ಕೊಟ್ಟೂರು: ಸಾರ್ವಜನಿಕರಿಗೆ ಉಪಯೋಗವಾಗಲೆಂದು ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ ಶಾಸಕರ ಅನುದಾನದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಹೈ ಮಾಸ್ಟ್ ಲೈಟ್ ಕಂಬವನ್ನು ಸ್ಥಾಪಿಸಿದ್ದು,ಹೈ ಮಾಸ್ಟ್ ಲೈಟ್ ಕಂಬದಲ್ಲಿ ಬೆಳಕಿಲ್ಲದೆ ಖಾಲಿ ಕಂಬ ಹಾಗೆ ಬಿಟ್ಟಿರುವುದರಿಂದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಬೇಜವಾಬ್ದಾರಿ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಉಪಯೋಗ ಆಗಬೇಕಿರುವ ಮಾಸ್ಟ್ ಲೈಟ್ ಕಂಬವು ನಿರೂಪಾಯುಕ್ತವಾಗಿದೆ.

ಹೈ ಮಾಸ್ಟ್ ಲೈಟ್ ಕಂಬದಲ್ಲಿ ಇದುವರೆಗೂ ದೀಪ ಜೋಡಣೆಯಾಗಿಲ್ಲ 2024 ರ ಇಸವಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಹೈ ಮಾಸ್ಟ್ ಲೈಟ್ ಕಂಬವೂ ಒಂದು ವರ್ಷ ಕಳೆದರೂ ಬೆಳಕು ಕಾಣದೆ ಇರುವುದು ಈ ಗ್ರಾಮದ ದುರ್ದೈವ.
ನಿತ್ಯ ಓಡಾಡುವ ಸಾರ್ವಜನಿಕರು ವಿದ್ಯಾರ್ಥಿಗಳು ದಿನಾಲು ಇಡೀ ಶಾಪ ಹಾಕುತ್ತಿದ್ದಾರೆ.ಈ ಪತ್ರಿಕೆ ಮೂಲಕವಾದರೂ ಸಂಬಂಧಪಟ್ಟವರು ಎಚ್ಚೆತ್ತುಗೊಳ್ಳಲಿ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಿದ್ದಾರೆ. ವರದಿ: ಮಣಿಕಂಠ. ಬಿ

error: Content is protected !!