರೆ. ಘಟನೆಯ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ಉಮಾದೇವಿ ಮತ್ತು ಮೂವರು ಸುಪಾರಿ ಕೊಲೆಗಾರರನ್ನು ಬಂಧಿಸಿದ್ದಾರೆ.

ಈ ಪ್ರಕರಣ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತಿ-ಪತ್ನಿಯ ವೈಯಕ್ತಿಕ ಕಲಹ ಇಷ್ಟು ದೂರ ಹೋಗುವುದು ಗಂಭೀರ ವಿಚಾರವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!